ಶನಿವಾರ, ಜೂನ್ 23, 2018

ಅಂತರಗಳ ಅಂತರಂಗ

ಹಸಿರು ಸಿರಿ, ಹೊಲ-ಗದ್ದೆಗಳ ಸಾಲು, ಶುದ್ಧವಾದ ಗಾಳಿ, ರೈತನೆಂಬ ಅನ್ನದಾತ, ತುಂಬಿದ ಕೆರೆ-ಕಟ್ಟೆಗಳು, ಸ್ವಚ್ಛಂದವಾಗಿ ಆಡುತ್ತಿರುವ ಪುಟಾಣಿಗಳು ಇದು ಹಳ್ಳಿ. ಬೆಂಕಿಪೊಟ್ಟಣದಂತೆ ಒಂದಕ್ಕೊಂದು ಅಂಟಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಒಂದು ಅಂತಸ್ತಿನ ಮೇಲೆ ಮತ್ತೊಂದು ಅಂತಸ್ತಿನಂತೆ ಪೇರಿಸಿಟ್ಟ ಬಹುಮಹಡಿ ಮನೆಗಳು, ಟ್ರಾಫಿಕ್ ನಲ್ಲಿ ಗಿಜಿಗುಡುವ ವಾಹನಗಳು ಇದು ಪಟ್ಟಣವೆಂದು ನಾವೇ ಊಹಿಸಿಕೊಂಡುಬಿಡುವ ದೃಶ್ಯಗಳು.
    ಆದರೆ ಗ್ರಾಮೀಣ ಮತ್ತು ಪಟ್ಟಣಗಳ ಜೀವನದ ಆಂತರ್ಯ ಈಗೀಗ ಬದಲಾಗುತ್ತಿದೆ. ಒಬ್ಬರಿಗೊಬ್ಬರು ನೆರವಾಗುತ್ತಾ, ಕಷ್ಟ-ಸುಖಗಳಲ್ಲಿ ಹಳ್ಳಿ ಜನರು ನೆರವಾಗುತ್ತಿದ್ದರೆ, ಈಗೀಗ ಪಟ್ಟಣಗಳಲ್ಲೂ ಈ ಸಂಸ್ಕೃತಿ ಮತ್ತೆ ನೆಲೆಸುತ್ತಿದೆ.
        ದೂರದರ್ಶನ ಮತ್ತು ಮುಂದುವರಿದ ಆಲೋಚನೆಗಳಿಂದ ಹಳ್ಳಿಯ ಜನರು ಪಟ್ಟಣಗಳತ್ತ, ಆಢಂಬರದ ಜೀವನಕ್ಕೆಂದು ಮುಖ ಮಾಡುತ್ತಿದ್ದರೆ, ಪಟ್ಟಣದ ಜನರು ಕಲುಷಿತ ವಾತಾವರಣ ಮತ್ತು ಒತ್ತಡಗಳಿಂದ ಬೇಸತ್ತು ಹಳ್ಳಿಯ ಜೀವನದತ್ತ ಮುಖ ಮಾಡುತ್ತಿದ್ದಾರೆ.
     ಅತಿವೃಷ್ಠಿ-ಅನಾವೃಷ್ಠಿ, ಬೆಲೆಕುಸಿತ ಮುಂತಾದ ಕಾರಣಗಳಿಂದ ಬೇಸತ್ತ ರೈತನೆಂಬ ಕೃಷಿ ಬಿಡುವ ನಿರ್ಧಾರ ಮಾಡುತ್ತಿದ್ದರೆ, ರಾಸಾಯನಿಕ ತರಕಾರಿ ಮತ್ತು ಜಂಕ್ ಫುಡ್ ಗಳಿಂದ ಬೇಸತ್ತ ಪಟ್ಟಣದ ಮಂದಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದ್ದಾರೆ.
     ಗ್ರಾಮೀಣ ಮತ್ತು ಪಟ್ಟಣದ ಜೀವನಗಳ ಅಂತರಗಳು ಸೃಷ್ಠಿಯಾದಂತೆ ಜನರ ಆಂತರ್ಯಗಳು ವಿರುದ್ಧ ಧ್ರುವಗಳತ್ತ ಆಕರ್ಷಿತವಾಗುತ್ತಿವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ