ಮಂಗಳವಾರ, ಜುಲೈ 18, 2017

ಸ್ವಾತಂತ್ರ್ಯ-ಪರಿಕಲ್ಪನೆ-ವಾಸ್ತವ

ಗೂಡು ಬಿಟ್ಟು ಈಚೆ ಬರದ ಹಕ್ಕಿಗೆ,
ಸ್ವಾತಂತ್ರ್ಯತೆಯ ಪರಿಕಲ್ಪನೆಯು
ಮನದಿ ಈಗ ಮೂಡಿದೆ

ರೆಕ್ಕೆ ಬಲಿತ ಹಕ್ಕಿಗೆ ಆಗಸವು ತೆರೆದಿದೆ
ಮನದ ಮೂಲೆಯಲ್ಲಿ ಈಗ,
ಬೆಳ್ಳಿಯ ಆಶಾಕಿರಣ ಮೂಡಿದೆ

ಮುಕ್ತ ಬಯಲು,ಸ್ವಚ್ಚಂದ ಆಕಾಶ
ಅಪಾಯ ತಿಳಿಯದ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದೆ
ನೀಲ ನಭದಲಿ, ಮುಕ್ತ ಮನದಿ ನಕ್ಕಿದೆ

ದೂರದಲ್ಲಿ ಹೊಂಚು ಹಾಕಿದೆ ಅಪಾಯವು
ಯಾವ ಜೀವಕೆ, ಎಲ್ಲಿ ಕುತ್ತು?
ಯಾವ ಪಾಶ, ಯಾರಿಗೇನು ಗೊತ್ತು?

ಸ್ವಾತಂತ್ರ್ಯ ಸಿಕ್ಕ ಖುಷಿಯಲಿ,
ಸಂಚು ಮಾಡಿ ಹೊಂಚು ಹಾಕೊ ಜನರ ನಡುವಲಿ
ಜಗವ ಮರೆತು ಹಾಡಿದೆ.

ಬಂಗಾರದ ಪಂಜರದಿ ಸಿಲುಕಿದೆ
ಬಹಳ ನಲುಗಿ, ಸೊರಗಿ ಸೋತಿದೆ
ಎಲ್ಲವನ್ನು ನಂಬುವ ತನ್ನ ಬುದ್ದಿಯ ಹಳಿದಿದೆ

ಒಳ್ಳೆಯತನಕೆ ಮೋಸವಿಲ್ಲ,
ಯಾರಿಂದಲೋ ಬಿಡುಗಡೆಯು ದೊರೆತಿದೆ.
ವಾಸ್ತವಿಕತೆಯ ಅರಿತಿದೆ.
ತನ್ನ ಹುಷಾರಲ್ಲಿ ತಾನು ನೀಲ ನಭದಿ ಬೆರೆತಿದೆ.
                                                  -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ