ಭಾನುವಾರ, ಮೇ 17, 2020

ಬಡಬಡಿಕೆ

ಕೆಲವೊಮ್ಮೆ ಕುರುಡಾಗಬೇಕು
ಸತ್ಯದ ಪರದೆ ಹೊದ್ದ ಸುಳ್ಳುಗಳಿಗೆ

ಹಲವೊಮ್ಮೆ ಕಿವುಡಾಗಬೇಕು
ಬಣ್ಣ ಬಣ್ಣದ ಮಾತುಗಳಿಗೆ

ಆಗಾಗ ಬರಡಾಗಬೇಕು
ಅತಿ ಭಾವುಕತೆಗೆ ಸ್ಪಂದಿಸದಂತೆ

ಕೆಲವೊಮ್ಮೆ ಮೂಕವಾಗಬೇಕು
ಇಷ್ಟವಾಗದ ಮಾತುಗಳಿಗೆ

ಹಲವೊಮ್ಮೆ ಸುಮ್ಮನಾಗಬೇಕು
ನಮ್ಮ ತಪ್ಪಿಲ್ಲದಿದ್ದರೂ ಒಪ್ಪಿಗೆ ಎಂಬಂತೆ

ಕೊನೆಗೊಮ್ಮೆ ಕಲ್ಲಾಗಬೇಕು 
ರಾಮಾಯಣದ ಅಹಲ್ಯೆಯಂತೆ

ಶಾಶ್ವತವಾಗಿ ಮರೆಯಾಗಿಬಿಡಬೇಕು
ಮತ್ತೆಂದೂ ಮರಳಿ ಬಾರದಂತೆ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ