ಗುರುವಾರ, ಅಕ್ಟೋಬರ್ 19, 2017

ಅವರವರು ಕಂಡಂತೆ…!!

                ಇವತ್ತು ನಾನು ನಿಮಗೆ ಹೇಳಹೊರಟಿರುವ ವಿಷಯ ನನ್ನ ಗೆಳಯ ರಂಗನಾಥನದ್ದು. ಚಿಕ್ಕಂದಿನಿದಲೂ ಒಟ್ಟಿಗೆ ಆಡಿ ಬೆಳೆದ ನನ್ನ ಬಾಲ್ಯ ಗೆಳೆಯ ಅವನು. ಅಕ್ಕ-ಪಕ್ಕದ ಮನೆ ಅಲ್ಲದಿದ್ದರೂ ಸಮಾನ ಅಭಿರುಚಿ ಹೊಂದಿದ್ದವರು ನಾವು. ಆದರೆ ಬರುಬರುತ್ತ, ಆತ ಆಟದ ಕಡೆಗೆ ಹೆಚ್ಚು ಒಲವು ತೋರಿಸಿ ಕ್ರೀಡಾ ಚಾಂಪಿಯನ್ ಆಗುತ್ತಾ ಬಂದರೆ , ನನ್ನ ಒಲವು ಸಾಹಿತ್ಯದ ಕಡೆಗೆ ವಾಲಿತು. ಎಷ್ಟಾದರೂ “ಲೋಕೋ ಭಿನ್ನ ರುಚಿ ಅಲ್ಲವೇ?”
                ಆದರೆ ನಮ್ಮಲ್ಲಿ ಸಮಾನವಾದ ವಿಚಾರ ಒಂದಿತ್ತು. ಅದು ನಮ್ಮ ಹುಟ್ಟುಹಬ್ಬ. ಏಳನೇ ತರಗತಿಯವರೆಗೂ ಒಂದೇ ಶಾಲೆಯಲ್ಲಿ ಕಲಿತ ನಾವು ಪ್ರೌಢಶಾಲಾ ಓದಿಗೆ ಬೇರೆ ಶಾಲೆಗೆ ಸೇರಿಕೊಂಡೆವು. ಆದರೆ ಪ್ರತಿ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ, ನಂತರ ಪಿ.ಯು ಶಿಕ್ಷಣಕ್ಕೆ ಒಂದೇ ಕಾಲೇಜಿನಲ್ಲಿ ಸೇರಿದೆವು. ಅದುವರೆಗೂ ಕನ್ನಡ ಮಾದ್ಯಮದಲ್ಲಿಯೇ ಓದಿದ್ದರೂ, ಅಪ್ಪ-ಅಮ್ಮನ ಆಸೆಯಂತೆ, ನಾನು ಪಿ.ಯು.ಸಿ ಶಿಕ್ಷಣವನ್ನು ಆಂಗ್ಲ ಮಾಧ್ಯಮದ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಿದೆ. ರಂಗನಾಥನನ ಅಣ್ಣ ಈಗಾಗಲೇ  ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.ಈಗಾಗಲೇ ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.
          “ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧಾರ ಮಾಡುವುದಿಲ್ಲ”ವೆಂದು ನಾವು ವಾದ ಮಾಡಿದರೂ, ಕ್ರಮೇಣ ನಾವು ನಮ್ಮ ನಿರ್ಧಾರ ಬದಲಿಸಿ, ಇಬ್ಬರೂ ಆ ವರ್ಷದ ಸಪ್ಲಿಮೆಂಟ್ ಪರೀಕ್ಷೆ ತೆಗೆದುಕೊಳ್ಳುತ್ತೇವೆಂದು ಟ್ಯೂಷನ್ ಗೆ ಹೋಗಲು ತೀರ್ಮಾನ ಮಾಡಿ ಮನೆಯವರ ಒಪ್ಪಿಗೆ ಪಡೆದುಕೊಂಡೆವು.
          ನಾನು ಟ್ಯೂಷನ್ ಗೆ ಹೋಗುತ್ತಿದ್ದರೂ ರಂಗನಾಥ ಬರುತ್ತಲೇ ಇರಲಿಲ್ಲ. ಅವನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಎರಡು-ಮೂರು ದಿನ ಕಳೆದರೂ ಅವನ ಪತ್ತೆಯೇ ಇಲ್ಲ. ಕೊನೆಗೆ ನಾನು ಅವರ ಮನೆಗೆ ಹೋಗಿ ಅವನನ್ನು ಬೈದು, ಟ್ಯೂಷನ್ ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿ ಬೆಳಗ್ಗೆಯೇ ಅವನ ಮನೆಗೆ ಹೋದೆ. ಅಲ್ಲಿ ನನಗೆ ಕಂಡ ದೃಶ್ಯ ನನಗೆ ಜೀವನವಿಡೀ ಮರೆಯಲು ಸಾಧ್ಯವಿಲ್ಲ. ಅವನ ಫೋಟೋಗೆ ಹಾಕಿದ ಹಾರ ದಂಗುಬಡಿಸಿತು. ಹೌದು ನನ್ನ ಗೆಳೆಯ ಎಂದು ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದ.
          ನನಗೆ ಅದಕ್ಕಿಂತ ಹೆಚ್ಚಿನ ಆಶ್ಚರ್ಯ ತಂದದ್ದು ಅವನ ಸಾವಿನ ಕಾರಣ. ಅಂದು ಬೆಳಿಗ್ಗೆಯೇ ಮನೆಗೆ ಹಬ್ಬದ ಸಾಮಾನು ತರಲು ಹೊರಟ ರಂಗನಾಥ ಅವತ್ತು ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದ. ಆಗಲೇ ಅವನ ಮೊಬೈಲ್ ಗೆ ಒಂದು ಕರೆ ಬಂದಿತ್ತು. ಆ ಕರೆಯನ್ನು ಅವನ ಅಣ್ಣ ಸ್ವೀಕರಿಸಿದ.ಆ ಕರೆಯ ಸಾರಾಂಶ ಇಷ್ಟು: “ನಿಮ್ಮ ಮಗ ನಮ್ಮ ಮೊಬೈಲ್ ಅಂಗಡಿಯಿಂದ ಮೊಬೈಲ್ ಕದ್ದಿದ್ದಾನೆ. ಆದ್ದರಿಂದ ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಇನ್ನಾದರೂ ನಿಮ್ಮ ಮಗನಿಗೆ ಒಳ್ಳೆಯ ಬುದ್ದಿ ಕಲಿಸಿ”. ಇದಾದ ನಂತರ ಅವನ ಅಣ್ಣ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ. ಅಪ್ಪ-ಅಮ್ಮನಿಗೂ ವಿಷಯ ತಿಳಿಸಿದಾಗ, ಅವನ ತಾಯಿ “ನಮ್ಮ ಮನೆಯ ಮರ್ಯಾದೆ ತೆಗೆದ,ಇಷ್ಟು ದಿನದಿಂದ ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನೆಲ್ಲ ಬೀದಿ ಪಾಲು ಮಾಡಿದೆ.”ಎಂದು ರಂಗನಾಥನನ್ನು ಹೊಡೆದರು. ಅವನು ಎಷ್ಟು ಹೇಳಿದರೂ ಕೇಳದೆ ಅವನನ್ನು ನಿಂದಿಸಿದರು.
                 ಇಷ್ಟೆಲ್ಲಾ ನಡೆದ ನಂತರ, ರಾತ್ರಿ ರಂಗನಾಥ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಹಬ್ಬದ ಮನೆ ಅಂದು ಮಸಣವಾಯಿತು.
                       ಆ ಸಾವಿನ ನಂತರ ತಿಳಿದುಬಂದದ್ದೇನೆಂದರೆ, ಆ ಕರೆ ಆತನ ಗೆಳೆಯರು ಮಾಡಿದ ಫ್ರಾಂಕ್ ಕಾಲ್ ಆಗಿತ್ತು. ಇಷ್ಟಕ್ಕೂ “ಪಿ.ಯು.ಸಿ ಪರೀಕ್ಷೆಯ ಫಲಿತಾಂಶಕ್ಕೇ ತಲೆಕೆಡಿಸಿಕೊಳ್ಳದ ಆತ ಇದಕ್ಕೆ ಮನನೊಂದನೆ,,,? ಆತ್ಮ ಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾದನೆ?”
“ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದಾತ ನಿಜ ಜೀವನದಲ್ಲಿ ಸೋತನೆ? ತನ್ನ ಸಾವಿಗೆ ತಾನೇ ಕಾರಣನೇ ? ”
“ತಮಾಷೆ ಹೋಗಿ ಅಮಾಸೆಯಾಯಿತೆ? ಐದು ನಿಮಿಷ ತಮಾಷೆ ಮಾಡಲು ಹೋಗಿ ಆತನ ಗೆಳೆಯರೇ ಆತನ ಪಾಲಿಗೆ ಮೃತ್ಯುವಾದರೇ?”
“ಮನೆಯವರು ಮಗ ತಪ್ಪು ಮಾಡಿದ್ದನೆಂದು ಬೈದದ್ದು ತಪ್ಪೇ? ಅಥವಾ ಮಗನನ್ನೇ ನಂಬದೇ ತಪ್ಪು ಮಾಡಿದರೆ? ತಾಯ್ತಂದೆಯರೆ ಅವನ ಪಾಲಿನ ಯಮದೂತರಾದರೇ? ”
“ಆತನ ಅಣ್ಣ ಮೊಬೈಲನ್ನು ಆ ಕ್ಷಣಕ್ಕೆ ಸ್ವಿಚ್ ಆಫ್ ಮಾಡದೆ ಇಟ್ಟಿದ್ದರೆ ನಿಜ ತಿಳಿಯುತ್ತಿತ್ತೇ? ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡದೆ ಆತ ತಪ್ಪು ಮಾಡಿದನೇ?ಆತನ ಅಣ್ಣನೆ ಆತನ ಸಾವಿನ ಪಾಶವಾದನೇ?”
ಕಾರಣ ಹುಡುಕುತ್ತ ಹೊರಟರೆ ನೂರೆಂಟು ಸಿಗುತ್ತವೆ ಎಲ್ಲಾ “ಅವರವರು ಕಂಡಂತೆ…” ಆದರೆ ಸತ್ತವರು ಮರಳಿ ಬರುವರೆ…?
ಯುವ ಜನತೆ ದುರ್ಬಲ ಮನಸ್ಸಿನವರಗದೆ, ತಾಯ್ತಂದೆ ತಮ್ಮ ಮಕ್ಕಳನ್ನು ನಂಬಿದರೆ, ಫ್ರಾಂಕ್ ಕಾಲ್ ಮಾಡದೆ, ಬೇರೆಯವರನ್ನು ಸಾವಿನ ದವಡೆಗೆ ತರುವಷ್ಟು ತಮಾಷೆ ಮಾಡದೆ, ಕ್ಷಣಕಾಲ ತಾಳ್ಮೆಯಿಂದ ಯೋಚಿಸಿದರೆ ಇನ್ನಾದರೂ ಎಷ್ಟೋ ರಂಗನಾಥನ ಸಾವು ತಪ್ಪುತ್ತದೆ
                                                                                                                   -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ