ಶನಿವಾರ, ಏಪ್ರಿಲ್ 6, 2019

ಯುಗಾದಿ ಹಬ್ಬ ಬಂದಾಗ...

[ವಸಂತ ಕಾಲ ಬಂದಾಗ ಹಾಡಿನ ಧಾಟಿ]

ಯುಗಾದಿ ಹಬ್ಬ ಬಂದಾಗ
ಬೇವು-ಬೆಲ್ಲ ಸವಿಯಲೇ ಬೇಕು
ಅಭ್ಯಂಜನ ಮಾಡಲೆ ಬೇಕು
ಬಾಳಲಿ ಕಹಿಯು ಬಂದಾಗ
ನಸುನಗುತ ಇರಬೇಕು
ಸುಖದೊಂದಿಗೆ ಅದನು ಸವಿಯಲೇ ಬೇಕು

ಯುಗದ ಆದಿಯ ಬಾಗಿಲಲಿ
ಹರುಷದಲಿ ನಿಂತಾಗ
ನಿನ್ನ ನಗುವ ನಾ ಕಾಣಬೇಕು ||ಯುಗಾದಿ||

ಹೊಸ ಬಟ್ಟೆ ತೊಟ್ಟು
ಹಣೆಗೆ ಕುಂಕುಮವಿಟ್ಟು
ಹೊಸತನದಿ ನೀ ಹರುಷದಿಂದಿರುವಾಗ||2||
ಕಾಣುವುದೇ ಚಂದ ನಿನ್ನನು

ಪೂಜೆ ಮಾಡುವಾಗ
ಆರತಿಯ ಬೆಳಗುವಾಗ
ಮುಗ್ದೆಯ ಹಾಗೆ, ಭಕ್ತೆಯ ಹಾಗೆ
ದೇವರ ನೀ ಪೂಜಿಸುವ ರೀತಿಯ..
ಮತ್ತೆ-ಮತ್ತೆ ಸವಿಯುವಾಸೆ
ನನ್ನ ಮುದ್ದಿನ ಕಣ್ಮಣಿ||ಯುಗಾದಿ||

ಕಹಿಯು ಮುಗಿದ ಮೇಲೆ
ಸಿಹಿ ಸವಿಯೊ ರೀತಿ ಬೇರೆ
ಹರುಷವು ಹಾಲಿ, ಕಷ್ಟವು ಖಾಲಿ||2||
ಮಾಗಿದೆ ಮನವು ಇದರಲಿ

ಇಂದು ಸುಖವು ಬಂತೆಂದು
ನಿನ್ನೆಯ ಕಹಿಯ ಮರೆತರೆ
ಕಣ್ಮಣಿ, ನಿನಗೆ ಅದರ ನೆನಪನು
ಮತ್ತೇಗೆ ಮಾಡಿ ಕೊಡಲಿ

ಓ... ಬಂದ ಕಹಿಯ ನುಂಗದೆ
ಸಿಹಿಯೇ ಬೇಕೆಂದು ಬಂದರೆ ನಾ ಎಲ್ಲಿ ಓಡಲಿ

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ