ಭಾನುವಾರ, ಫೆಬ್ರವರಿ 23, 2020

ಸೌಹಾರ್ದ ಭಾರತ

ಸೌಹಾರ್ದತೆಯಲಿ ಬದುಕಿ ಬಾಳಲು
ಅವಕಾಶ ನೀಡಿದೆ ತಾಯ್ನೆಲ ಭಾರತ

ಗಿರಿ-ಸಿರಿ, ತೊರೆಗಳ ಭವ್ಯ ನಾಡಲಿ
ಜಾತೀಯತೆಯನು ಮೆಟ್ಟಿ ನಿಲ್ಲುತ
ಒಂದಾಗಿ ಬಾಳಲು ಅವಕಾಶವಾಗಿದೆ
ಸ್ವತಂತ್ರ ಭಾರತದ ಭವ್ಯತೆಯಿಂದ

ಹಲವರ ತ್ಯಾಗ-ಬಲಿದಾನಗಳ ಕುರುಹಾಗಿ
ಶಾಂತಿಯತೆ-ಶೌರ್ಯಗಳ ಮಿಲನದಿಂದ
ಅಡಿಯಾಳಾಗಿ ಬಾಳುವುದರ ಬದಲಿಗೆ
ಸಿಕ್ಕಿದೆ ಬಹುತ್ವ ಭಾರತಕೆ ಸ್ವಾತಂತ್ರ್ಯ

ತ್ಯಾಗ-ಶಾಂತಿ-ಸಮೃದ್ಧತೆಯ ಕುರುಹಾಗಿ
ಹಾರುತಿಹ ಬಾವುಟ ಸಾರುತಲಿದೆ
ಬದುಕಿನ ಮಹತ್ವದ ಪಾಠವೊಂದನು
ಅದುವೇ ಮನುಜನ ಬಾಳಿನ ಸಮಾನತೆಯನು

ವಿವಿಧತೆಯಲ್ಲಿ ಏಕತೆಯ ಸಾರುತ
ಜನ-ಮನದಲ್ಲಿ ಸ್ಥಿರವಾಗಿ ನೆಲೆ ನಿಂತಿರುವ
ದೇಶದ ಕೀರ್ತಿಪತಾಕೆಯ ಎತ್ತಿ ಹಿಡಿಯಲು
ಸ್ವಾತಂತ್ರ್ಯ-ಸೌಹಾರ್ದತೆಯಲಿ ಬಾಳ್ವೆ ಮಾಡುವ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ