ಸೋಮವಾರ, ಸೆಪ್ಟೆಂಬರ್ 11, 2017

ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆಯಲಿ ಸತ್ಯ-ಮಿಥ್ಯೆ

ಕಡು ಕಪ್ಪು ಕತ್ತಲು ಇಷ್ಟವೆಂದರೆ,
ಬೆಳಕು ಇಷ್ಟವಿಲ್ಲವೆಂದೇನಲ್ಲ.
ಬೆಳಕು ಬರುತ್ತದೆಯೆಂದು ಕಾಯಲೇಬೇಕು
ಹಾಗೆ ಕಾಯುತ್ತಲೇ ಇರುವವರು ಅನಾಥರು
ಬದುಕಿನ ಸತ್ಯ ತಿಳಿಯುವುದಕ್ಕಿಂತ,
ಇರುವ ಬದುಕೇ ಸುಖವಾಗಿರುವುದು.
ಸತ್ಯ ಸ್ವೀಕರಿಸಲೇಬೇಕು, ಇಲ್ಲವೆಂದಲ್ಲ
ಇಷ್ಟು ವರ್ಷ ಸತ್ಯವಿಲ್ಲದೆ ಬದುಕಿರಲೇ ಇಲ್ಲವೇ?
ಸುಖವಾಗಿ, ಎಲ್ಲರೊಳಗೊಂದಾಗಿ ಬದುಕಿದ್ದೆವು
ಬೆಳಕು, ಸತ್ಯದ ಬೆಳಕು ಬಂದಿತು
ಬೇರ್ಪಡಿಸಿತು ಎಲ್ಲರ ಒಗ್ಗಟ್ಟು.
ಬೆಳಕಿನಿಂದ ಒಗ್ಗಟ್ಟು ಒಡೆದು ಹೋಗುವುದಕ್ಕಿಂತ,
ಎಲ್ಲರಿಂದ ದೂರವಾಗುವುದಕ್ಕಿಂತ,
ಕಡುಕತ್ತಲೆಯೇ ಸಾಕಲ್ಲವೇ? ಅದೇ ಇಷ್ಟವಲ್ಲವೇ?
ಕತ್ತಲೆಂದರೆ ಅಜ್ಞಾನವಲ್ಲ, ರಾತ್ರಿಯಲ್ಲ
ಕತ್ತಲು ನಮ್ಮಂತೆ ನಾವು ಬದುಕಲು ಬಿಡುವ ಸೊಬಗು
ಕತ್ತಲು-ಬೆಳಕಿನ ಈ ಕಣ್ಣಾಮುಚ್ಚಾಲೆಯಲ್ಲಿ,
ಸತ್ಯ-ಮಿಥ್ಯೆಯಲ್ಲಿ ಕಾಣುವುದು ನಮ್ಮದೇ ಬದುಕು
                                               -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ