ಗುರುವಾರ, ಜುಲೈ 6, 2017

ಬದುಕಿನ ಆಸರೆ

ಜೀವನಧರ್ಮದ ಪಥದಲ್ಲಿ
ಬಳ್ಳಿಗಾಸರೆ ಮರವೇ
ಎಲ್ಲಿಂದಲೋ ತೇಲಿ ಬಂದ ಬೀಜ,
ಬೆಳೆದು ಮರವಾಯಿತು
ಬಳ್ಳಿಗೂ, ಜೀವರಾಶಿಗೂ ಆಸರೆಯಾಯಿತು
ಯಾರಿಗೂ ಬಗ್ಗದೆ ಹೆಮ್ಮರವಾಯಿತು
ಭಾವನೆಗೂ ಸ್ಪಂದಿಸದೆ ಕೊರಡಾಯಿತು
ಲತೆಗೋ ಮರವೇ ಜೀವ,ದೈವ
ಒಲವು ಹೀಗೇ ಅಲ್ಲವೇ?
ಬಯಸಿದವರಿಗೆ ಬಯಸಿದ್ದು ಸಿಗದು
ಸಿಕ್ಕವರಿಗೋ ಅಹಂಕಾರ
ಬಳ್ಳಿ ಬಾಡಿದರೂ, ಬಳಲಿದರೂ
ಮರಕ್ಕಾವ ಭಾರವೂ ಇಲ್ಲ,ಬಂಧವೂ ಇಲ್ಲ
ಮರಕ್ಕೆ ಇನಿತು ನೋವಾದರೂ
ಬಳ್ಳಿಯ ಬದುಕಿಗೇ ಕೊಡಲಿ ಪೆಟ್ಟು
ಆಸರೆಯ ಧರ್ಮವೇ ಈಗಲ್ಲವೇ?
                                      -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ