ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಯಾರೊಬ್ಬರೂ ಇಲ್ಲದಿದ್ದಾಗಲೂ ಭರವಸೆ ನೀಡಿ ಬೆನ್ನಿಗೆ ನಿಲ್ಲುತ್ತಾನೆ
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಸೋತಾಗ ಹೆಗಲು ಕೊಡಲು ಯಾವಾಗಲೂ ಅವನಿರುತ್ತಾನೆ
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನನ್ನ ನೆಚ್ಚಿನ ಹಾಡಿನ ಸಾಲುಗಳನ್ನು ಗುನುಗಲು ನೆನಪಿಸುತ್ತಾನೆ
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ತಪ್ಪಾದಾಗಲೆಲ್ಲಾ ತಿದ್ದಿ ನಡೆಸಲು ಅವನಿದ್ದಾನೆ
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಜಗತ್ತೇ ನನ್ನ ತಿರಸ್ಕರಿಸಿದರೂ, ತಿರಸ್ಕಾರ ತೋರದವನು ಅವನು
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನೀನೇ ಉತ್ತಮವೆನ್ನುತ್ತಾನೆ, ನಾನು ಉತ್ತಮವೆಂಬ ಮಾತು ನಿಜವಲ್ಲದಿದ್ದರೂ
ನಿರಾಶೆಯ ಕತ್ತಲೆಯ ಕೂಪದಲ್ಲಿರುವಾಗಲೂ
ಭರವಸೆಯ ಬೆಳಕು ತೋರಿ ಜೀವಂತವಾಗಿರಿಸುತ್ತಾನೆ
ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಬರೀ ಅಣ್ಣ ಎಂಬ ಪದಕ್ಕಿಂತ ಮಿಗಿಲಾದವನು
~Azubougu Chinwendu chukwudi
(ಭಾವಾನುವಾದ: ವಿಭಾ ವಿಶ್ವನಾಥ್)
ಮೂಲ ಕವಿತೆ:
A brother from another mother
-----------------------------------------------------
A brother from another mother
He got your back always when no one else did
A brother from another mother
He always there even when you are defeated
A brother from another mother
He reminded you of the lyrics to you favorite songs
A brother from another mother
He corrects you when you are wrong
A brother from another mother
He always there even when the world rejects you
A brother from another mother
Tells you that you are the best even when you are not
Even when you are in the mood of despondency
He gives u reason to keep your hopes alive
A brother from another mother
He is more than just a brother
~Azubuogu Chinwendu chukwudi
ಗುರುವಾರ, ಜುಲೈ 2, 2020
ಭಾನುವಾರ, ಜೂನ್ 28, 2020
ಗಜಲ್-೦3
ಕತ್ತಲೆಯ ಕೂಪದಲ್ಲಿದ್ದವಳಿಗೆ ಬೆಳಕು ತೋರಿದ್ದು ನೀ
ಭರವಸೆಯ ನಂದಾದೀಪವನು ಹಚ್ಚಿಟ್ಟದ್ದು ನೀ
ನಾಳೆಯ ಕುರಿತು ಆಸ್ಥೆಯೇ ಇರದವಳಿಗೆ
ಪ್ರಪಂಚದ ವಾಸ್ತವತೆಯ ಅರಿವು ಮೂಡಿಸಿದ್ದು ನೀ
ಅಜ್ಞಾನದ ಅಂಧಕಾರದಲಿ ಮುಳುಗಿ ಹೋಗಿದ್ದವಳಿಗೆ
ಜ್ಞಾನ ಜ್ಯೋತಿಯ ಹೊತ್ತಿಸಿ ಬದುಕ ಬೆಳಗಿಸಿದ್ದು ನೀ
ಜ್ಞಾನಕ್ಕಾಗಿ ಪರಿತಪಿಸುತ್ತಾ ಎಲ್ಲೆಲ್ಲೋ ಹುಡುಕುವಾಗ
ಅಕ್ಷರ ಭಿಕ್ಷೆಯ ಹಾಕಿ ಭರವಸೆ ಬೆಳಗಿಸಿ ಚೈತನ್ಯ ನೀಡಿದ್ದು ನೀ
ಹಣದ ಮೋಹಕೆ, ನಿನ್ನನ್ನೂ ಜ್ಞಾನವನ್ನು ಮಾರಿಕೊಳ್ಳದೆ
ದಿಟ್ಟತನದಿ ನಮ್ಮ ಪೀಳಿಗೆ ಮಾರಾಟಕ್ಕಿಲ್ಲ ಎಂದದ್ದು ನೀ
ಸುಳ್ಳು-ವಂಚನೆ ಅಪ್ರಾಮಾಣಿಕತೆಗೆ ತಲೆಬಾಗದೆ
ಪ್ರಾಮಾಣಿಕತೆಯಿಂದಿರು ಎಂದು ಸ್ಥೈರ್ಯ ತುಂಬಿದ್ದು ನೀ
ವಿಭಾಳ ಪ್ರತಿ ಹೆಜ್ಜೆಗೂ ಸಾಕ್ಷಿಯಾಗಿ ನಿಂತು
ಇಂದಿಗೂ ಪ್ರತಿಯೊಂದನೂ ಪ್ರೋತ್ಸಾಹಿಸುತ್ತಿರುವುದು ನೀ
~ವಿಭಾ ವಿಶ್ವನಾಥ್
ಭರವಸೆಯ ನಂದಾದೀಪವನು ಹಚ್ಚಿಟ್ಟದ್ದು ನೀ
ನಾಳೆಯ ಕುರಿತು ಆಸ್ಥೆಯೇ ಇರದವಳಿಗೆ
ಪ್ರಪಂಚದ ವಾಸ್ತವತೆಯ ಅರಿವು ಮೂಡಿಸಿದ್ದು ನೀ
ಅಜ್ಞಾನದ ಅಂಧಕಾರದಲಿ ಮುಳುಗಿ ಹೋಗಿದ್ದವಳಿಗೆ
ಜ್ಞಾನ ಜ್ಯೋತಿಯ ಹೊತ್ತಿಸಿ ಬದುಕ ಬೆಳಗಿಸಿದ್ದು ನೀ
ಜ್ಞಾನಕ್ಕಾಗಿ ಪರಿತಪಿಸುತ್ತಾ ಎಲ್ಲೆಲ್ಲೋ ಹುಡುಕುವಾಗ
ಅಕ್ಷರ ಭಿಕ್ಷೆಯ ಹಾಕಿ ಭರವಸೆ ಬೆಳಗಿಸಿ ಚೈತನ್ಯ ನೀಡಿದ್ದು ನೀ
ಹಣದ ಮೋಹಕೆ, ನಿನ್ನನ್ನೂ ಜ್ಞಾನವನ್ನು ಮಾರಿಕೊಳ್ಳದೆ
ದಿಟ್ಟತನದಿ ನಮ್ಮ ಪೀಳಿಗೆ ಮಾರಾಟಕ್ಕಿಲ್ಲ ಎಂದದ್ದು ನೀ
ಸುಳ್ಳು-ವಂಚನೆ ಅಪ್ರಾಮಾಣಿಕತೆಗೆ ತಲೆಬಾಗದೆ
ಪ್ರಾಮಾಣಿಕತೆಯಿಂದಿರು ಎಂದು ಸ್ಥೈರ್ಯ ತುಂಬಿದ್ದು ನೀ
ವಿಭಾಳ ಪ್ರತಿ ಹೆಜ್ಜೆಗೂ ಸಾಕ್ಷಿಯಾಗಿ ನಿಂತು
ಇಂದಿಗೂ ಪ್ರತಿಯೊಂದನೂ ಪ್ರೋತ್ಸಾಹಿಸುತ್ತಿರುವುದು ನೀ
~ವಿಭಾ ವಿಶ್ವನಾಥ್
ಭಾನುವಾರ, ಜೂನ್ 21, 2020
ಭಾವಯಾನ
ಭಾವಜೀವಿಯಾದ ಮನುಷ್ಯ ಇತ್ತೀಚೆಗೆ ಭಾವನೆಗಳನ್ನು ಮರೆತಂತೆ ಬದುಕುತ್ತಿದ್ದಾನೆ. ಭಾವನೆಗಳು, ಬಂಧಗಳು ಬೆಳೆಸಿಕೊಂಡಂತೆಲ್ಲಾ ಬೆಳೆಯುತ್ತಾ ಹೋಗುತ್ತವೆ. ಆದರೆ, ಭಾವನಾತ್ಮಕ ಸೆಳೆತಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ಭಾವಗಳೇ ಇಲ್ಲದ ಮನುಷ್ಯ ಇದ್ದಾನೆಯೇ..? ಯಾರಾದರೂ ಭಾವನೆಯೇ ಇಲ್ಲದೆ ಬದುಕಬಲ್ಲರೇ..?
ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.
ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?
ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.
ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ.
ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ.
ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.
ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.
~ವಿಭಾ ವಿಶ್ವನಾಥ್
ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.
ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?
ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.
ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ.
ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ.
ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.
ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.
~ವಿಭಾ ವಿಶ್ವನಾಥ್
ಭಾನುವಾರ, ಜೂನ್ 14, 2020
ತಿರುತಿರುಗಿ....
ಬದುಕು ತಿರುತಿರುಗಿ ಮತ್ತೆ ಅದೇ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ ಅಲ್ಲವೇ. ಮಾಡಿದ ಪಾಪ ಮತ್ತಾವುದೋ ಜನ್ಮದಲ್ಲಿ ಕಾಡದು. ಈ ಜನ್ಮದ ಋಣ ಈ ಜನ್ಮದಲ್ಲಿಯೇ ತೀರಬೇಕು. ಇಲ್ಲೇ ಡ್ರಾ ಇಲ್ಲೇ ಬಹುಮಾನ ಎನ್ನುವುದು ಈ ಕಲಿಗಾಲದ ತೀರ್ಪು. ಪಾಪ-ಪುಣ್ಯಗಳು ನರಕ, ಸ್ವರ್ಗದಲ್ಲಿಲ್ಲ. ಬದುಕಿನ ಎಲ್ಲಾ ಪಾಪಗಳಿಗೂ ಇಲ್ಲೇ ಬೆಲೆ ತೆರಬೇಕು. ಪುಣ್ಯ ಎಂಬುದಿದ್ದರೆ ಕೆಲಕಾಲ ನಿಮ್ಮದಿ ಇಂದ ಇರಬಹುದು ಅಥವಾ ಆ ಭ್ರಮೆಯಲ್ಲಿ ಬದುಕಬಹುದು. ತೀರದ ದಾಹಗಳಿಗೆ ಒಳಗಾಗಿ ಭ್ರಮೆಯಲ್ಲಿ ಏನನ್ನೋ ಮಾಡುತ್ತಿದ್ದೇವೆನ್ನುತ್ತಾ ಬದುಕುವ ಎಲ್ಲರಿಗೂ ನನ್ನ ಬದುಕು ಒಂದು ಪಾಠವಾಗಬಹುದು. ಅಥವಾ ಇದೂ ನನ್ನ ಭ್ರಮೆಯೇ..? ಅರಿವಿಲ್ಲ. ಹಾಗೆ ಪಾಠ ಕಲಿಯುವುದಿದ್ದರೆ ಎಷ್ಟು ಜನರ ಬದುಕಿನಿಂದ ನಾನು ಪಾಠ ಕಲಿಯಬಹುದಿತ್ತು.. ಬಹುಶಃ ಜೀವನದ ಪಾಠಕ್ಕೆ ಅನುಭವವೇ ಗುರು ಇರಬಹುದೇನೋ..
ಪ್ರಾಯಶ್ಚಿತ್ತವೇ ಮಾಡಿದ ಪಾಪಗಳಿಗೆ ತಕ್ಕ ಶಾಸ್ತಿ ಎನ್ನುತ್ತಾರೆ. ಹಾಗಿದ್ದಲ್ಲಿ ನನ್ನ ಪ್ರಾಯಶ್ಚಿತ್ತ ನನ್ನ ಮಗಳ ಬದುಕನ್ನು ಸರಿ ಮಾಡಬಲ್ಲದೇ..? ಅವಳ ಬದುಕು ಸರಿಯಾಗುತ್ತದೆ ಎಂದರೆ ನನ್ನ ಪ್ರಾಣ ಕೊಡಲು ಸಹಾ ನಾನು ಸಿದ್ಧನಿದ್ದೇನೆ. ಆದರೆ, ಅವಳ ಬದುಕು ಮತ್ತಾವುದಾದರೂ ಬಗೆಯಿಂದ ಸರಿಯಾಗಲಿ ಎಂಬ ಆಸೆಯಿಂದ ಇನ್ನೂ ಜೀವ ಬಿಗಿ ಹಿಡಿದು ಕಾದಿದ್ದೇನೆ. ಆದರೆ, ಅವಳು ಮತ್ತೆ ನನ್ನನ್ನು "ಅಪ್ಪಾ" ಎಂದು ಕರೆಯಬಲ್ಲಳೆ? ಈ ಪಾಪಿಯ ಬದುಕಿನಲ್ಲಿ ಅಷ್ಟಾದರೂ ಆಶಾಭಾವನೆ ಉಳಿಯಬಹುದೇ..? ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬೇಕಷ್ಟೇ..
ನಾನು ಗೋಪಾಲ. ಬಡತನದ ಕುಟುಂಬದಿಂದ ಸಿರಿವಂತಿಕೆಯ ಒಂದೊಂದೇ ಮೆಟ್ಟಿಲೇರಿದೆ. ಬಡತನದ ಹೀನಾಯ ಸ್ಥಿತಿಯಲ್ಲಿ ನಮ್ಮನ್ನು ಭಿಕಾರಿಗಳಂತೆ ಕಾಣುತ್ತಿದ್ದವರೆಲ್ಲಾ ಸಿರಿವಂತಿಕೆ ಬರುತ್ತಿದ್ದ ಹಾಗೆ ನಮ್ಮ ಸುತ್ತ ನೆರೆಯಲು ಶುರು ಮಾಡಿದರು. ಹಣವಿದ್ದರೆ ಬಳಗ ಎಂದು ತಿಳಿದು ಸರ್ಕಾರಿ ಕೆಲಸದ ಜೊತೆ ಹೊಸ ಸಂಪಾದನೆಯ ಮಾರ್ಗವನ್ನು ಹಿಡಿದೆ. ಅದು ಯಾರೂ ಮಾಡಬಾರದ ಕೆಲಸವೇನಲ್ಲ. ಇಂದಿಗೂ ಅದು ಪುಣ್ಯ ಕಾರ್ಯ ಎಂದೇ ಭಾವಿಸಲಾಗುವ ಮದುವೆಯ ದಲ್ಲಾಳಿಯ ಕೆಲಸ. ಮನೆಯಲ್ಲಿ ಇದಕ್ಕೆ ಯಾರ ವಿರೋಧವೂ ನೇರವಾಗಿ ವ್ಯಕ್ತವಾಗಲಿಲ್ಲ. ವ್ಯಕ್ತವಾಗಿದ್ದರೂ ಅದನ್ನು ಗಮನಿಸುವ ಸ್ಥಿತಿಯಲ್ಲಿಯೂ ನಾನಿರಲಿಲ್ಲ. ಕಾಲಕ್ರಮೇಣ ಈ ಕೆಲಸದಿಂದ ಸಿಗುವ ಸಂಪಾದನೆ ಹೆಚ್ಚಾಗಿ ಸರ್ಕಾರಿ ಕೆಲಸವನ್ನು ಕಡೆಗಣಿಸಿ ಕೆಲಸ ಬಿಟ್ಟೆ.
ಕನ್ಯಾದಾನದ ಪುಣ್ಯದ ಕುರಿತು ಮಾತನಾಡುತ್ತಿದ್ದ ನನಗೆ ಅದರ ಹಿಂದಿನ ಕಾರ್ಯಗಳ ಕುರಿತು ಸಹಾ ಆರಿವಿದ್ದಿತು. ಎಲ್ಲಾ ಪುಣ್ಯ ಕಾರ್ಯಗಳ ಹಿಂದೆಯೂ ಪಾಪ-ಕಾರ್ಯಗಳ ಲವಲೇಶ ಇಲ್ಲದ್ದಿಲ್ಲ. ಅರಿತೋ ಅರಿಯದೆಯೋ ಪಾಪಕಾರ್ಯ ನಡೆದೇ ಇರುತ್ತದೆ. ಬರುಬರುತ್ತಾ ಈ ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡೆನೆಂದರೆ ವಧು-ವರರನ್ನು ಹೊಂದಿಸುವುದು ನೀರು ಕುಡಿದಷ್ಟೇ ಸುಲಭವಾಗಿದ್ದಿತು ನನಗೆ. ಆನ್ಲೈನ್ ವಧು-ವರರ ಸೈಟ್ ಗಳು ತೀರಾ ಇತ್ತೀಚೆಗೆ ಬಂದರೂ ಈ ಗೋಪಾಲಯ್ಯನ ಕೆಲಸಕ್ಕೆ ಕಿಂಚಿತ್ತೂ ಸಹಾ ತೊಂದರೆಯಾಗಿರಲಿಲ್ಲ ಅದರಿಂದ.
ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತು ನನ್ನ ಪಾಲಿನ ರಹಸ್ಯ ಮಂತ್ರವಾಗಿತ್ತು. ಬಡವರ, ಸಿರಿವಂತರ ಇಬ್ಬರ ಮನಸ್ಥಿತಿಯ ಅರಿವಿತ್ತು. ಕೆಲವರ ಹಣದ ಆಸೆಗೆ, ವರದಕ್ಷಿಣೆಯ ಆಸೆಗೆ ಎಷ್ಟೋ ಹೆಣ್ಣುಗಳ ಬಲಿಯಾಗಿದ್ದಿದೆ. ಕೆಲವು ಹೆಣ್ಣುಗಳ ಮತ್ತೊಂದು ಸಂಬಂಧಕ್ಕೆ ಗಂಡಿನ ಜೀವನ, ಜೀವ ಬಲಿಯಾಗಿದ್ದಿದೆ. ಈ ಎಷ್ಟೋ ಸಂಬಂಧಗಳ ಸೂತ್ರಧಾರಿಯಾಗಿ, ಅದರ ಹಿಂದಿನ ಸಂಬಂಧಗಳ ಮುಚ್ಚಿಟ್ಟ ಸುಳ್ಳಿನ ಹಿಂದೆ ನನ್ನ ಪಾಲು ಅತಿ ಹೆಚ್ಚಿತ್ತು.
ಸುಚಿತ್ರಾ ಮದುವೆಯಾಗುವ ಗಂಡಿಗೆ ಯಾವುದೇ ಕೆಟ್ಟ ಚಟ ಇಲ್ಲ ಎಂದು ನಂಬಿಸಿದ್ದೆ. ಅವನ ಅತಿಯಾದ ಕುಡಿತದಿಂದ ಮದುವೆಯಾದ ಮೂರು ತಿಂಗಳೊಳಗೆ ಅವನು ಸತ್ತ. ಅದರ ಫಲ ಸುಚಿತ್ರಾ ವಿಧವೆಯಾದಳು. ಹೆಚ್ಚಿನ ಓದಿಲ್ಲ, ಮಾಡಲು ಕೆಲಸವಿಲ್ಲ. ಗಂಡನ ಮನೆಯಲ್ಲಿ ಅನಿಷ್ಟ ಎಂಬ ಹಣೆಪಟ್ಟಿ, ಬಡತನದ ಹೆಣ್ಣು ಮಕ್ಕಳೇ ತುಂಬಿದ ಅವಳ ತವರುಮನೆ ಅವಳ ಪಾಲಿಗೆ ಮರೀಚಿಕೆ.
ಭಾಗ್ಯಳ ಹಿಂದಿನ ಬದುಕಿನಲ್ಲಿ ಯಾವುದೇ ಪ್ರೇಮ ಪ್ರಕರಣ ಇಲ್ಲವೆಂದು ಹೇಳಿ ಅವಳನ್ನು ಮದುವೆ ಮಾಡಿಸಿದೆ. ಆಸ್ತಿಯ ಆಸೆಗೋ ಏನೋ ಅವಳೂ ಸಹಾ ಒಪ್ಪಿದ್ದಳು. ಮದುವೆಯಾದ ಆರು ತಿಂಗಳಲ್ಲೇ ಗಂಡನಿಗೆ ಮೋಸ ಮಾಡಿ ಪ್ರಿಯಕರನೊಟ್ಟಿಗೆ ಪರಾರಿಯಾದಳು. ಅವಳನ್ನೇ ನಂಬಿಕೊಂಡಿದ್ದ ಅವಳ ಗಂಡ ಅವಳ ನಂಬಿಕೆ ದ್ರೋಹದಿಂದ ಇಂದು ಜನರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾನೆ.
ಆಗಲೋ, ಈಗಲೋ ಸಾಯುವ ಮುದುಕನಿಗೆ ಹದಿಹರೆಯದ ಹೆಣ್ಣಿನೊಟ್ಟಿಗೆ ಮದುವೆ.. ಈಗೇ.. ನಾನು ಮಾಡಿದ ಕೆಲಸದಲ್ಲಿ ಪಾಪ-ಪುಣ್ಯದ ಲೆಕ್ಕ ನಾನಿಡಲಿಲ್ಲ. ನಾನಿಟ್ಟದ್ದು ಹಣದ ಲೆಕ್ಕ ಮಾತ್ರ. ಕನ್ಯಾದಾನದಿಂದ ಪುಣ್ಯ ಬರುವುದೇ ಸತ್ಯವಾದರೆ ಅವರ ಮುಂದಿನ ಬಾಳು ಹಸನಾಗದಿದ್ದಲ್ಲಿ ಪಾಪ ಬರುವುದು ಸಹಾ ಸತ್ಯವಾಗಬೇಕಲ್ಲವೇ..? ಮದುವೆಯವರೆಗೆ ಮಾತ್ರ ಎಲ್ಲರೂ ವಿವಾಹದ ಕುರಿತು ಗಮನ ಹರಿಸುತ್ತಾರೆ. ಅದರ ಮುಂದಿನ ಬದುಕು ಯಾರಿಗೂ ಬೇಡದ ವಿಷಯ. ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಾ ಕಾಲ್ಗುಣ, ನಕ್ಷತ್ರ, ಕುಟುಂಬಗಳ ಪ್ರವರಗಳತ್ತ ಮಾತು ಹೊರಳುತ್ತದೆ. ನನ್ನ ಹೆಸರು ಮತ್ತು ಹಾಜರಿ ಅಲ್ಲಿ ಅಪ್ರಸ್ತುತ.
ಅವರ ಕಣ್ಣೀರಿನ, ಶಾಪಗಳ ಪ್ರತಿಫಲ ಇಂದು ನನ್ನ ಬಾಳಲ್ಲಿ ನನ್ನ ಮಗಳ ಬದುಕಿಗೆ ತಟ್ಟಿದೆ ಎನ್ನಿಸುತ್ತದೆ. ಬದುಕು ಬಹಳ ಚಿಕ್ಕದು ತಿರುತಿರುಗಿ ಮತ್ತದೇ ಬಿಂದುವಿಗೆ ಬಂದು ನಿಲ್ಲುತ್ತದೆ. ಕಾಲಚಕ್ರ ಉರುಳುತಲಿತ್ತು. ನನಗೂ ಒಂದು ಕುಟುಂಬವಿದೆ ಎಂಬುದು ಹಣ ಸಂಪಾದನೆಯ ಹಾದಿಯಲ್ಲಿ ಮರೆತೇ ಹೋಗಿತ್ತು. ಇದ್ದ ಒಬ್ಬಳೇ ಮಗಳು ವಿವಾಹದ ವಯಸ್ಸಿನಲ್ಲಿದ್ದಳು. ಅವಳಿಗೆ ನನ್ನ ಈ ಕೆಲಸ ಇಷ್ಟವಿರಲಿಲ್ಲ, ಹಾಗೆಂದೂ ಯಾವತ್ತೂ ಬಾಯಿಬಿಟ್ಟು ಹೇಳಿರಲೂ ಇಲ್ಲ. ಮೊದಲಿಂದಲೂ ಅವಳಿಗೆ ನಾನು ಆಯ್ಕೆಯ ಸ್ವಾತಂತ್ರ್ಯ ನೀಡಿದವನೇ ಅಲ್ಲ. ಅದು ಅವಳ ಮೇಲಿನ ಅಪನಂಬಿಕೆಯಿಂದ ಅಲ್ಲ.
ಪೋಷಕರು ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡದಿರುವುದು ಅವರ ಮೇಲಿನ ಅಪನಂಬಿಕೆಯಿಂದ ಅಥವಾ ದ್ವೇಷದಿಂದಲೋ ಅಲ್ಲ.. ಅತಿಯಾದ ಮಮತೆಯಿಂದ, ಅವರ ಮೇಲಿನ ಅತಿಯಾದ ಕಾಳಜಿಯಿಂದ. ಮಕ್ಕಳ ಆಯ್ಕೆ ತಪ್ಪಾದಲ್ಲಿ ಎಂಬ ಭಯದಿಂದ ಅಷ್ಟೇ.. ಕೆಲವೊಮ್ಮೆ ಮಕ್ಕಳು ಇದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ, ನನ್ನ ಮಗಳ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೆ. ನನ್ನ ಆಯ್ಕೆಯನ್ನು ಅವಳು ಎಂದಿಗೂ ಧಿಕ್ಕರಿಸಿರಲಿಲ್ಲ. ಅವಳು ನನ್ನ ಆಯ್ಕೆಯನ್ನು ಧಿಕ್ಕರಿಸಿದ್ದಾರೆ ಇಂದು ಅವಳ ಬಾಳು ಹಸನಾಗುತ್ತಿತ್ತೋ ಏನೋ.. ವಿಧಿಯ ಆಯ್ಕೆ ಬೇರೆಯೇ ಇದ್ದರೆ ಅದನ್ನು ಬದಲಾಯಿಸಲು ಹುಲುಮಾನವರಾದ ನಮಗೆ ತಾನೇ ಹೇಗೆ ಸಾಧ್ಯ..?
ಅವಳ ಬದುಕಿನ ಆಯ್ಕೆಯನ್ನು ನಾನೇ ಮಾಡಿದ್ದೆ, ಆತ ಪ್ರತಿಷ್ಠಿತ ಮನೆತನದ ವರ. ದೊಡ್ಡ ಕಾಲೇಜಿನಲ್ಲಿ ಲೆಕ್ಚರರ್. ನಾನು ಲೆಕ್ಕ ತಪ್ಪಿದ್ದೆಲ್ಲಿ ನನಗೇ ತಿಳಿಯಲಿಲ್ಲ. ಅವರ ಐಶ್ವರ್ಯ ನನ್ನ ಕಣ್ಣನ್ನು ಕುರುಡಾಯಿಸಿತೇ? ಮಗಳ ಬಾಳನ್ನು ಹಸನುಗೊಳಿಸುವ ಆತುರ ನನ್ನನ್ನು ದಾರಿ ತಪ್ಪಿಸಿತೇ..? ನನಗೆ ತಿಳಿದವರು, ಹತ್ತಿರದವವರೆಲ್ಲರಿಗೂ ಐಶ್ವರ್ಯದ ಹಿಂದಿನ ಅಸಲಿಯತ್ತು ತಿಳಿದಿತ್ತು . ಆದರೆ, ಯಾರೂ ತಡೆಯಲಿಲ್ಲ. ಮುಖವಾಡವನ್ನು ಯಾರೂ ಕಳಚಲಿಲ್ಲ. ಸಾವಿರ ಸುಳ್ಳನಾದರೂ ಹೇಳಿ ಮದುವೆ ಮಾಡು ಎಂಬ ಮಂತ್ರವನ್ನು ಅವರೂ ನಂಬಿಕೊಂಡಿದ್ದರೋ ಏನೋ.. ಅಥವಾ ಅವರ ಮಕ್ಕಳ ಬಾಳಿನ ದುಸ್ಥಿತಿಗೆ ಕಾರಣನಾದ ನನ್ನ ಮೇಲಿನ ಕೋಪವೋ.. ಯಾರನ್ನು ದೂಷಿಸಿ ಏನು ಫಲ..?
ಮದುವೆಯಾದ ನಂತರ ಅಲ್ಲಿಂದ ಯಾವ ಸುದ್ದಿಯೂ ಬರುತ್ತಿರಲಿಲ್ಲ. ಅವರ ಬದುಕು ಅವರವರಿಗೆ ಬಿಟ್ಟದ್ದು ಎನ್ನುತ್ತಾ ನವದಂಪತಿಗಳು ಅವರ ಲೋಕದಲ್ಲಿ ಮುಲುಗಿದ್ದಾರೆ ಎಂದೇ ಸುಮ್ಮನಾಗಿದ್ದೆ. 20 ದಿನಗಳ ನಂತರ ಬಂದದ್ದು ಕರಾಳ ಸುದ್ದಿ. ನನ್ನ ಮಗಳು ಅವಳ ಗಂಡನನ್ನು ಸಾಯಿಸಿದ್ದಳು ಎಂಬ ಆಘಾತಕಾರಿ ಸುದ್ದಿ. ತಕ್ಷಣವೇ ಅಲ್ಲಿ ಹೋಗಿ ನೋಡಿದರೆ ನನ್ನ ಮಗಳೆಂಬಂತೆಯೇ ಅವಳಿರಲಿಲ್ಲ. ಸೊರಗಿದ ದೇಹ, ಗುಳಿಬಿದ್ದ ಕಣ್ಣು, ಅತ್ತು ಅತ್ತು ಅಳಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದ್ದ ಅವಳ ಕಂಗಳನ್ನು ದಿಟ್ಟಿಸಿದರೆ ರೋಷವನ್ನು ತಣಿಸಿಕೊಂಡ ತೃಪ್ತಿ ಇತ್ತು.
ಅವನಿಗೆ ಅದಾಗಲೇ ಎಷ್ಟೋ ಹೆಣ್ಣುಗಳ ಹುಚ್ಚಿತ್ತಂತೆ, ಇವಳು ಬರೀ ಹೆಸರಿಗೆ, ಅಂತಸ್ತಿನ ತೋರಿಕೆಗೆ ಲೋಕದ ಕಣ್ಣಿಗಷ್ಟೇ ಹೆಂಡತಿ. ದಿನಾ ರಾತ್ರಿ ರೌರವ ನರಕ ದರ್ಶನ ಮಾಡಿಸುತ್ತಿದ್ದ ಅವಳಿಗೆ. ಮೈಯಲ್ಲೆಲ್ಲಾ ಸುಟ್ಟ ಗಾಯಗಳ ಗುರುತು, ಸುಖಾಸುಮ್ಮನೆ ಅನುಮಾನ. ಅವಳು ಸಹಿಸಿ ದೇವಿಯಾದಷ್ಟೂ ಇವನು ರಕ್ಕಸನಾಗುತ್ತಿದ್ದ, ಕೊನೆಗೆ ಅವಳೇ ದುರ್ಗೆಯಾಗಿ ಇವನ ಅಂತ್ಯ ಮಾಡಿದಳು. ಅವಳ ಕೋಪದ ತಾಪ ಎಷ್ಟಿತ್ತೆಂದರೆ ಅವನ ಮೈಯಲ್ಲಿ ಬಿದ್ದಿದ್ದ ಚಾಕುವಿನ ಏಟುಗಳು ಎಣಿಸಲಾರದಷ್ಟು.. ಸತ್ತ ನಂತರವೂ ಅದೆಷ್ಟೋ ಹೊತ್ತು ಚುಚ್ಚುತ್ತಲೇ ಇದ್ದಳಂತೆ. ಕುಡಿದು ತುರಾಡುತ್ತಾ ಬಂದವನಿಗೆ ನಿಲ್ಲಲೂ ತ್ರಾಣವಿರಲಿಲ್ಲ, ಇನ್ನು ಇವಳನ್ನು ಹೇಗೆ ತಡೆದಾನು? ಗೋಮುಖ ವ್ಯಾಘ್ರನ ಹತ್ಯೆಯಾಗಿತ್ತು.
ನನ್ನ ಮಗಳ ಕುರಿತು ನನಗೆ ಕೋಪವಿರಲಿಲ್ಲ. ವಿಚಾರಿಸದೆ ವಿವಾಹ ಮಾಡಿಕೊಟ್ಟದಕ್ಕೆ ನನ್ನ ಬಗ್ಗೆಯೇ ನನಗೆ ಅಸಹ್ಯವಿತ್ತು. ಅವಳನ್ನು ಬಿಡಿಸಲು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳನ್ನೂ ಅವಳು ತಿರಸ್ಕರಿಸುತ್ತಲೇ ಇದ್ದಾಳೆ. ನನ್ನನ್ನು ಅಪರಿಚಿತನಂತೆ ದೂರವಿರಿಸಿದ್ದಾಳೆ. ನನ್ನನ್ನು "ಅಪ್ಪಾ" ಎಂದು ಕರೆಯಲು ಸಹಾ ಅವಳಿಗೆ ಅಸಹ್ಯವಂತೆ. ನನ್ನ ಪಾಪ-ಕರ್ಮಗಳನ್ನು ತಡೆಯದೆ ಸುಮ್ಮನಿದ್ದುದಕ್ಕೆ ಅವಳಿಗೆ ದೇವರು ಕೊಟ್ಟ ಶಿಕ್ಷೆಯಂತೆ ಇದು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ಅವಳ ತಾಯಿ ಮಾನಸಿಕ ಅಸ್ವಸ್ಥೆಯಾಗಿ ಇಂದು ಆಸ್ಪತ್ರೆಯಲ್ಲಿದ್ದಾಳೆ. ಇದೆಲ್ಲವನ್ನು ನೋಡಲು ನಾನು ಮಾತ್ರ ಇನ್ನೂ ಜೀವಂತವಾಗಿದ್ದೇನೆ.
ಮಕ್ಕಳ ಬಾಳು ಹಾಳಾದಾಗ ತಂದೆ-ತಾಯಿ ಅನುಭವಿಸುವ ಶಿಕ್ಷೆ ನನಗಾಗಿದೆ. ನನ್ನ ಈ ಪರಿಸ್ಥಿಗೆ ಮುಕ್ತಿ ಇಲ್ಲವೇ..? ಪ್ರತಿ ದಿನ ಜೈಲಿನ ಬಳಿ ಹೋದಾಗಲೂ ನನ್ನ ಮುಖ ನೋಡದೆಯೇ ನನ್ನ ಮಗಳು ನನ್ನನ್ನು ನಿರಾಕರಿಸುತ್ತಾಳೆ. ಅವಳ ಮುಂದಿನ ಭವಿಷ್ಯದ ಗತಿ..? ನಾನಿಲ್ಲದೆಯೇ ಎಲ್ಲರೂ, ಎಲ್ಲವೂ ಸಾಂಗವಾಗಿ ಸಾಗುತ್ತದೆ.
ಭಗವಂತ ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಸೃಷ್ಟಿ ಮಾಡಿರುತ್ತಾನೆ. ಅದನ್ನು ಗಂಟು ಹಾಕುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಎಲ್ಲರ ಭವಿಷ್ಯವನ್ನೂ ಗೋಜಲಾಗಿಸಿ ಬಿಡುತ್ತೇವೆ. ಇಷ್ಟೆಲ್ಲಾ ಪತ್ರದಲ್ಲಿ ಬರೆದ ನಾನು ನನ್ನ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ. ಬದುಕಿನ ಗೋಜಲಾದ ಗಂಟುಗಳನ್ನು ಬಿಡಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ, ಯಾವುದೋ ಗಂಟನ್ನು ಕಡಿದು ಹೊರಡುತ್ತಿದ್ದೇನೆ.
------------------------------------
(ತಿರುತಿರುಗಿ ತಿರುಗುತ್ತೆ ಬುಗುರಿ
ತಾನೇ ಸೋತು|
ತಿರೇಗುರುಳುವುದು ತನ್ನ ಬಲವ
ತಾಂ ಕಳೆದು||
ನರನುಮಂತೆಯೇ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ-ಮಂಕುತಿಮ್ಮ
ಡಿ.ವಿ.ಜಿ ಯವರ ಈ ಮಂಕುತಿಮ್ಮನ ಕಗ್ಗದ ಸಾಲುಗಲನ್ನು ಓದಿದ ನಂತರ ಆಲೋಚನೆಗೆ ಬಂದ ಕತೆ)
ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸುವಿರಿ ಎಂಬ ನಂಬಿಕೆಯೊಂದಿಗೆ
~ವಿಭಾ ವಿಶ್ವನಾಥ್
ಪ್ರಾಯಶ್ಚಿತ್ತವೇ ಮಾಡಿದ ಪಾಪಗಳಿಗೆ ತಕ್ಕ ಶಾಸ್ತಿ ಎನ್ನುತ್ತಾರೆ. ಹಾಗಿದ್ದಲ್ಲಿ ನನ್ನ ಪ್ರಾಯಶ್ಚಿತ್ತ ನನ್ನ ಮಗಳ ಬದುಕನ್ನು ಸರಿ ಮಾಡಬಲ್ಲದೇ..? ಅವಳ ಬದುಕು ಸರಿಯಾಗುತ್ತದೆ ಎಂದರೆ ನನ್ನ ಪ್ರಾಣ ಕೊಡಲು ಸಹಾ ನಾನು ಸಿದ್ಧನಿದ್ದೇನೆ. ಆದರೆ, ಅವಳ ಬದುಕು ಮತ್ತಾವುದಾದರೂ ಬಗೆಯಿಂದ ಸರಿಯಾಗಲಿ ಎಂಬ ಆಸೆಯಿಂದ ಇನ್ನೂ ಜೀವ ಬಿಗಿ ಹಿಡಿದು ಕಾದಿದ್ದೇನೆ. ಆದರೆ, ಅವಳು ಮತ್ತೆ ನನ್ನನ್ನು "ಅಪ್ಪಾ" ಎಂದು ಕರೆಯಬಲ್ಲಳೆ? ಈ ಪಾಪಿಯ ಬದುಕಿನಲ್ಲಿ ಅಷ್ಟಾದರೂ ಆಶಾಭಾವನೆ ಉಳಿಯಬಹುದೇ..? ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬೇಕಷ್ಟೇ..
ನಾನು ಗೋಪಾಲ. ಬಡತನದ ಕುಟುಂಬದಿಂದ ಸಿರಿವಂತಿಕೆಯ ಒಂದೊಂದೇ ಮೆಟ್ಟಿಲೇರಿದೆ. ಬಡತನದ ಹೀನಾಯ ಸ್ಥಿತಿಯಲ್ಲಿ ನಮ್ಮನ್ನು ಭಿಕಾರಿಗಳಂತೆ ಕಾಣುತ್ತಿದ್ದವರೆಲ್ಲಾ ಸಿರಿವಂತಿಕೆ ಬರುತ್ತಿದ್ದ ಹಾಗೆ ನಮ್ಮ ಸುತ್ತ ನೆರೆಯಲು ಶುರು ಮಾಡಿದರು. ಹಣವಿದ್ದರೆ ಬಳಗ ಎಂದು ತಿಳಿದು ಸರ್ಕಾರಿ ಕೆಲಸದ ಜೊತೆ ಹೊಸ ಸಂಪಾದನೆಯ ಮಾರ್ಗವನ್ನು ಹಿಡಿದೆ. ಅದು ಯಾರೂ ಮಾಡಬಾರದ ಕೆಲಸವೇನಲ್ಲ. ಇಂದಿಗೂ ಅದು ಪುಣ್ಯ ಕಾರ್ಯ ಎಂದೇ ಭಾವಿಸಲಾಗುವ ಮದುವೆಯ ದಲ್ಲಾಳಿಯ ಕೆಲಸ. ಮನೆಯಲ್ಲಿ ಇದಕ್ಕೆ ಯಾರ ವಿರೋಧವೂ ನೇರವಾಗಿ ವ್ಯಕ್ತವಾಗಲಿಲ್ಲ. ವ್ಯಕ್ತವಾಗಿದ್ದರೂ ಅದನ್ನು ಗಮನಿಸುವ ಸ್ಥಿತಿಯಲ್ಲಿಯೂ ನಾನಿರಲಿಲ್ಲ. ಕಾಲಕ್ರಮೇಣ ಈ ಕೆಲಸದಿಂದ ಸಿಗುವ ಸಂಪಾದನೆ ಹೆಚ್ಚಾಗಿ ಸರ್ಕಾರಿ ಕೆಲಸವನ್ನು ಕಡೆಗಣಿಸಿ ಕೆಲಸ ಬಿಟ್ಟೆ.
ಕನ್ಯಾದಾನದ ಪುಣ್ಯದ ಕುರಿತು ಮಾತನಾಡುತ್ತಿದ್ದ ನನಗೆ ಅದರ ಹಿಂದಿನ ಕಾರ್ಯಗಳ ಕುರಿತು ಸಹಾ ಆರಿವಿದ್ದಿತು. ಎಲ್ಲಾ ಪುಣ್ಯ ಕಾರ್ಯಗಳ ಹಿಂದೆಯೂ ಪಾಪ-ಕಾರ್ಯಗಳ ಲವಲೇಶ ಇಲ್ಲದ್ದಿಲ್ಲ. ಅರಿತೋ ಅರಿಯದೆಯೋ ಪಾಪಕಾರ್ಯ ನಡೆದೇ ಇರುತ್ತದೆ. ಬರುಬರುತ್ತಾ ಈ ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡೆನೆಂದರೆ ವಧು-ವರರನ್ನು ಹೊಂದಿಸುವುದು ನೀರು ಕುಡಿದಷ್ಟೇ ಸುಲಭವಾಗಿದ್ದಿತು ನನಗೆ. ಆನ್ಲೈನ್ ವಧು-ವರರ ಸೈಟ್ ಗಳು ತೀರಾ ಇತ್ತೀಚೆಗೆ ಬಂದರೂ ಈ ಗೋಪಾಲಯ್ಯನ ಕೆಲಸಕ್ಕೆ ಕಿಂಚಿತ್ತೂ ಸಹಾ ತೊಂದರೆಯಾಗಿರಲಿಲ್ಲ ಅದರಿಂದ.
ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತು ನನ್ನ ಪಾಲಿನ ರಹಸ್ಯ ಮಂತ್ರವಾಗಿತ್ತು. ಬಡವರ, ಸಿರಿವಂತರ ಇಬ್ಬರ ಮನಸ್ಥಿತಿಯ ಅರಿವಿತ್ತು. ಕೆಲವರ ಹಣದ ಆಸೆಗೆ, ವರದಕ್ಷಿಣೆಯ ಆಸೆಗೆ ಎಷ್ಟೋ ಹೆಣ್ಣುಗಳ ಬಲಿಯಾಗಿದ್ದಿದೆ. ಕೆಲವು ಹೆಣ್ಣುಗಳ ಮತ್ತೊಂದು ಸಂಬಂಧಕ್ಕೆ ಗಂಡಿನ ಜೀವನ, ಜೀವ ಬಲಿಯಾಗಿದ್ದಿದೆ. ಈ ಎಷ್ಟೋ ಸಂಬಂಧಗಳ ಸೂತ್ರಧಾರಿಯಾಗಿ, ಅದರ ಹಿಂದಿನ ಸಂಬಂಧಗಳ ಮುಚ್ಚಿಟ್ಟ ಸುಳ್ಳಿನ ಹಿಂದೆ ನನ್ನ ಪಾಲು ಅತಿ ಹೆಚ್ಚಿತ್ತು.
ಸುಚಿತ್ರಾ ಮದುವೆಯಾಗುವ ಗಂಡಿಗೆ ಯಾವುದೇ ಕೆಟ್ಟ ಚಟ ಇಲ್ಲ ಎಂದು ನಂಬಿಸಿದ್ದೆ. ಅವನ ಅತಿಯಾದ ಕುಡಿತದಿಂದ ಮದುವೆಯಾದ ಮೂರು ತಿಂಗಳೊಳಗೆ ಅವನು ಸತ್ತ. ಅದರ ಫಲ ಸುಚಿತ್ರಾ ವಿಧವೆಯಾದಳು. ಹೆಚ್ಚಿನ ಓದಿಲ್ಲ, ಮಾಡಲು ಕೆಲಸವಿಲ್ಲ. ಗಂಡನ ಮನೆಯಲ್ಲಿ ಅನಿಷ್ಟ ಎಂಬ ಹಣೆಪಟ್ಟಿ, ಬಡತನದ ಹೆಣ್ಣು ಮಕ್ಕಳೇ ತುಂಬಿದ ಅವಳ ತವರುಮನೆ ಅವಳ ಪಾಲಿಗೆ ಮರೀಚಿಕೆ.
ಭಾಗ್ಯಳ ಹಿಂದಿನ ಬದುಕಿನಲ್ಲಿ ಯಾವುದೇ ಪ್ರೇಮ ಪ್ರಕರಣ ಇಲ್ಲವೆಂದು ಹೇಳಿ ಅವಳನ್ನು ಮದುವೆ ಮಾಡಿಸಿದೆ. ಆಸ್ತಿಯ ಆಸೆಗೋ ಏನೋ ಅವಳೂ ಸಹಾ ಒಪ್ಪಿದ್ದಳು. ಮದುವೆಯಾದ ಆರು ತಿಂಗಳಲ್ಲೇ ಗಂಡನಿಗೆ ಮೋಸ ಮಾಡಿ ಪ್ರಿಯಕರನೊಟ್ಟಿಗೆ ಪರಾರಿಯಾದಳು. ಅವಳನ್ನೇ ನಂಬಿಕೊಂಡಿದ್ದ ಅವಳ ಗಂಡ ಅವಳ ನಂಬಿಕೆ ದ್ರೋಹದಿಂದ ಇಂದು ಜನರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾನೆ.
ಆಗಲೋ, ಈಗಲೋ ಸಾಯುವ ಮುದುಕನಿಗೆ ಹದಿಹರೆಯದ ಹೆಣ್ಣಿನೊಟ್ಟಿಗೆ ಮದುವೆ.. ಈಗೇ.. ನಾನು ಮಾಡಿದ ಕೆಲಸದಲ್ಲಿ ಪಾಪ-ಪುಣ್ಯದ ಲೆಕ್ಕ ನಾನಿಡಲಿಲ್ಲ. ನಾನಿಟ್ಟದ್ದು ಹಣದ ಲೆಕ್ಕ ಮಾತ್ರ. ಕನ್ಯಾದಾನದಿಂದ ಪುಣ್ಯ ಬರುವುದೇ ಸತ್ಯವಾದರೆ ಅವರ ಮುಂದಿನ ಬಾಳು ಹಸನಾಗದಿದ್ದಲ್ಲಿ ಪಾಪ ಬರುವುದು ಸಹಾ ಸತ್ಯವಾಗಬೇಕಲ್ಲವೇ..? ಮದುವೆಯವರೆಗೆ ಮಾತ್ರ ಎಲ್ಲರೂ ವಿವಾಹದ ಕುರಿತು ಗಮನ ಹರಿಸುತ್ತಾರೆ. ಅದರ ಮುಂದಿನ ಬದುಕು ಯಾರಿಗೂ ಬೇಡದ ವಿಷಯ. ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಾ ಕಾಲ್ಗುಣ, ನಕ್ಷತ್ರ, ಕುಟುಂಬಗಳ ಪ್ರವರಗಳತ್ತ ಮಾತು ಹೊರಳುತ್ತದೆ. ನನ್ನ ಹೆಸರು ಮತ್ತು ಹಾಜರಿ ಅಲ್ಲಿ ಅಪ್ರಸ್ತುತ.
ಅವರ ಕಣ್ಣೀರಿನ, ಶಾಪಗಳ ಪ್ರತಿಫಲ ಇಂದು ನನ್ನ ಬಾಳಲ್ಲಿ ನನ್ನ ಮಗಳ ಬದುಕಿಗೆ ತಟ್ಟಿದೆ ಎನ್ನಿಸುತ್ತದೆ. ಬದುಕು ಬಹಳ ಚಿಕ್ಕದು ತಿರುತಿರುಗಿ ಮತ್ತದೇ ಬಿಂದುವಿಗೆ ಬಂದು ನಿಲ್ಲುತ್ತದೆ. ಕಾಲಚಕ್ರ ಉರುಳುತಲಿತ್ತು. ನನಗೂ ಒಂದು ಕುಟುಂಬವಿದೆ ಎಂಬುದು ಹಣ ಸಂಪಾದನೆಯ ಹಾದಿಯಲ್ಲಿ ಮರೆತೇ ಹೋಗಿತ್ತು. ಇದ್ದ ಒಬ್ಬಳೇ ಮಗಳು ವಿವಾಹದ ವಯಸ್ಸಿನಲ್ಲಿದ್ದಳು. ಅವಳಿಗೆ ನನ್ನ ಈ ಕೆಲಸ ಇಷ್ಟವಿರಲಿಲ್ಲ, ಹಾಗೆಂದೂ ಯಾವತ್ತೂ ಬಾಯಿಬಿಟ್ಟು ಹೇಳಿರಲೂ ಇಲ್ಲ. ಮೊದಲಿಂದಲೂ ಅವಳಿಗೆ ನಾನು ಆಯ್ಕೆಯ ಸ್ವಾತಂತ್ರ್ಯ ನೀಡಿದವನೇ ಅಲ್ಲ. ಅದು ಅವಳ ಮೇಲಿನ ಅಪನಂಬಿಕೆಯಿಂದ ಅಲ್ಲ.
ಪೋಷಕರು ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡದಿರುವುದು ಅವರ ಮೇಲಿನ ಅಪನಂಬಿಕೆಯಿಂದ ಅಥವಾ ದ್ವೇಷದಿಂದಲೋ ಅಲ್ಲ.. ಅತಿಯಾದ ಮಮತೆಯಿಂದ, ಅವರ ಮೇಲಿನ ಅತಿಯಾದ ಕಾಳಜಿಯಿಂದ. ಮಕ್ಕಳ ಆಯ್ಕೆ ತಪ್ಪಾದಲ್ಲಿ ಎಂಬ ಭಯದಿಂದ ಅಷ್ಟೇ.. ಕೆಲವೊಮ್ಮೆ ಮಕ್ಕಳು ಇದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ, ನನ್ನ ಮಗಳ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೆ. ನನ್ನ ಆಯ್ಕೆಯನ್ನು ಅವಳು ಎಂದಿಗೂ ಧಿಕ್ಕರಿಸಿರಲಿಲ್ಲ. ಅವಳು ನನ್ನ ಆಯ್ಕೆಯನ್ನು ಧಿಕ್ಕರಿಸಿದ್ದಾರೆ ಇಂದು ಅವಳ ಬಾಳು ಹಸನಾಗುತ್ತಿತ್ತೋ ಏನೋ.. ವಿಧಿಯ ಆಯ್ಕೆ ಬೇರೆಯೇ ಇದ್ದರೆ ಅದನ್ನು ಬದಲಾಯಿಸಲು ಹುಲುಮಾನವರಾದ ನಮಗೆ ತಾನೇ ಹೇಗೆ ಸಾಧ್ಯ..?
ಅವಳ ಬದುಕಿನ ಆಯ್ಕೆಯನ್ನು ನಾನೇ ಮಾಡಿದ್ದೆ, ಆತ ಪ್ರತಿಷ್ಠಿತ ಮನೆತನದ ವರ. ದೊಡ್ಡ ಕಾಲೇಜಿನಲ್ಲಿ ಲೆಕ್ಚರರ್. ನಾನು ಲೆಕ್ಕ ತಪ್ಪಿದ್ದೆಲ್ಲಿ ನನಗೇ ತಿಳಿಯಲಿಲ್ಲ. ಅವರ ಐಶ್ವರ್ಯ ನನ್ನ ಕಣ್ಣನ್ನು ಕುರುಡಾಯಿಸಿತೇ? ಮಗಳ ಬಾಳನ್ನು ಹಸನುಗೊಳಿಸುವ ಆತುರ ನನ್ನನ್ನು ದಾರಿ ತಪ್ಪಿಸಿತೇ..? ನನಗೆ ತಿಳಿದವರು, ಹತ್ತಿರದವವರೆಲ್ಲರಿಗೂ ಐಶ್ವರ್ಯದ ಹಿಂದಿನ ಅಸಲಿಯತ್ತು ತಿಳಿದಿತ್ತು . ಆದರೆ, ಯಾರೂ ತಡೆಯಲಿಲ್ಲ. ಮುಖವಾಡವನ್ನು ಯಾರೂ ಕಳಚಲಿಲ್ಲ. ಸಾವಿರ ಸುಳ್ಳನಾದರೂ ಹೇಳಿ ಮದುವೆ ಮಾಡು ಎಂಬ ಮಂತ್ರವನ್ನು ಅವರೂ ನಂಬಿಕೊಂಡಿದ್ದರೋ ಏನೋ.. ಅಥವಾ ಅವರ ಮಕ್ಕಳ ಬಾಳಿನ ದುಸ್ಥಿತಿಗೆ ಕಾರಣನಾದ ನನ್ನ ಮೇಲಿನ ಕೋಪವೋ.. ಯಾರನ್ನು ದೂಷಿಸಿ ಏನು ಫಲ..?
ಮದುವೆಯಾದ ನಂತರ ಅಲ್ಲಿಂದ ಯಾವ ಸುದ್ದಿಯೂ ಬರುತ್ತಿರಲಿಲ್ಲ. ಅವರ ಬದುಕು ಅವರವರಿಗೆ ಬಿಟ್ಟದ್ದು ಎನ್ನುತ್ತಾ ನವದಂಪತಿಗಳು ಅವರ ಲೋಕದಲ್ಲಿ ಮುಲುಗಿದ್ದಾರೆ ಎಂದೇ ಸುಮ್ಮನಾಗಿದ್ದೆ. 20 ದಿನಗಳ ನಂತರ ಬಂದದ್ದು ಕರಾಳ ಸುದ್ದಿ. ನನ್ನ ಮಗಳು ಅವಳ ಗಂಡನನ್ನು ಸಾಯಿಸಿದ್ದಳು ಎಂಬ ಆಘಾತಕಾರಿ ಸುದ್ದಿ. ತಕ್ಷಣವೇ ಅಲ್ಲಿ ಹೋಗಿ ನೋಡಿದರೆ ನನ್ನ ಮಗಳೆಂಬಂತೆಯೇ ಅವಳಿರಲಿಲ್ಲ. ಸೊರಗಿದ ದೇಹ, ಗುಳಿಬಿದ್ದ ಕಣ್ಣು, ಅತ್ತು ಅತ್ತು ಅಳಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದ್ದ ಅವಳ ಕಂಗಳನ್ನು ದಿಟ್ಟಿಸಿದರೆ ರೋಷವನ್ನು ತಣಿಸಿಕೊಂಡ ತೃಪ್ತಿ ಇತ್ತು.
ಅವನಿಗೆ ಅದಾಗಲೇ ಎಷ್ಟೋ ಹೆಣ್ಣುಗಳ ಹುಚ್ಚಿತ್ತಂತೆ, ಇವಳು ಬರೀ ಹೆಸರಿಗೆ, ಅಂತಸ್ತಿನ ತೋರಿಕೆಗೆ ಲೋಕದ ಕಣ್ಣಿಗಷ್ಟೇ ಹೆಂಡತಿ. ದಿನಾ ರಾತ್ರಿ ರೌರವ ನರಕ ದರ್ಶನ ಮಾಡಿಸುತ್ತಿದ್ದ ಅವಳಿಗೆ. ಮೈಯಲ್ಲೆಲ್ಲಾ ಸುಟ್ಟ ಗಾಯಗಳ ಗುರುತು, ಸುಖಾಸುಮ್ಮನೆ ಅನುಮಾನ. ಅವಳು ಸಹಿಸಿ ದೇವಿಯಾದಷ್ಟೂ ಇವನು ರಕ್ಕಸನಾಗುತ್ತಿದ್ದ, ಕೊನೆಗೆ ಅವಳೇ ದುರ್ಗೆಯಾಗಿ ಇವನ ಅಂತ್ಯ ಮಾಡಿದಳು. ಅವಳ ಕೋಪದ ತಾಪ ಎಷ್ಟಿತ್ತೆಂದರೆ ಅವನ ಮೈಯಲ್ಲಿ ಬಿದ್ದಿದ್ದ ಚಾಕುವಿನ ಏಟುಗಳು ಎಣಿಸಲಾರದಷ್ಟು.. ಸತ್ತ ನಂತರವೂ ಅದೆಷ್ಟೋ ಹೊತ್ತು ಚುಚ್ಚುತ್ತಲೇ ಇದ್ದಳಂತೆ. ಕುಡಿದು ತುರಾಡುತ್ತಾ ಬಂದವನಿಗೆ ನಿಲ್ಲಲೂ ತ್ರಾಣವಿರಲಿಲ್ಲ, ಇನ್ನು ಇವಳನ್ನು ಹೇಗೆ ತಡೆದಾನು? ಗೋಮುಖ ವ್ಯಾಘ್ರನ ಹತ್ಯೆಯಾಗಿತ್ತು.
ನನ್ನ ಮಗಳ ಕುರಿತು ನನಗೆ ಕೋಪವಿರಲಿಲ್ಲ. ವಿಚಾರಿಸದೆ ವಿವಾಹ ಮಾಡಿಕೊಟ್ಟದಕ್ಕೆ ನನ್ನ ಬಗ್ಗೆಯೇ ನನಗೆ ಅಸಹ್ಯವಿತ್ತು. ಅವಳನ್ನು ಬಿಡಿಸಲು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳನ್ನೂ ಅವಳು ತಿರಸ್ಕರಿಸುತ್ತಲೇ ಇದ್ದಾಳೆ. ನನ್ನನ್ನು ಅಪರಿಚಿತನಂತೆ ದೂರವಿರಿಸಿದ್ದಾಳೆ. ನನ್ನನ್ನು "ಅಪ್ಪಾ" ಎಂದು ಕರೆಯಲು ಸಹಾ ಅವಳಿಗೆ ಅಸಹ್ಯವಂತೆ. ನನ್ನ ಪಾಪ-ಕರ್ಮಗಳನ್ನು ತಡೆಯದೆ ಸುಮ್ಮನಿದ್ದುದಕ್ಕೆ ಅವಳಿಗೆ ದೇವರು ಕೊಟ್ಟ ಶಿಕ್ಷೆಯಂತೆ ಇದು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ಅವಳ ತಾಯಿ ಮಾನಸಿಕ ಅಸ್ವಸ್ಥೆಯಾಗಿ ಇಂದು ಆಸ್ಪತ್ರೆಯಲ್ಲಿದ್ದಾಳೆ. ಇದೆಲ್ಲವನ್ನು ನೋಡಲು ನಾನು ಮಾತ್ರ ಇನ್ನೂ ಜೀವಂತವಾಗಿದ್ದೇನೆ.
ಮಕ್ಕಳ ಬಾಳು ಹಾಳಾದಾಗ ತಂದೆ-ತಾಯಿ ಅನುಭವಿಸುವ ಶಿಕ್ಷೆ ನನಗಾಗಿದೆ. ನನ್ನ ಈ ಪರಿಸ್ಥಿಗೆ ಮುಕ್ತಿ ಇಲ್ಲವೇ..? ಪ್ರತಿ ದಿನ ಜೈಲಿನ ಬಳಿ ಹೋದಾಗಲೂ ನನ್ನ ಮುಖ ನೋಡದೆಯೇ ನನ್ನ ಮಗಳು ನನ್ನನ್ನು ನಿರಾಕರಿಸುತ್ತಾಳೆ. ಅವಳ ಮುಂದಿನ ಭವಿಷ್ಯದ ಗತಿ..? ನಾನಿಲ್ಲದೆಯೇ ಎಲ್ಲರೂ, ಎಲ್ಲವೂ ಸಾಂಗವಾಗಿ ಸಾಗುತ್ತದೆ.
ಭಗವಂತ ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಸೃಷ್ಟಿ ಮಾಡಿರುತ್ತಾನೆ. ಅದನ್ನು ಗಂಟು ಹಾಕುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಎಲ್ಲರ ಭವಿಷ್ಯವನ್ನೂ ಗೋಜಲಾಗಿಸಿ ಬಿಡುತ್ತೇವೆ. ಇಷ್ಟೆಲ್ಲಾ ಪತ್ರದಲ್ಲಿ ಬರೆದ ನಾನು ನನ್ನ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ. ಬದುಕಿನ ಗೋಜಲಾದ ಗಂಟುಗಳನ್ನು ಬಿಡಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ, ಯಾವುದೋ ಗಂಟನ್ನು ಕಡಿದು ಹೊರಡುತ್ತಿದ್ದೇನೆ.
------------------------------------
(ತಿರುತಿರುಗಿ ತಿರುಗುತ್ತೆ ಬುಗುರಿ
ತಾನೇ ಸೋತು|
ತಿರೇಗುರುಳುವುದು ತನ್ನ ಬಲವ
ತಾಂ ಕಳೆದು||
ನರನುಮಂತೆಯೇ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ-ಮಂಕುತಿಮ್ಮ
ಡಿ.ವಿ.ಜಿ ಯವರ ಈ ಮಂಕುತಿಮ್ಮನ ಕಗ್ಗದ ಸಾಲುಗಲನ್ನು ಓದಿದ ನಂತರ ಆಲೋಚನೆಗೆ ಬಂದ ಕತೆ)
ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸುವಿರಿ ಎಂಬ ನಂಬಿಕೆಯೊಂದಿಗೆ
~ವಿಭಾ ವಿಶ್ವನಾಥ್
ಭಾನುವಾರ, ಜೂನ್ 7, 2020
ಪ್ರತಿಯೊಂದೂ ಬದಲಾಗುತ್ತದೆ
ಪ್ರತಿಯೊಂದೂ ಬದಲಾಗುವುದಿಲ್ಲಿ
ಕೊನೆಯುಸಿರಿನಿಂದಲೂ ಹೊಚ್ಚ ಹೊಸದಾಗಿ
ಪುನರಾರಂಭಿಸಬಹುದು
ಆದರೆ, ಆದದ್ದು ಆಗಿಹೋಗಿದೆ.. ಬದಲಾಗದಲ್ಲ
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದದ್ದೆಲ್ಲಾ ಆಗಿ ಹೋಗಿದೆ, ಬದಲಾಯಿಸಲಾಗದು
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದರೆ,
ಭವಿಷ್ಯದ ಪ್ರತಿಯೊಂದನ್ನೂ ಬದಲಾಯಿಸಬಹುದು
ಪ್ರತಿಯೊಂದೂ ಬದಲಾಗುತ್ತದೆ..
ನೀನು ಮತ್ತೊಮ್ಮೆ ಹೊಸದಾಗಿ ಪುನರಾರಂಭಿಸಬಹುದು
ನಿನ್ನ ಕೊನೆಯುಸಿರಿನಿಂದ..
-ಬ್ರೆಕ್ಟ್
(ಭಾವಾನುವಾದ : ವಿಭಾ ವಿಶ್ವನಾಥ್)
ಮೂಲ ಕವಿತೆ:
Everything Changes
Everything Changes, You can make
A fresh start with your final breath
But what has happened has happened, And the water
You once poured into the wine cannot be
Drained off again
What has happened has happened, The water
You once poured into the wine cannot be
Drained off again, but
Everything changes, You can make
A fresh start with your final breath
-Bertolt Brect
ಕೊನೆಯುಸಿರಿನಿಂದಲೂ ಹೊಚ್ಚ ಹೊಸದಾಗಿ
ಪುನರಾರಂಭಿಸಬಹುದು
ಆದರೆ, ಆದದ್ದು ಆಗಿಹೋಗಿದೆ.. ಬದಲಾಗದಲ್ಲ
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದದ್ದೆಲ್ಲಾ ಆಗಿ ಹೋಗಿದೆ, ಬದಲಾಯಿಸಲಾಗದು
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದರೆ,
ಭವಿಷ್ಯದ ಪ್ರತಿಯೊಂದನ್ನೂ ಬದಲಾಯಿಸಬಹುದು
ಪ್ರತಿಯೊಂದೂ ಬದಲಾಗುತ್ತದೆ..
ನೀನು ಮತ್ತೊಮ್ಮೆ ಹೊಸದಾಗಿ ಪುನರಾರಂಭಿಸಬಹುದು
ನಿನ್ನ ಕೊನೆಯುಸಿರಿನಿಂದ..
-ಬ್ರೆಕ್ಟ್
(ಭಾವಾನುವಾದ : ವಿಭಾ ವಿಶ್ವನಾಥ್)
ಮೂಲ ಕವಿತೆ:
Everything Changes
Everything Changes, You can make
A fresh start with your final breath
But what has happened has happened, And the water
You once poured into the wine cannot be
Drained off again
What has happened has happened, The water
You once poured into the wine cannot be
Drained off again, but
Everything changes, You can make
A fresh start with your final breath
-Bertolt Brect
ಭಾನುವಾರ, ಮೇ 31, 2020
ನಿಮ್ಮೆಲ್ಲಾ ಚಿಂತೆಗಳ ತೊರೆದುಬಿಡಿ..
ಚಿಂತೆಗಳೆಲ್ಲವನ್ನೂ ತೊರೆದುಬಿಡಿ
ಸಂಪೂರ್ಣ ಪರಿಶುದ್ಧ ಮನಸ್ಸಿನವರಾಗಿ
ಕನ್ನಡಿಯ ಪ್ರತಿಫಲಿಸುವ ಮುಖದಂತೆ
ಅದು ಯಾರ ಚಿತ್ರವನ್ನೂ ಹಿಡಿದಿಟ್ಟಿಲ್ಲ
ಕನ್ನಡಿಯ ಪರಿಶುದ್ಧತೆ ನಿನಗೆ ಬೇಕಾದಲ್ಲಿ
ನಿನ್ನನ್ನು ನೀನೊಮ್ಮೆ ಅವಲೋಕಿಸಿಕೋ
ಅಂತರಾಳದಲ್ಲಿ ಹುದುಗಿಹುದು ನಿರ್ಲಜ್ಜ ಸತ್ಯ
ಕನ್ನಡಿಯಂತೆ ಅದು ಪ್ರತಿಫಲಿಸುತ್ತಲಿದೆ
ಲೋಹವನ್ನುಜ್ಜಿ ಹೊಳಪು ಕೊಟ್ಟರೆ
ಕನ್ನಡಿಯಂತೆ ಹೊಳೆಯಬಹುದು
ಹೃದಯದ ಕನ್ನಡಿಗೆ ಬೇಕಿರುವುದು
ಯಾವ ರೀತಿಯ ಹೊಳಪು..?
ಹೃದಯಕ್ಕೂ, ಕನ್ನಡಿಗೂ ನಡುವೆ
ಇರುವುದೊಂದೇ ವ್ಯತ್ಯಾಸ:
ಹೃದಯ ಗುಟ್ಟುಗಳನ್ನು ಮರೆಮಾಚುತ್ತದೆ
ಆದರೆ, ಕನ್ನಡಿ ಮರೆಮಾಚದಲ್ಲ
~ ರೂಮಿ
(ಭಾವಾನುವಾದ: ವಿಭಾ ವಿಶ್ವನಾಥ್)
(ಮೂಲ ಕವಿತೆ)
Let go of Your Worries
---------------------------------------
Let go of your worries
and be completely clear-hearted,
like the face of a mirror
that contains no images
If you want a clear mirror,
behold yourself
and see the shameless truth,
which the mirror reflects
If metal can be polished
to a mirror-like finish
what polishing might the mirror
of the heart require?
Between the mirror and the heart
is this single difference:
the heart conceals secrets,
while the mirror does not.
~Rumi
ಸಂಪೂರ್ಣ ಪರಿಶುದ್ಧ ಮನಸ್ಸಿನವರಾಗಿ
ಕನ್ನಡಿಯ ಪ್ರತಿಫಲಿಸುವ ಮುಖದಂತೆ
ಅದು ಯಾರ ಚಿತ್ರವನ್ನೂ ಹಿಡಿದಿಟ್ಟಿಲ್ಲ
ಕನ್ನಡಿಯ ಪರಿಶುದ್ಧತೆ ನಿನಗೆ ಬೇಕಾದಲ್ಲಿ
ನಿನ್ನನ್ನು ನೀನೊಮ್ಮೆ ಅವಲೋಕಿಸಿಕೋ
ಅಂತರಾಳದಲ್ಲಿ ಹುದುಗಿಹುದು ನಿರ್ಲಜ್ಜ ಸತ್ಯ
ಕನ್ನಡಿಯಂತೆ ಅದು ಪ್ರತಿಫಲಿಸುತ್ತಲಿದೆ
ಲೋಹವನ್ನುಜ್ಜಿ ಹೊಳಪು ಕೊಟ್ಟರೆ
ಕನ್ನಡಿಯಂತೆ ಹೊಳೆಯಬಹುದು
ಹೃದಯದ ಕನ್ನಡಿಗೆ ಬೇಕಿರುವುದು
ಯಾವ ರೀತಿಯ ಹೊಳಪು..?
ಹೃದಯಕ್ಕೂ, ಕನ್ನಡಿಗೂ ನಡುವೆ
ಇರುವುದೊಂದೇ ವ್ಯತ್ಯಾಸ:
ಹೃದಯ ಗುಟ್ಟುಗಳನ್ನು ಮರೆಮಾಚುತ್ತದೆ
ಆದರೆ, ಕನ್ನಡಿ ಮರೆಮಾಚದಲ್ಲ
~ ರೂಮಿ
(ಭಾವಾನುವಾದ: ವಿಭಾ ವಿಶ್ವನಾಥ್)
(ಮೂಲ ಕವಿತೆ)
Let go of Your Worries
---------------------------------------
Let go of your worries
and be completely clear-hearted,
like the face of a mirror
that contains no images
If you want a clear mirror,
behold yourself
and see the shameless truth,
which the mirror reflects
If metal can be polished
to a mirror-like finish
what polishing might the mirror
of the heart require?
Between the mirror and the heart
is this single difference:
the heart conceals secrets,
while the mirror does not.
~Rumi
ಭಾನುವಾರ, ಮೇ 24, 2020
ಪ್ರತಿನುಡಿಯ ಪ್ರೀತಿ ಪತ್ರ
ಒಲವಿನ ಅರಮನೆಯೊಡತಿಗೆ,
ಯಾಕೋ, ಕೆಲವೊಮ್ಮೆ ಮಾತಿಗಿಂತ ಅಕ್ಷರಗಳೇ ಪ್ರಿಯವಾಗುತ್ತವೆ ಭಾವನೆಗಳನ್ನು ಬಿಚ್ಚಿಡಲು. ಮಾತುಗಳಲ್ಲಿ ಭಾವ ಇರಬಹುದೇನೋ ಆದರೆ ನನಗೆ ಪ್ರಿಯವಾದದ್ದು ಅಕ್ಷರವೇ.. ಇದು ನಿನಗೂ ತಿಳಿದ ವಿಚಾರವೇ. ಹೀಗೇ ಅಲ್ಲವೇ ನನ್ನ ನಿನ್ನ ಪರಿಚಯವಾದದ್ದು, ಪರಿಚಯ ಸ್ನೇಹವಾಗಿ ನಂತರ ಪ್ರೀತಿಯೆಡೆಗೆ ತಿರುಗಿದ್ದು. ಆನಂತರ ವಿವಾಹವೂ ಆಯಿತು ಆದರೆ ಈಗ ನಿನಗೆ ಪ್ರೀತಿ ಕಡಿಮೆಯಾಗಿದೆ ಎಂದೆನಿಸುತ್ತಿದೆ. ಹೌದಲ್ಲವೇ..? ನೀನು ಮಾತಲ್ಲಿ ಎಲ್ಲವನ್ನೂ ಹೇಳಿ ನಿರಾಳವಾಗಿ ಬಿಡುತ್ತೀಯ. ಆದರೆ, ನಾನು..? ಆಡಲೂ ಆಗದೆ, ಸುಮ್ಮನೆ ಇರಲೂ ಆಗದೆ ತಳಮಳಿಸುತ್ತೇನೆ.
ಮೊದಲಿಗೆ ನಿನಗೆ ಪ್ರೀತಿ ಹುಟ್ಟಿದ್ದು ನನ್ನ ಮೇಲಲ್ಲ, ನನ್ನ ಬರಹಗಳ ಮೇಲೆ. ಆ ಭಾವಗಳು, ಅಕ್ಷರಗಳ ಮೇಲೆ. ಪ್ರೇಮ, ಪ್ರೀತಿಗಳು ಕಥೆ, ಕವನಗಳಲ್ಲಿ ಹಿಡಿಯಾಗಿ ಸಿಗುತ್ತವೆ. ಆದರೆ, ಅವುಗಳನ್ನು ಬಂಧಿಸಿ ಬದುಕಲ್ಲಿಯೂ ಹಿಡಿದಿಟ್ಟುಕೊಳ್ಳಲು ನಂಬಿಕೆ ಎಂಬ ತಳಹದಿ ಬಹಳವೇ ಮುಖ್ಯ.
"ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು" ಎಂಬ ಕವಿವಾಣಿ ಕೇಳಿಯೇ ಇರುತ್ತೀಯ. ಬದುಕಿನಲ್ಲಿ ನೆಮ್ಮದಿಯಾಗಿರಲು ಒಲವು, ನಂಬಿಕೆ ಎರಡೂ ಬಹಳವೇ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಬ ಲೇಖಕ ಅಥವಾ ಕವಿ ಭಾವಗಳಲ್ಲಿ ಜೀವಿಸುತ್ತಾನೆ. ಆ ಭಾವಗಳು ಅವನವೇ ಆಗಿರಬೇಕೆಂಬ ನಿಯಮವಿಲ್ಲ. ಬರವಣಿಗೆಯಲ್ಲಿ ಒಮ್ಮೆ ಬಿಚ್ಚಿಟ್ಟಲ್ಲಿ ಆಗ ಅವನು ನಿರಾಳ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಎಂದಲ್ಲ. ಆದರೆ, ನನಗೆ ಇದು ಹೆಚ್ಚು ಅನ್ವಯವಾಗುತ್ತದೆ.
ಪ್ರೀತಿಸುವವರನ್ನು ನಾವು ಅಂದುಕೊಂಡಂತೆ ಬದುಕಬೇಕು ಎಂದು ಬಯಸಿದಲ್ಲಿ ಅವರು ನಾವು ಇಷ್ಟಪಟ್ಟ ವ್ಯಕ್ತಿಗಳಾಗಿ ಉಳಿಯುವುದೇ ಇಲ್ಲ. ನಮಗೆ ಬೇಕಾದಂತೆ ಅವರನ್ನು ರೂಪಿಸಿಕೊಳ್ಳಬಯಸಿದಲ್ಲಿ ನಾವು ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅವರು ಇರುವಂತೆಯೇ ಅವರನ್ನು ಒಪ್ಪಿಕೊಂಡು ಬದುಕು ಸಾಗಿಸುವಲ್ಲಿ ಪ್ರೀತಿ ಅಡಗಿದೆ.
ಪ್ರೀತಿ ಎಂಬುದು "ಐ ಲವ್ ಯು" ಎಂದು ಹೇಳುವುದರಲ್ಲಿ ಮಾತ್ರ ಇಲ್ಲ. ನೀನು ಗಮನಿಸಿರುತ್ತೀಯ.. ನಮ್ಮ ಅಜ್ಜ-ಅಜ್ಜಿಯೋ ಅಥವಾ ಅಪ್ಪ-ಅಮ್ಮನೋ ಪ್ರತಿ ದಿನ "ಐ ಲವ್ ಯು" ಎಂದೋ ಅಥವಾ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದರಲ್ಲಿಯೋ ಅವರ ಪ್ರೀತಿ ತುಂಬಿರುವುದಿಲ್ಲ. ಅವರ ಪ್ರೀತಿ ಅವರ ಬದುಕಿನಲ್ಲಿ, ಬದುಕುವ ರೀತಿಯಲ್ಲಿ, ಪರಸ್ಪರರನ್ನು ಅರ್ಥೈಸಿಕೊಂಡು ಬದುಕುವುದರಲ್ಲಿ ತುಂಬಿದೆ.
ಬದುಕಿನ ಸಣ್ಣ-ಪುಟ್ಟ ವಿಚಾರಗಳಿಗೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಅದಕ್ಕೆ ಕಾರಣ ಕೆಲಸದ ಒತ್ತಡ ಅಷ್ಟೇ.. ನೀನು ಅದನ್ನು ಅರ್ಥೈಸಿಕೊಂಡು ಸಹಕರಿಸುವೆ ಎಂದುಕೊಂಡಿದ್ದೆ. ನಮ್ಮ ಸಣ್ಣ ಮುನಿಸು ಅಥವಾ ಸರಿಯಾಗಿ ಅರ್ಥೈಸಿಕೊಳ್ಳದಿರುವಿಕೆ ಮುಂದೊಂದು ದಿನ ದೊಡ್ಡ ಮುನಿಸಿಗೆ ಕಾರಣವಾಗಬಹುದು. ಇಬ್ಬರೂ ಅದಕ್ಕೆ ದಾರಿ ಮಾಡಿಕೊಡದಿರೋಣ.
ನನಗೆ ಮನಬಿಚ್ಚಿ ಮಾತನಾಡಲು ಸಂಕೋಚ ಆದರೆ ಅದಕ್ಕೆ ತೆರೆ ಎಳೆಯಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದಷ್ಟು ಪ್ರಯತ್ನಿಸುವೆ ಆಗದಿದ್ದರೆ ದಿನವೂ ಒಂದೊಂದು ಪತ್ರ ಬರೆಯುವೆ.
ಡಿಜಿಟಲ್ ಯುಗದಲ್ಲೂ ಪ್ರೀತಿಯ ಮಡದಿಗೊಂದು ಪ್ರೇಮ ಪತ್ರ. ಜೀವನ ಪ್ರೀತಿಯನ್ನು ಕಾಪಿಟ್ಟುಕೊಳ್ಳೋಣ. ನಮ್ಮ ಹವ್ಯಾಸಗಳನ್ನು ಮುಂದುವರಿಸುತ್ತಾ, ಮುನಿಸುಗಳನ್ನು ಮರೆತು, ಪರಸ್ಪರರನ್ನು ದೂರದೆ ಮುಂದಿನ ಬದುಕನ್ನು ಪ್ರೀತಿಯಿಂದ ಸವಿಯೋಣ.
ಇಂತಿ
ದಿನವೂ ಪತ್ರ ಬರೆಯುವ ನಿನ್ನವ
----------
~ವಿಭಾ ವಿಶ್ವನಾಥ್
ಯಾಕೋ, ಕೆಲವೊಮ್ಮೆ ಮಾತಿಗಿಂತ ಅಕ್ಷರಗಳೇ ಪ್ರಿಯವಾಗುತ್ತವೆ ಭಾವನೆಗಳನ್ನು ಬಿಚ್ಚಿಡಲು. ಮಾತುಗಳಲ್ಲಿ ಭಾವ ಇರಬಹುದೇನೋ ಆದರೆ ನನಗೆ ಪ್ರಿಯವಾದದ್ದು ಅಕ್ಷರವೇ.. ಇದು ನಿನಗೂ ತಿಳಿದ ವಿಚಾರವೇ. ಹೀಗೇ ಅಲ್ಲವೇ ನನ್ನ ನಿನ್ನ ಪರಿಚಯವಾದದ್ದು, ಪರಿಚಯ ಸ್ನೇಹವಾಗಿ ನಂತರ ಪ್ರೀತಿಯೆಡೆಗೆ ತಿರುಗಿದ್ದು. ಆನಂತರ ವಿವಾಹವೂ ಆಯಿತು ಆದರೆ ಈಗ ನಿನಗೆ ಪ್ರೀತಿ ಕಡಿಮೆಯಾಗಿದೆ ಎಂದೆನಿಸುತ್ತಿದೆ. ಹೌದಲ್ಲವೇ..? ನೀನು ಮಾತಲ್ಲಿ ಎಲ್ಲವನ್ನೂ ಹೇಳಿ ನಿರಾಳವಾಗಿ ಬಿಡುತ್ತೀಯ. ಆದರೆ, ನಾನು..? ಆಡಲೂ ಆಗದೆ, ಸುಮ್ಮನೆ ಇರಲೂ ಆಗದೆ ತಳಮಳಿಸುತ್ತೇನೆ.
ಮೊದಲಿಗೆ ನಿನಗೆ ಪ್ರೀತಿ ಹುಟ್ಟಿದ್ದು ನನ್ನ ಮೇಲಲ್ಲ, ನನ್ನ ಬರಹಗಳ ಮೇಲೆ. ಆ ಭಾವಗಳು, ಅಕ್ಷರಗಳ ಮೇಲೆ. ಪ್ರೇಮ, ಪ್ರೀತಿಗಳು ಕಥೆ, ಕವನಗಳಲ್ಲಿ ಹಿಡಿಯಾಗಿ ಸಿಗುತ್ತವೆ. ಆದರೆ, ಅವುಗಳನ್ನು ಬಂಧಿಸಿ ಬದುಕಲ್ಲಿಯೂ ಹಿಡಿದಿಟ್ಟುಕೊಳ್ಳಲು ನಂಬಿಕೆ ಎಂಬ ತಳಹದಿ ಬಹಳವೇ ಮುಖ್ಯ.
"ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು" ಎಂಬ ಕವಿವಾಣಿ ಕೇಳಿಯೇ ಇರುತ್ತೀಯ. ಬದುಕಿನಲ್ಲಿ ನೆಮ್ಮದಿಯಾಗಿರಲು ಒಲವು, ನಂಬಿಕೆ ಎರಡೂ ಬಹಳವೇ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಬ ಲೇಖಕ ಅಥವಾ ಕವಿ ಭಾವಗಳಲ್ಲಿ ಜೀವಿಸುತ್ತಾನೆ. ಆ ಭಾವಗಳು ಅವನವೇ ಆಗಿರಬೇಕೆಂಬ ನಿಯಮವಿಲ್ಲ. ಬರವಣಿಗೆಯಲ್ಲಿ ಒಮ್ಮೆ ಬಿಚ್ಚಿಟ್ಟಲ್ಲಿ ಆಗ ಅವನು ನಿರಾಳ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಎಂದಲ್ಲ. ಆದರೆ, ನನಗೆ ಇದು ಹೆಚ್ಚು ಅನ್ವಯವಾಗುತ್ತದೆ.
ಪ್ರೀತಿಸುವವರನ್ನು ನಾವು ಅಂದುಕೊಂಡಂತೆ ಬದುಕಬೇಕು ಎಂದು ಬಯಸಿದಲ್ಲಿ ಅವರು ನಾವು ಇಷ್ಟಪಟ್ಟ ವ್ಯಕ್ತಿಗಳಾಗಿ ಉಳಿಯುವುದೇ ಇಲ್ಲ. ನಮಗೆ ಬೇಕಾದಂತೆ ಅವರನ್ನು ರೂಪಿಸಿಕೊಳ್ಳಬಯಸಿದಲ್ಲಿ ನಾವು ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅವರು ಇರುವಂತೆಯೇ ಅವರನ್ನು ಒಪ್ಪಿಕೊಂಡು ಬದುಕು ಸಾಗಿಸುವಲ್ಲಿ ಪ್ರೀತಿ ಅಡಗಿದೆ.
ಪ್ರೀತಿ ಎಂಬುದು "ಐ ಲವ್ ಯು" ಎಂದು ಹೇಳುವುದರಲ್ಲಿ ಮಾತ್ರ ಇಲ್ಲ. ನೀನು ಗಮನಿಸಿರುತ್ತೀಯ.. ನಮ್ಮ ಅಜ್ಜ-ಅಜ್ಜಿಯೋ ಅಥವಾ ಅಪ್ಪ-ಅಮ್ಮನೋ ಪ್ರತಿ ದಿನ "ಐ ಲವ್ ಯು" ಎಂದೋ ಅಥವಾ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದರಲ್ಲಿಯೋ ಅವರ ಪ್ರೀತಿ ತುಂಬಿರುವುದಿಲ್ಲ. ಅವರ ಪ್ರೀತಿ ಅವರ ಬದುಕಿನಲ್ಲಿ, ಬದುಕುವ ರೀತಿಯಲ್ಲಿ, ಪರಸ್ಪರರನ್ನು ಅರ್ಥೈಸಿಕೊಂಡು ಬದುಕುವುದರಲ್ಲಿ ತುಂಬಿದೆ.
ಬದುಕಿನ ಸಣ್ಣ-ಪುಟ್ಟ ವಿಚಾರಗಳಿಗೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಅದಕ್ಕೆ ಕಾರಣ ಕೆಲಸದ ಒತ್ತಡ ಅಷ್ಟೇ.. ನೀನು ಅದನ್ನು ಅರ್ಥೈಸಿಕೊಂಡು ಸಹಕರಿಸುವೆ ಎಂದುಕೊಂಡಿದ್ದೆ. ನಮ್ಮ ಸಣ್ಣ ಮುನಿಸು ಅಥವಾ ಸರಿಯಾಗಿ ಅರ್ಥೈಸಿಕೊಳ್ಳದಿರುವಿಕೆ ಮುಂದೊಂದು ದಿನ ದೊಡ್ಡ ಮುನಿಸಿಗೆ ಕಾರಣವಾಗಬಹುದು. ಇಬ್ಬರೂ ಅದಕ್ಕೆ ದಾರಿ ಮಾಡಿಕೊಡದಿರೋಣ.
ನನಗೆ ಮನಬಿಚ್ಚಿ ಮಾತನಾಡಲು ಸಂಕೋಚ ಆದರೆ ಅದಕ್ಕೆ ತೆರೆ ಎಳೆಯಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದಷ್ಟು ಪ್ರಯತ್ನಿಸುವೆ ಆಗದಿದ್ದರೆ ದಿನವೂ ಒಂದೊಂದು ಪತ್ರ ಬರೆಯುವೆ.
ಡಿಜಿಟಲ್ ಯುಗದಲ್ಲೂ ಪ್ರೀತಿಯ ಮಡದಿಗೊಂದು ಪ್ರೇಮ ಪತ್ರ. ಜೀವನ ಪ್ರೀತಿಯನ್ನು ಕಾಪಿಟ್ಟುಕೊಳ್ಳೋಣ. ನಮ್ಮ ಹವ್ಯಾಸಗಳನ್ನು ಮುಂದುವರಿಸುತ್ತಾ, ಮುನಿಸುಗಳನ್ನು ಮರೆತು, ಪರಸ್ಪರರನ್ನು ದೂರದೆ ಮುಂದಿನ ಬದುಕನ್ನು ಪ್ರೀತಿಯಿಂದ ಸವಿಯೋಣ.
ಇಂತಿ
ದಿನವೂ ಪತ್ರ ಬರೆಯುವ ನಿನ್ನವ
----------
~ವಿಭಾ ವಿಶ್ವನಾಥ್
ಭಾನುವಾರ, ಮೇ 17, 2020
ಬಡಬಡಿಕೆ

ಕೆಲವೊಮ್ಮೆ ಕುರುಡಾಗಬೇಕು
ಸತ್ಯದ ಪರದೆ ಹೊದ್ದ ಸುಳ್ಳುಗಳಿಗೆ
ಹಲವೊಮ್ಮೆ ಕಿವುಡಾಗಬೇಕು
ಬಣ್ಣ ಬಣ್ಣದ ಮಾತುಗಳಿಗೆ
ಆಗಾಗ ಬರಡಾಗಬೇಕು
ಅತಿ ಭಾವುಕತೆಗೆ ಸ್ಪಂದಿಸದಂತೆ
ಕೆಲವೊಮ್ಮೆ ಮೂಕವಾಗಬೇಕು
ಇಷ್ಟವಾಗದ ಮಾತುಗಳಿಗೆ
ಹಲವೊಮ್ಮೆ ಸುಮ್ಮನಾಗಬೇಕು
ನಮ್ಮ ತಪ್ಪಿಲ್ಲದಿದ್ದರೂ ಒಪ್ಪಿಗೆ ಎಂಬಂತೆ
ಕೊನೆಗೊಮ್ಮೆ ಕಲ್ಲಾಗಬೇಕು
ರಾಮಾಯಣದ ಅಹಲ್ಯೆಯಂತೆ
ಶಾಶ್ವತವಾಗಿ ಮರೆಯಾಗಿಬಿಡಬೇಕು
ಮತ್ತೆಂದೂ ಮರಳಿ ಬಾರದಂತೆ
~ವಿಭಾ ವಿಶ್ವನಾಥ್
ಸತ್ಯದ ಪರದೆ ಹೊದ್ದ ಸುಳ್ಳುಗಳಿಗೆ
ಹಲವೊಮ್ಮೆ ಕಿವುಡಾಗಬೇಕು
ಬಣ್ಣ ಬಣ್ಣದ ಮಾತುಗಳಿಗೆ
ಆಗಾಗ ಬರಡಾಗಬೇಕು
ಅತಿ ಭಾವುಕತೆಗೆ ಸ್ಪಂದಿಸದಂತೆ
ಕೆಲವೊಮ್ಮೆ ಮೂಕವಾಗಬೇಕು
ಇಷ್ಟವಾಗದ ಮಾತುಗಳಿಗೆ
ಹಲವೊಮ್ಮೆ ಸುಮ್ಮನಾಗಬೇಕು
ನಮ್ಮ ತಪ್ಪಿಲ್ಲದಿದ್ದರೂ ಒಪ್ಪಿಗೆ ಎಂಬಂತೆ
ಕೊನೆಗೊಮ್ಮೆ ಕಲ್ಲಾಗಬೇಕು
ರಾಮಾಯಣದ ಅಹಲ್ಯೆಯಂತೆ
ಶಾಶ್ವತವಾಗಿ ಮರೆಯಾಗಿಬಿಡಬೇಕು
ಮತ್ತೆಂದೂ ಮರಳಿ ಬಾರದಂತೆ
~ವಿಭಾ ವಿಶ್ವನಾಥ್
ಭಾನುವಾರ, ಮೇ 10, 2020
ಜೀವನಪ್ರೀತಿ
ಅವನು ನನಗೆ ಅಗಾಧವಾಗಿ ಹೇಳಿಕೊಟ್ಟ ಪಾಠವೇ ಬದುಕನ್ನು ಪ್ರೀತಿಸುವುದನ್ನು, ಪ್ರೀತಿಸುವ ಪಾಠವನ್ನು. ಅವನನ್ನು ಮಾತ್ರ ಪ್ರೀತಿಸಿದ್ದೆ ಎಂದುಕೊಂಡಿದ್ದೆ ಆದರೆ ಬದುಕಿನ ಗತಿ, ತೀರ್ಮಾನ ಮತ್ತು ಜೀವನದ ಬಗೆ ಬೇರೆಯೇ ಇದ್ದಿತು ಎಂಬುದು ನನಗಾಗ ತಿಳಿದಿರಲಿಲ್ಲ. ನನಗಷ್ಟೇ ಅಲ್ಲ. ಬದುಕಿನ ಆ ಕಾಲಘಟ್ಟದಲ್ಲಿ ಮತ್ತಾರಿಗೂ ಅದರ ಕುರಿತು ತಿಳಿದಿರಲಾರದು. ನಮ್ಮದೇ ಪುಟ್ಟ ಪ್ರಪಂಚವನ್ನು ಸೃಷ್ಟಿ ಮಾಡಿಕೊಂಡು ಅದರಲ್ಲೇ ಕಳೆದುಹೋಗಿರುತ್ತೇವೆ. ಅದರಲ್ಲಿ ನಾವು ಮತ್ತು ನಮ್ಮವರಿಗೆ ಅದರಲ್ಲೂ ನಮ್ಮ ಅತ್ಯಾಪ್ತರಿಗಷ್ಟೇ ಜಾಗ. ನಮ್ಮದೇ ಪುಟ್ಟ ಪ್ರಪಂಚದಲ್ಲಿ ಕೆಲವೊಮ್ಮೆ ಬೇರಾರಿಗೂ ಜಾಗವಿಲ್ಲ. ಬರೀ ನಾವಷ್ಟೇ. ಕೆಲವರು ಹಣದ ವ್ಯಾಮೋಹದ ಹಿಂದೆ ಬೀಳುತ್ತಾ ಅದನ್ನೆಲ್ಲಾ ಮರೆತೇ ಬಿಟ್ಟಿರುತ್ತಾರೆ. ಆದರೆ ಅವನು ನನಗೆ ಕಲಿಸಿದ್ದು ಪ್ರೀತಿಸುವುದನ್ನು.. ಎಲ್ಲರನ್ನೂ, ಎಲ್ಲವನ್ನೂ ಅಗಾಧವಾಗಿ ಮತ್ತು ಗಾಢವಾಗಿ ಅನುಭವಿಸುವುದನ್ನು. ದ್ವೇಷ, ಅಸೂಯೆಗಳನ್ನು ಪ್ರೀತಿಯಿಂದ ಅಳಿಸಬಹುದೆಂಬ ದೊಡ್ಡ ಸತ್ಯವನ್ನು ಮತ್ತಾವ ಕಾಲರಾಯನೂ ಅಳಿಸದಂತೆ ಅಚ್ಚಳಿಯದಂತೆ ಉಳಿಸಿ ಹೋದ. ಅವನ ಮೇಲಿನ ಪ್ರೀತಿ, ಗೌರವ ಮತ್ತು ಅವನು ಹೇಳಿಕೊಟ್ಟ ಪಾಠ ಉಸಿರಿನೊಡನೆ ಎಷ್ಟು ಬೆರೆತಿತ್ತೆಂದರೆ ಅವನನ್ನು ಕರೆದೊಯ್ದ ಜವರಾಯನನ್ನು ಸಹಾ ದ್ವೇಷಿಸಲಾಗಲಿಲ್ಲ, ಶಪಿಸಲಾಗಲಿಲ್ಲ. ಅದಲ್ಲದೇ ಅವನು ಪ್ರತಿಕ್ಷಣ ನನ್ನೊಡನೆ ಇರುವನೆಂಬ ಭಾವ ಕಾಡುತ್ತಿದೆ.
ಅವನು ಮತ್ತಾರೂ ಅಲ್ಲ ಹೆತ್ತವರೇ ಆರಿಸಿ, ಅಕ್ಷತೆ ಹಾಕಿ ನನ್ನೊಡನೆ ಗಂಟು ಹಾಕಿದ್ದ ಸಂಗಾತಿ ನಕುಲ್. ಅವನಿಗೂ ನನಗೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುವವಳು ನಾನಾದರೆ, ನನಗೆ ವಿರುದ್ಧ ಅವನು. ಎಲ್ಲಾ ಭಾವನೆಗಳನ್ನು ಅಳೆದು ತೂಗಿ ಕೊಡುವವಳು ನಾನಾದರೆ, ತನಗೆ ದಕ್ಕುವ ಭಾವನೆಗಳನ್ನು ಇಡಿಯಾಗಿ ಹಂಚುವವನು ಅವನು. ಬದುಕಿನ ನಂಟು ಬೆಸೆದುಕೊಳ್ಳುವುದೇ ಹೀಗೆ ಎನ್ನಿಸುತ್ತದೆ. ವಿರುದ್ಧ ಧ್ರುವಗಳು ಒಂದಾಗುವ ಪರಿ ಹೀಗೆಯೇ ಇರಬಹುದೇ.. ಆದರೆ, ವಿರುದ್ಧ ಧ್ರುವಗಳು ಒಂದಾದ ಮೇಲೂ ದೂರವಾಗುವ ಮಾತೇ ಇಲ್ಲದೆ ಬೆಸೆದುಕೊಳ್ಳುವುದು, ವಿರುದ್ಧ ಧ್ರುವಗಳು ಒಂದೇ ಎಂಬಷ್ಟು ಲೀನವಾಗಿ ಇರುವ ಬಂಧಕ್ಕೆ ದಾಂಪತ್ಯ ಎನ್ನಬಹುದೇ..??
ಜೀವನದ ಕುರಿತು, ಪ್ರೀತಿಯ ಕುರಿತು ಅನುಭವಿಸುವುದನ್ನು ನಾನು ಕಲಿತದ್ದೇ ಅವನಿಂದ.
ಬೆಳಗಿನ ಸೂರ್ಯೋದಯದ ವಾಕ್, ತೊರೆಯಲ್ಲಿ ಕಾಲು ಇಳಿ ಬಿಟ್ಟು ಕೂತಾಗ ಮರಿ ಮೀನುಗಳು ಕಾಲಿಗೆ ಕಚಗುಳಿ ಇಡುವ ಪರಿ, ಮಳೆ ಬಿದ್ದಾಗಿನ ಮಣ್ಣಿನ ಗಮದ ಆಸ್ವಾದನೆ, ಪರಿಸರದ ಮಧ್ಯದ ಮೌನದ ತನ್ಮಯತೆ, ಜಾತ್ರೆಯಲ್ಲಿನ ರಾಟೆ, ಬಲೂನು, ಮಳೆಯ ಇರುಚಲು ಹೀಗೇ ಮುಂತಾದ ಎಲ್ಲವನ್ನೂ ಅನುಭವಿಸಲು ಕಲಿಸಿದ್ದು ಅವನೇ. ಬರೀ ಸಿಟಿಯಲ್ಲಿನ ಮಾಲ್, ಜನಜಂಗುಳಿಯ ಮಧ್ಯೆ ಬೆಳೆದವಳಿಗೆ ಇದೆಲ್ಲವೂ ಹೊಚ್ಚಹೊಸತು ಆದರೆ ಅವೆಲ್ಲದರಿಂದ ದೂರ ಓಡಬೇಕು ಎನ್ನಿಸಲಿಲ್ಲ. ಅದರೊಟ್ಟಿಗೇ ಬೆರೆತೆ. ಅವನ ಸಾಂಗತ್ಯವೇ ಅದೆಲ್ಲದಕ್ಕೂ ಕಾರಣ ಎನ್ನಿಸುತ್ತದೆ. ಅವನಿಲ್ಲದಿದ್ದರೆ, ಬಹುಶಃ ನಾನು ಬದುಕಿನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆನೇನೋ..
ಒಂದು ದಿನ ಅವನೊಡನೆ ಪ್ರಶ್ನಿಸಿದೆ. "ಬದುಕಿನಲ್ಲಿ ನಮಗೆ ಬಹಳ ಮುಖ್ಯವಾದುದು ಏನು?". ತಿಳಿ ಹಾಸ್ಯದ ಅವನ ಮಾತು ಆಗ ಗಂಭೀರವಾಗಿತ್ತು. "ಪ್ರೀತಿ ಬದುಕಿನಲ್ಲಿ ಬಹಳ ಮುಖ್ಯ. ಅದು ವ್ಯಕ್ತಿ ವ್ಯಕ್ತಿಯ ನಡುವಿನ ಪ್ರೀತಿಯಲ್ಲ, ಜೀವನಪ್ರೀತಿ. ಬದುಕಿನಲ್ಲಿ ಯಾರಿಲ್ಲದಿದ್ದರೂ ಬದುಕಬಲ್ಲೆವು ಆದರೆ ಒಮ್ಮೆ ಯೋಚಿಸಿ ನೋಡು. ಜೀವನಪ್ರೀತಿ ಇಲ್ಲದಿದ್ದರೆ ಬದುಕಿರಬಲ್ಲೆವಾ? ಹೇಳು. ಮನೆಯವರಿಗೋಸ್ಕರ ದುಡಿಯುತ್ತಿದ್ದೇವೆ ಎಂದು ಹೇಳುವವರೆಲ್ಲರೂ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ಆ ಕೆಲಸವನ್ನು ಅವರು ಪ್ರೀತಿಸದಿದ್ದರೆ ಅವರು ಯಾರಿಗೋಸ್ಕರವೋ ದುಡಿಯಬಲ್ಲರಾ? ಆತ್ಮಹತ್ಯೆಯ ಕಾರಣಗಳಲ್ಲಿ ಒಂದು ಜೀವನಪ್ರೀತಿಯನ್ನು ಕಳೆದುಕೊಳ್ಳುವುದು. ಹಣಕ್ಕಾಗಿ, ಪ್ರತಿಷ್ಠೆಗಾಗಿ ಎಂದು ಹೇಳುವವರದೆಲ್ಲರದ್ದೂ ನಾಲಿಗೆಯ ಮೇಲ್ತುದಿಯ ಮಾತಾಗಿರಬಹುದು ಆದರೆ ಕೆಲಸದ ಬಗ್ಗೆ, ಜೀವನದ ಬಗ್ಗೆ ಕೊಂಚವೂ ಪ್ರೀತಿಯಿಲ್ಲದಿದ್ದರೆ ಅದು ನರಕದಂತೆ ಭಾಸವಾಗುತ್ತದೆ. ಅರೆಕ್ಷಣವೂ ಅಲ್ಲಿರಲಾರರು. ಅನಿವಾರ್ಯ ಎನ್ನಬಹುದು ಆದರೆ ಅವರಿಗೇ ಅರಿವಿಲ್ಲದಂತೆ ಅಲ್ಲೊಂದು ಮಮತೆಯ ಬಂಧ ಬೆಸೆದುಕೊಂಡಿರುತ್ತದೆ. ಎಷ್ಟೇ ಕಲ್ಲು ಮನಸ್ಸಿನವನಾದರೂ ಆಳದಲ್ಲಿ ಎಲ್ಲೋ ಜೀವನಪ್ರೀತಿ ಸೆಳೆಯೊಡೆದಿರುತ್ತದೆ.
ಬದುಕಿನಲ್ಲಿ ತಂದೆ-ತಾಯಿಯಿಲ್ಲದೆ ಮಕ್ಕಳು, ಮಕ್ಕಳಿಲ್ಲದೆ ತಂದೆ-ತಾಯಿಯರು ಬದುಕುತ್ತಿದ್ದಾರೆ. ಗಂಡನಿಲ್ಲದೆ ಹೆಂಡತಿ, ಹೆಂಡತಿ ಇಲ್ಲದೆ ಗಂಡ ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ಅವರನ್ನು ಜೀವಂತವಾಗಿಡುವುದು ಜೀವನಪ್ರೀತಿ. ಬದುಕಿನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸು, ಮರು ಪ್ರೀತಿಯನ್ನು ನಿರೀಕ್ಷಿಸದೆ.. ನಿನಗಿಷ್ಟವಾಗದಿದ್ದರೆ ಅಲ್ಲಿಂದ, ಅವರಿಂದ ದೂರ ಇದ್ದುಬಿಡು ಆದರೆ ಯಾರನ್ನೂ ಸಹಾ ದ್ವೇಷ ಮಾಡಬೇಡ.. ಆ ವಿಧಿಯನ್ನೂ ಸಹಾ.."
ಅವನು ಅಂದು ಅಷ್ಟು ಭಾವುಕನಾಗಿದ್ದನ್ನು ನೋಡಿದ್ದು, ಕೇಳಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಯಾಕೆಂದರೆ, ಅಂದು ಊರಿನಿಂದ ಕಾರಿನಲ್ಲಿ ಸಿಟಿಗೆ ಬರುವಾಗ ಆದ ಅಪಘಾತದಲ್ಲಿ ನಾನು ಅವನನ್ನು ಕಳೆದುಕೊಂಡಿದ್ದೆ. ಆದರೆ, ಯಾಕಷ್ಟು ದೊಡ್ಡ ಮಾತುಕತೆ ನಡೆಯಿತು ಎಂಬುದರ ಅರಿವು ಅವನ ಉಪಸ್ಥಿತಿಯಲ್ಲಿ ನನಗಾಯಿತು. ಅವನ ಜೊತೆ ಇದ್ದಾಗ ಸ್ವಲ್ಪ ಬದಲಾಗಿದ್ದ ನಾನು ಅವನ ಅನುಪಸ್ಥಿತಿಯಲ್ಲಿ ಸಂಪೂರ್ಣ ಬದಲಾದೆ. ಜನರ ಬಾಯಲ್ಲಿ ಮೊದಮೊದಲಿಗೆ ಅದು ಆಡಿಕೊಳ್ಳುವ ವಿಷಯವಾಗಿತ್ತು ಆದರೆ ಈಗ ನಾನು ಅವರ ಮುಂದಿನ ಸಕಾರಾತ್ಮಕ ಉದಾಹರಣೆ.
ಯಾರನ್ನೋ ಕಳೆದುಕೊಂಡ ತಕ್ಷಣ ನಂತರದ ಬದುಕೇ ಇಲ್ಲ ಎಂದು ಭಾವಿಸುವುದು ಏತಕೆ? ಅಂದಾಕ್ಷಣಕ್ಕೆ ಬದುಕಿನಲ್ಲಿ ಅವರನ್ನು ಪ್ರೀತಿಸಿಯೇ ಇಲ್ಲ ಎಂದು ಅರ್ಥವಲ್ಲ ಆದರೆ ಎಲ್ಲವನ್ನೂ ಹೊಂದಿಸಿಕೊಂಡು ಮೊದಲಿನಂತೆಯೇ ಬದುಕಲು ಪ್ರೀತಿ ಬೇಕು ಅದುವೇ ಜೀವನಪ್ರೀತಿ.
~ವಿಭಾ ವಿಶ್ವನಾಥ್
ಅವನು ಮತ್ತಾರೂ ಅಲ್ಲ ಹೆತ್ತವರೇ ಆರಿಸಿ, ಅಕ್ಷತೆ ಹಾಕಿ ನನ್ನೊಡನೆ ಗಂಟು ಹಾಕಿದ್ದ ಸಂಗಾತಿ ನಕುಲ್. ಅವನಿಗೂ ನನಗೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುವವಳು ನಾನಾದರೆ, ನನಗೆ ವಿರುದ್ಧ ಅವನು. ಎಲ್ಲಾ ಭಾವನೆಗಳನ್ನು ಅಳೆದು ತೂಗಿ ಕೊಡುವವಳು ನಾನಾದರೆ, ತನಗೆ ದಕ್ಕುವ ಭಾವನೆಗಳನ್ನು ಇಡಿಯಾಗಿ ಹಂಚುವವನು ಅವನು. ಬದುಕಿನ ನಂಟು ಬೆಸೆದುಕೊಳ್ಳುವುದೇ ಹೀಗೆ ಎನ್ನಿಸುತ್ತದೆ. ವಿರುದ್ಧ ಧ್ರುವಗಳು ಒಂದಾಗುವ ಪರಿ ಹೀಗೆಯೇ ಇರಬಹುದೇ.. ಆದರೆ, ವಿರುದ್ಧ ಧ್ರುವಗಳು ಒಂದಾದ ಮೇಲೂ ದೂರವಾಗುವ ಮಾತೇ ಇಲ್ಲದೆ ಬೆಸೆದುಕೊಳ್ಳುವುದು, ವಿರುದ್ಧ ಧ್ರುವಗಳು ಒಂದೇ ಎಂಬಷ್ಟು ಲೀನವಾಗಿ ಇರುವ ಬಂಧಕ್ಕೆ ದಾಂಪತ್ಯ ಎನ್ನಬಹುದೇ..??
ಜೀವನದ ಕುರಿತು, ಪ್ರೀತಿಯ ಕುರಿತು ಅನುಭವಿಸುವುದನ್ನು ನಾನು ಕಲಿತದ್ದೇ ಅವನಿಂದ.
ಬೆಳಗಿನ ಸೂರ್ಯೋದಯದ ವಾಕ್, ತೊರೆಯಲ್ಲಿ ಕಾಲು ಇಳಿ ಬಿಟ್ಟು ಕೂತಾಗ ಮರಿ ಮೀನುಗಳು ಕಾಲಿಗೆ ಕಚಗುಳಿ ಇಡುವ ಪರಿ, ಮಳೆ ಬಿದ್ದಾಗಿನ ಮಣ್ಣಿನ ಗಮದ ಆಸ್ವಾದನೆ, ಪರಿಸರದ ಮಧ್ಯದ ಮೌನದ ತನ್ಮಯತೆ, ಜಾತ್ರೆಯಲ್ಲಿನ ರಾಟೆ, ಬಲೂನು, ಮಳೆಯ ಇರುಚಲು ಹೀಗೇ ಮುಂತಾದ ಎಲ್ಲವನ್ನೂ ಅನುಭವಿಸಲು ಕಲಿಸಿದ್ದು ಅವನೇ. ಬರೀ ಸಿಟಿಯಲ್ಲಿನ ಮಾಲ್, ಜನಜಂಗುಳಿಯ ಮಧ್ಯೆ ಬೆಳೆದವಳಿಗೆ ಇದೆಲ್ಲವೂ ಹೊಚ್ಚಹೊಸತು ಆದರೆ ಅವೆಲ್ಲದರಿಂದ ದೂರ ಓಡಬೇಕು ಎನ್ನಿಸಲಿಲ್ಲ. ಅದರೊಟ್ಟಿಗೇ ಬೆರೆತೆ. ಅವನ ಸಾಂಗತ್ಯವೇ ಅದೆಲ್ಲದಕ್ಕೂ ಕಾರಣ ಎನ್ನಿಸುತ್ತದೆ. ಅವನಿಲ್ಲದಿದ್ದರೆ, ಬಹುಶಃ ನಾನು ಬದುಕಿನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆನೇನೋ..
ಒಂದು ದಿನ ಅವನೊಡನೆ ಪ್ರಶ್ನಿಸಿದೆ. "ಬದುಕಿನಲ್ಲಿ ನಮಗೆ ಬಹಳ ಮುಖ್ಯವಾದುದು ಏನು?". ತಿಳಿ ಹಾಸ್ಯದ ಅವನ ಮಾತು ಆಗ ಗಂಭೀರವಾಗಿತ್ತು. "ಪ್ರೀತಿ ಬದುಕಿನಲ್ಲಿ ಬಹಳ ಮುಖ್ಯ. ಅದು ವ್ಯಕ್ತಿ ವ್ಯಕ್ತಿಯ ನಡುವಿನ ಪ್ರೀತಿಯಲ್ಲ, ಜೀವನಪ್ರೀತಿ. ಬದುಕಿನಲ್ಲಿ ಯಾರಿಲ್ಲದಿದ್ದರೂ ಬದುಕಬಲ್ಲೆವು ಆದರೆ ಒಮ್ಮೆ ಯೋಚಿಸಿ ನೋಡು. ಜೀವನಪ್ರೀತಿ ಇಲ್ಲದಿದ್ದರೆ ಬದುಕಿರಬಲ್ಲೆವಾ? ಹೇಳು. ಮನೆಯವರಿಗೋಸ್ಕರ ದುಡಿಯುತ್ತಿದ್ದೇವೆ ಎಂದು ಹೇಳುವವರೆಲ್ಲರೂ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ಆ ಕೆಲಸವನ್ನು ಅವರು ಪ್ರೀತಿಸದಿದ್ದರೆ ಅವರು ಯಾರಿಗೋಸ್ಕರವೋ ದುಡಿಯಬಲ್ಲರಾ? ಆತ್ಮಹತ್ಯೆಯ ಕಾರಣಗಳಲ್ಲಿ ಒಂದು ಜೀವನಪ್ರೀತಿಯನ್ನು ಕಳೆದುಕೊಳ್ಳುವುದು. ಹಣಕ್ಕಾಗಿ, ಪ್ರತಿಷ್ಠೆಗಾಗಿ ಎಂದು ಹೇಳುವವರದೆಲ್ಲರದ್ದೂ ನಾಲಿಗೆಯ ಮೇಲ್ತುದಿಯ ಮಾತಾಗಿರಬಹುದು ಆದರೆ ಕೆಲಸದ ಬಗ್ಗೆ, ಜೀವನದ ಬಗ್ಗೆ ಕೊಂಚವೂ ಪ್ರೀತಿಯಿಲ್ಲದಿದ್ದರೆ ಅದು ನರಕದಂತೆ ಭಾಸವಾಗುತ್ತದೆ. ಅರೆಕ್ಷಣವೂ ಅಲ್ಲಿರಲಾರರು. ಅನಿವಾರ್ಯ ಎನ್ನಬಹುದು ಆದರೆ ಅವರಿಗೇ ಅರಿವಿಲ್ಲದಂತೆ ಅಲ್ಲೊಂದು ಮಮತೆಯ ಬಂಧ ಬೆಸೆದುಕೊಂಡಿರುತ್ತದೆ. ಎಷ್ಟೇ ಕಲ್ಲು ಮನಸ್ಸಿನವನಾದರೂ ಆಳದಲ್ಲಿ ಎಲ್ಲೋ ಜೀವನಪ್ರೀತಿ ಸೆಳೆಯೊಡೆದಿರುತ್ತದೆ.
ಬದುಕಿನಲ್ಲಿ ತಂದೆ-ತಾಯಿಯಿಲ್ಲದೆ ಮಕ್ಕಳು, ಮಕ್ಕಳಿಲ್ಲದೆ ತಂದೆ-ತಾಯಿಯರು ಬದುಕುತ್ತಿದ್ದಾರೆ. ಗಂಡನಿಲ್ಲದೆ ಹೆಂಡತಿ, ಹೆಂಡತಿ ಇಲ್ಲದೆ ಗಂಡ ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ಅವರನ್ನು ಜೀವಂತವಾಗಿಡುವುದು ಜೀವನಪ್ರೀತಿ. ಬದುಕಿನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸು, ಮರು ಪ್ರೀತಿಯನ್ನು ನಿರೀಕ್ಷಿಸದೆ.. ನಿನಗಿಷ್ಟವಾಗದಿದ್ದರೆ ಅಲ್ಲಿಂದ, ಅವರಿಂದ ದೂರ ಇದ್ದುಬಿಡು ಆದರೆ ಯಾರನ್ನೂ ಸಹಾ ದ್ವೇಷ ಮಾಡಬೇಡ.. ಆ ವಿಧಿಯನ್ನೂ ಸಹಾ.."
ಅವನು ಅಂದು ಅಷ್ಟು ಭಾವುಕನಾಗಿದ್ದನ್ನು ನೋಡಿದ್ದು, ಕೇಳಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಯಾಕೆಂದರೆ, ಅಂದು ಊರಿನಿಂದ ಕಾರಿನಲ್ಲಿ ಸಿಟಿಗೆ ಬರುವಾಗ ಆದ ಅಪಘಾತದಲ್ಲಿ ನಾನು ಅವನನ್ನು ಕಳೆದುಕೊಂಡಿದ್ದೆ. ಆದರೆ, ಯಾಕಷ್ಟು ದೊಡ್ಡ ಮಾತುಕತೆ ನಡೆಯಿತು ಎಂಬುದರ ಅರಿವು ಅವನ ಉಪಸ್ಥಿತಿಯಲ್ಲಿ ನನಗಾಯಿತು. ಅವನ ಜೊತೆ ಇದ್ದಾಗ ಸ್ವಲ್ಪ ಬದಲಾಗಿದ್ದ ನಾನು ಅವನ ಅನುಪಸ್ಥಿತಿಯಲ್ಲಿ ಸಂಪೂರ್ಣ ಬದಲಾದೆ. ಜನರ ಬಾಯಲ್ಲಿ ಮೊದಮೊದಲಿಗೆ ಅದು ಆಡಿಕೊಳ್ಳುವ ವಿಷಯವಾಗಿತ್ತು ಆದರೆ ಈಗ ನಾನು ಅವರ ಮುಂದಿನ ಸಕಾರಾತ್ಮಕ ಉದಾಹರಣೆ.
ಯಾರನ್ನೋ ಕಳೆದುಕೊಂಡ ತಕ್ಷಣ ನಂತರದ ಬದುಕೇ ಇಲ್ಲ ಎಂದು ಭಾವಿಸುವುದು ಏತಕೆ? ಅಂದಾಕ್ಷಣಕ್ಕೆ ಬದುಕಿನಲ್ಲಿ ಅವರನ್ನು ಪ್ರೀತಿಸಿಯೇ ಇಲ್ಲ ಎಂದು ಅರ್ಥವಲ್ಲ ಆದರೆ ಎಲ್ಲವನ್ನೂ ಹೊಂದಿಸಿಕೊಂಡು ಮೊದಲಿನಂತೆಯೇ ಬದುಕಲು ಪ್ರೀತಿ ಬೇಕು ಅದುವೇ ಜೀವನಪ್ರೀತಿ.
~ವಿಭಾ ವಿಶ್ವನಾಥ್
ಭಾನುವಾರ, ಮೇ 3, 2020
ಎರಡು ದಡಗಳು
"ದಡ ದಾಟದೆ, ಇತ್ತ ನಿಂತು
ಸೇರಲಾಗದು ಎಂದೊಡನೆ..
ಮಾತ ನೆಚ್ಚಿ ಸುಮ್ಮನೆ ಕೂತು
ಕಾಲ ಕಳೆವವ ನಾನಲ್ಲ"
ಸಂಕೇತ್ ನ ಮೊಬೈಲ್ ಸಂದೇಶ ನೋಡಿದ ಸರಯೂ ಕೇಳಿದಳು. ಸಂದೇಶಕ್ಕಿಂತ ಹೀಗೇ ಮಾತನಾಡೋಣ ಅದೇ ಒಳಿತು. "ದಡದಲ್ಲಿರುವ ಪ್ರಯಾಣಿಕರು ಸೇರಬಹುದೇನೋ ಆದರೆ ದಡಗಳೆರಡೂ ಒಂದಾಗಲು ಸಾಧ್ಯವಿಲ್ಲ. ದಡಗಳೆರಡೂ ಒಂದಾಗಲು ಪ್ರವಾಹ ಬಂದಾಗ ಮಾತ್ರ ಸಾಧ್ಯ. ಅಲ್ಲವೇ?"
"ಮೂಲ ಒಂದೇ ಆದರೂ, ಹರಿವ ಕಾಲದ ಸೆಳೆತಕ್ಕೆ ಸಿಕ್ಕು ಬೇರೆಯಾಗುತ್ತವೆ. ಆದರೆ, ಅವುಗಳಿಂದಲೇ ಅಲ್ಲವೇ ನದಿಯ ಅಸ್ತಿತ್ವ??" ಎಂದನು ಸಂಕೇತ್.
"ಹೌದು, ನದಿಯ ಅಸ್ತಿತ್ವಕ್ಕೆ ಬೆಲೆ ಇರಬೇಕೆಂದರೆ ಅವು ಬೇರೆಯಾಗಿಯೇ ಬದುಕು ಸಾಗಿಸಬೇಕಲ್ಲವೇ..??" ಎಂದಳು ಸರಯೂ.
"ನೀರಿನ ಹರಿತ ದಡಗಳೆರಡನ್ನೂ ಹಿಡಿದಿಟ್ಟಿದೆ. ಹಾಗೇ ಪ್ರೀತಿ ಕೂಡಾ ವಿರುದ್ಧ ಮನಸ್ಥಿತಿಯವರನ್ನು ಅಥವಾ ಹಾಗೆಂದುಕೊಂಡಿರುವವರನ್ನು ಒಗ್ಗೂಡಿಸಬಲ್ಲದು. ಅಲ್ಲವೇ..?" ಎಂದನು ಸಾಕೇತ್
ಅದಕ್ಕುತ್ತರವಾಗಿ ಸರಯೂ "ಪ್ರೀತಿ ಎಂಬ ಭಾವವಿದ್ದರೆ ಮಾತ್ರ ಅಲ್ಲಿ ಎರಡು ದಡಗಳು ಒಂದಾಗಬಹುದು. ಆದರೆ, ಅಲ್ಲಿ ಆ ಭಾವಗಳೇ ಇಲ್ಲದಿದ್ದಲ್ಲಿ..??" ಎಂದಳು.
"ಪ್ರೀತಿ ಎಂಬುದು ಮೇಲೆ ಕಾಣುವ ಭಾವವಲ್ಲ. ಅಂತರಂಗದ ಸುಪ್ತ ಭಾವ. ದ್ವೇಷವನ್ನು ಮುಚ್ಚಿಟ್ಟು ಬದುಕಬಹುದು ಆದರೆ ಪ್ರೀತಿಯನ್ನಲ್ಲ. ಮುಚ್ಚಿಟ್ಟಷ್ಟೂ ಪ್ರೀತಿ ಹೆಚ್ಚಾಗುತ್ತದೆ, ಹೆಮ್ಮರವಾಗುತ್ತದೆ. ಅಷ್ಟಕ್ಕೂ ಪ್ರೀತಿ ಒಂದು ದಿನದಲ್ಲಿ ಹುಟ್ಟುವುದೂ ಇಲ್ಲ, ಕ್ಷಣ ಮಾತ್ರದಲ್ಲಿ ಸಾಯುವುದೂ ಇಲ್ಲ. ಪ್ರೀತಿಗೆ ಮರು ಪ್ರೀತಿ ದಕ್ಕದಿದ್ದರೂ, ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿಸುವುದೇ ಪ್ರೀತಿ. ಬಚ್ಚಿಟ್ಟು ನಿನ್ನನ್ನು ನೀನು ಸಮರ್ಥಿಸಿಕೊಳ್ಳುತ್ತಾ ನನ್ನನ್ನು ಮೋಸಗೊಳಿಸಬಹುದು ಎಂದುಕೊಂಡಿದ್ದರೆ ಅದು ನಿನ್ನ ಭ್ರಮೆ" ಎಂದ ಸಂಕೇತ್.
"ಹೌದಲ್ಲವಾ..? ಪ್ರೀತಿ ಒಂದು ದಿನದಲ್ಲಿ ಹುಟ್ಟದು. ಆದರೆ, ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗಿ, ನಂತರ ಹೆಂಡತಿಯನ್ನು ಪ್ರೀತಿಸುವೆ ಎನ್ನುವುದು ಮೊದಲ ಪ್ರೀತಿಗೆ ಮಾಡುವ ಮೋಸವಲ್ಲವೇ..??" ಎಂಬ ಸರಯುವಿನ ಪ್ರಶ್ನೆ ಇವನಿಗೆ ಹರಿತವಾಗಿಯೇ ತಾಗಿತ್ತು.
"ಮೊದಲ ಪ್ರೀತಿ ಬರೀ ಆಕರ್ಷಣೆಯಾಗಿದ್ದರೆ..?? ಅದು ಪ್ರೀತಿ ಎಂಬ ಭಾವ ಹುಟ್ಟಿಸಿ ಮೋಸ ಮಾಡಿದ್ದರೆ ಅದಕ್ಕೆ ಹೊಣೆ ಯಾರು..?" ಎಂದ ಸಂಕೇತ್ ಕ್ಷೀಣ ಧ್ವನಿಯಲ್ಲಿ.
"ಪ್ರೀತಿಯ ಭಾವ ಹುಟ್ಟಿಸಿ ಮೋಸ ಮಾಡಿದ್ದವಳು ಅವಳಾದರೆ, ಪ್ರೀತಿಗೆ ಮರು ಪ್ರೀತಿ ಎಂದು ಹೇಳಿ ನೀವೂ ಪ್ರೀತಿಸಿದ್ಧಿರಿ ಅಲ್ಲವೇ..? ಅವಳು ಮಾಡಿದ್ದು ಮೋಸವೆಂದಾದರೆ, ನೀವು ಮಾಡಿದ್ದು ಸಹಾ ಮೋಸವೇ ಅಲ್ಲವೇ..?" ಎಂಬ ಪ್ರಶ್ನೆ ಕೇಳಿದ್ದಳು ಸರಯೂ.
" ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತವಲ್ಲವೇ..? ಹಿಂದೆ ನೀನೇ ಯಾವಾಗಲೋ ಪುಸ್ತಕ ಓದುವಾಗ ಹೇಳಿದ್ದ ನೆನಪು. ಒಮ್ಮೆ ಪ್ರೀತಿಯಾದರೆ ಮತ್ತೊಮ್ಮೆ ಪ್ರೀತಿಯಾಗಬಾರದು ಎಂದೇನೂ ಇಲ್ಲವಲ್ಲಾ.. ಪ್ರೀತಿ ಹಂಚಿದಷ್ಟೂ ಹೆಚ್ಚುತ್ತಾ ಹೋಗುತ್ತದೋ ಹೊರತು ಕಡಿಮೆಯಾಗಲಾರದು" ಎಂದನು ಸಂಕೇತ್.
"ಪ್ರೀತಿಸುವವರಿಗೆ ಮಾತ್ರ ಈ ಸೂತ್ರ ಅನ್ವಯವಾಗುತ್ತದೆ ನಿಮ್ಮ ತರಹದ ಮೋಸಗಾರರಿಗಲ್ಲ. ನಿಮಗೀಗ ಬೇಕಿರುವುದು ಪ್ರೀತಿಯಲ್ಲ, ಹಾಸಿಗೆಯ ಸುಖಕ್ಕೆ ಒಂದು ಹೆಣ್ಣು ಅಷ್ಟೇ.." ಎಂಬ ಮಾತು ಸರಯೂ ಬಾಯಿಯಿಂದ ಬಂದೊಡನೆ ಕಪಾಳಮೋಕ್ಷವಾಗಿತ್ತು.
"ಹೊಡೆದಾಕ್ಷಣ ಸತ್ಯ ಬದಲಾಗದು ಮಿಸ್ಟರ್ ಸಂಕೇತ್" ಎಂದಳು ಸರಯೂ ತಡವರಿಸದೆ.
"ಸತ್ಯವಲ್ಲದ್ದನ್ನು ಸತ್ಯವೆಂದು ಬಿಂಬಿಸಲು ಕಟು ಮಾತುಗಳ ಅವಶ್ಯಕತೆ ಇಲ್ಲ ಸರಯೂ. ಹಾಸಿಗೆಯ ಸುಖಕ್ಕೆ ಹೆಣ್ಣು ಬೇಕಿದ್ದಲ್ಲಿ ನಿನ್ನನ್ನು ಬೇಡುವುದು ಬೇಕಾಗಿರಲಿಲ್ಲ ಅಲ್ಲದೇ ನಿನ್ನನ್ನು ಒಲಿಸಿಕೊಂಡು ಪ್ರೀತಿಯ ಭಿಕ್ಷೆಯನ್ನು ಬೇಡುವುದೂ ಸಹಾ ಬೇಕಿರಲಿಲ್ಲ. ದೈಹಿಕವಾಗಿ ನಿನ್ನನ್ನು ಸೋಲಿಸಲು ಎಷ್ಟೊತ್ತು?? ಸಂಯಮದ ಕಟ್ಟೆ ಮೀರಿದಿದ್ದರೆ ಎಂದಿಗೋ ನಿನ್ನನ್ನು ಆ ರೀತಿ ಬಳಸಿಕೊಂಡಿರುತ್ತಿದ್ದೆ.
ಪ್ರೀತಿಯೇ ಬೇರೆ, ವಾಂಛೆಯೇ ಬೇರೆ. ಎರಡರ ನಡವಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಇದೆಲ್ಲವೂ ನಿನಗೂ ಗೊತ್ತಿದೆ. ಆದರೂ ಈ ರೀತಿಯ ನಾಟಕದ ಹೊದಿಕೆ ಏತಕೆ?"
"ನಿನಗೆ ನನ್ನ ಪ್ರೀತಿ ಅರ್ಥಾತ್ ಮೋಸದ ಬಗ್ಗೆ ಗೊತ್ತಿದ್ದೂ ಸಹಾ ನನ್ನ ಜೊತೆ ಇರುವುದೇತಕೆ? ಮದುವೆ ಎಂಬ ಬಂಧನಕ್ಕೆ ಬೆಲೆ ಕೊಡುತ್ತೇನೆ ಎಂಬ ಮಾತನ್ನು ಬಿಟ್ಟು ಬಿಡು.
ನಾನು ನನ್ನ ಪ್ರೀತಿಯ ವಿಚಾರವನ್ನು ನಾನೇನು ನಿನ್ನ ಹತ್ತಿರ ಮುಚ್ಚಿಟ್ಟು ಮದುವೆಯಾಗಿರಲಿಲ್ಲ. ಮೋಸ ಮಾಡಬೇಕೆಂದಿದ್ದರೆ ನಿನ್ನ ಹತ್ತಿರ ನಾನು ಈ ವಿಚಾರವನ್ನು ಹೇಳದೆಯೇ ಇರಬಹುದಿತ್ತು. ಆದರೆ, ಮದುವೆಯಾದ ನಂತರ ನನ್ನ ತಿರಸ್ಕಾರದ ನಡುವಲ್ಲಿಯೂ ಸಹಾ ನೀನು ನಿನ್ನ ಪ್ರೀತಿ ಹಂಚಿದೆ. ನಾನು ಬದಲಾದ ಸಂಧರ್ಭದಲ್ಲಿ ನೀನು ಹೇಗೆ ವರ್ತಿಸುತ್ತಿರುವುದಕ್ಕೆ ಕಾರಣವೇನು?" ಎಂಬ ಸಂಕೇತ್ ನ ಪ್ರಶ್ನೆಗೆ ಸರಯೂ
"ನಾನು ನನ್ನ ಸ್ವಾರ್ಥಕ್ಕೆ ನಿಮ್ಮನ್ನು ಮದುವೆಯಾದೆ. ನಿಮ್ಮ ಮೇಲಿದ್ದದ್ದು ಕಾಳಜಿ ಅಷ್ಟೇ.. ಅದು ಪ್ರೀತಿ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ನಾನು ಭಾದ್ಯಳಲ್ಲ" ಎಂದಳು ಸರಯೂ.
"ಪ್ರೀತಿಗೂ, ಕಾಳಜಿಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರೀತಿ ಇರುವಲ್ಲಿ ಮಾತ್ರ ಕಾಳಜಿ ಇರುತ್ತದೆ. ಹಾಗೇ, ಒಂದು ವಿಷಯ ನೆನಪಿಟ್ಟುಕೋ ನಿನ್ನ ಈ ಒರಟು ಮಾತುಗಳಿಗೆ ಸೋತು ಹಿಂದೆ ಸರಿಯುವವ ನಾನಲ್ಲ. ಒರಟು ಮಾತುಗಳ ಹಿಂದೆ ಪ್ರೀತಿಯನ್ನು ಬಚ್ಚಿಡುವ ಹುನ್ನಾರವಿರುತ್ತದೆ. ನಿನ್ನ ಪ್ರೀತಿ,ಕಾಳಜಿ ನನ್ನನ್ನು ನಿನ್ನೆಡೆಗೆ ವಾಲುವಂತೆ ಮಾಡಿರುವುದು ಸತ್ಯ. ಅದನ್ನು ಯಾರೇ ಬಂದರೂ ಬದಲಿಸಲಾಗದು. ನೀನು ನನ್ನನ್ನು ಪ್ರೀತಿಸಲಾರೆ ಎಂದರೆ ನೀನು ಇಲ್ಲಿ ಇರುವ ಅವಶ್ಯಕತೆಯಾದರೂ ಏನು? ನಾಳೆಯೇ ನೀನು ಇಲ್ಲಿಂದ ಹೊರಡಬಹುದು" ಎಂದು ಹೇಳಿ ಹೊರಟ ಸಂಕೇತ್.
ಅವನು ಅತ್ತ ಹೋಗುತ್ತಿದ್ದಂತೆಯೇ ಇತ್ತ ಸರಯೂ ಕಣ್ಣಲ್ಲಿ ಕಣ್ಣೀರಿನ ಕೋಡಿ ಹರಿಯಲಾರಂಭಿಸಿತು. ಸಾಯಿಬಾಬಾ ಮುಂದೆ ಮನದ ದುಗುಡವನ್ನೆಲ್ಲಾ ಹೊರಹಾಕಲಾರಂಭಿಸಿದಳು. "ಈ ಪ್ರೀತಿಯ ನಿವೇದನೆಗಾಗಿ ನಾನು ಕಾಯುತ್ತಿದ್ದೆ. ಆದರೆ, ಆ ಕ್ಷಣ ಬಂದಾಗ ಅದನ್ನು ಮನತುಂಬಿ ಅನುಭವಿಸಲಾಗುತ್ತಿಲ್ಲ. ನಾನು ಈ ಪ್ರೀತಿಯನ್ನು ಒಪ್ಪಿದರೆ ಅಲ್ಲಿ ನನ್ನ ಅಮ್ಮನ ಪ್ರಾಣ ಅವಳಿಂದ ಹೋಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ.
ಒಂದೆಡೆ ಜನ್ಮ ನೀಡಿದ ಭವಿಷ್ಯಕ್ಕೆ ನನ್ನನ್ನು ಸಜ್ಜು ಮಾಡಿದ ಅಮ್ಮ, ಇತ್ತ ಭವಿಷ್ಯದಲ್ಲಿ ಜೊತೆಯಾಗಬೇಕಾದ ಗಂಡ. ಎರಡು ಕಣ್ಣಲ್ಲಿ ಒಂದನ್ನು ಆಯ್ಕೆ ಮಾಡಿಕೋ ಎಂದರೆ ಯಾವುದೆನ್ನಲಿ?? ನನ್ನ ಪ್ರೀತಿಯೇ ಸುಳ್ಳು ಎನ್ನಲೇ..?? ಕಟು ಮಾತಿನಿಂದ ದೂರ ತಳ್ಳಿದರೂ ಸನಿಹವಾಗುತ್ತಿರುವ ಗಂಡ, ದೂರದಲ್ಲಿದ್ದರೂ ಮನಸ್ಸಿನಲ್ಲಿ ಯಾವಾಗಲೂ ಹತ್ತಿರದಲ್ಲೇ ಇರುವ ನನ್ನ ಏಕೈಕ ಬಂಧು ಅಮ್ಮ.
ದೂರದಲ್ಲಿದ್ದರೂ ಇವರನ್ನು ನೋಡಿ ಖುಷಿ ಪಡುವೆ. ನಾನಿವರನ್ನು ಬಿಟ್ಟು ಹೊರಡದಿದ್ದರೆ ಅವರ ಕೆಲಸ, ಅಮ್ಮನ ಪ್ರಾಣ ಎರಡಕ್ಕೂ ಕುತ್ತು. ಬದಲಿಗೆ ನಾನೇ ಎಲ್ಲರಿಂದ ನಾನೇ ದೂರ ಹೋಗಿಬಿಡುತ್ತೇನೆ. ಪ್ರೀತಿಯ ಮರು ನಿರೀಕ್ಷೆ ಇಲ್ಲದೆಯೇ ಬದುಕುವೆ." ಎಂಬ ಮಾತು ಬಾಬಾ ಕಿವಿಗೆ ತಲುಪಿತೋ ಇಲ್ಲವೋ ಸಂಕೇತ್ ಕಿವಿಗೆ ತಲುಪಿತ್ತು.
ಸರಯೂ ಹಿಮ್ಮೆಟ್ಟುವಿಕೆಯ ಕಾರಣ ತಿಳಿದಿತ್ತು. ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ್ದ ಲಾವಣ್ಯ ಕ್ಷಮೆ ಕೇಳಲು ಬಂದಿದ್ದ ಹಿಂದಿನ ಮರ್ಮ ತಿಳಿದಿತ್ತು.
ಬೆಳಿಗ್ಗೆ ಸರಯೂ ಏಳುವಷ್ಟರಲ್ಲಿ ಸರಯೂ ತಾಯಿಯನ್ನು ಮನೆಗೆ ಕರೆ ತಂದಿದ್ದ ಸಂಕೇತ್ "ನಿಮ್ಮ ಜೊತೆಗೇ ಇರುವೆನೆಂದು ನನ್ನ ಜೊತೆ ಜಗಳವಾಡಿ ಮುನಿಸಿಕೊಂಡಿದ್ದಾಳೆ. ನೀವೇ ಸಮಾಧಾನ ಮಾಡಿ" ಎನ್ನುತ್ತಾ ಅತ್ತೆಯನ್ನು ಬಿಟ್ಟಿದ್ದ. ಅಲ್ಲದೇ ಸರಯೂ ಗೆ "ಅಮ್ಮನ ಹತ್ತಿರ ಮಾತನಾಡಿದ ನಂತರ ಎಲ್ಲಾ ಲಗೇಜ್ ಅನ್ನು ಪ್ಯಾಕ್ ಮಾಡು. ನನ್ನ ಕೆಲಸದ ಸ್ಥಳ ಬದಲಾಗಿದೆ. ನಿನ್ನ ಅಮ್ಮ ಕೂಡಾ ನನ್ನ ಅಮ್ಮನಾಗಿ ನನ್ನ ಜೊತೆಯೇ ಇರುವರು. ಇಷ್ಟರ ನಂತರ ನಿನ್ನ ಇಷ್ಟ. ಬಿಟ್ಟು ಹೊರಡುವುದಾದರೆ ಬಾಗಿಲು ತೆರೆದೇ ಇದೆ ಆದರೆ ಅಮ್ಮ ಇಲ್ಲಿರುವ ಹಾಗೂ ಕೆಲಸ ಸಲುವಾಗಿ ಹೋಗುವ ಸ್ಥಳ ಬದಲಾಗದು ಎಂಬುದು ನೆನಪಿರಲಿ. ಹಾಗೆಯೇ ಪ್ರೀತಿ ಕೂಡಾ" ಎಂದವನು ನಡೆದು ಬಿಟ್ಟ.
ಬಿಟ್ಟ ಕಂಗಳಿಂದ ಇದೆಲ್ಲವೂ ಕನಸು ಎಂಬಂತೆ ನೋಡುತ್ತಿದ್ದವಳಿಗೆ ಅವಳ ಅಮ್ಮನೆಂದಿದ್ದರು. "ದೇವರು ಭಕ್ತರ ಪ್ರಾರ್ಥನೆಯನ್ನು ಕೇಳಿಸಿಕೊಂಡರೆ ಸ್ಪಂದಿಸುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ಮನುಷ್ಯ ಪ್ರೀತಿಗೆ, ಪ್ರಾರ್ಥನೆಗೆ ಸ್ಪಂದಿಸುತ್ತಾನೆ. ಕಾಣದ ದೇವರೆಡೆಗೆ ಮೊರೆಯಿಟ್ಟು ಕಷ್ಟವನ್ನು ನಿವಾರಿಸು ಎನ್ನುವ ಬದಲು ಪ್ರೀತಿಯಿಂದ ಮನುಷ್ಯರೊಡನೆ ಮಾತನಾಡಿದರೆ ಎಲ್ಲಾ ಕಷ್ಟವೂ ನಿವಾರಣೆಯಾಗುತ್ತದೆ" ಎಂದ ಮಾತಿಗೆ ಏನೋ ಹೊಳೆದವಳಂತೆ ಸಂಕೇತ್ ನತ್ತ ಹೊರಟಳು ಸರಯೂ.
"ಹೊರಹೋಗಲಾರೆ ಮನೆಯಿಂದಲೂ,ನಿಮ್ಮ ಮನದ ಮಂದಿರದಿಂದಲೂ" ಎಂದವಳು ತನ್ನಿನಿಯನ ಬಾಹುಗಳಲ್ಲಿ ಬಂಧಿಯಾಗಿದ್ದಳು. ಪ್ರೀತಿಯ, ಅರ್ಥೈಸುವಿಕೆಯ ಹುಚ್ಚು ಪ್ರವಾಹದಲ್ಲಿ ಎರಡೂ ದಡಗಳು ಒಂದಾಗಿದ್ದವು.
~ವಿಭಾ ವಿಶ್ವನಾಥ್
ಸೇರಲಾಗದು ಎಂದೊಡನೆ..
ಮಾತ ನೆಚ್ಚಿ ಸುಮ್ಮನೆ ಕೂತು
ಕಾಲ ಕಳೆವವ ನಾನಲ್ಲ"
ಸಂಕೇತ್ ನ ಮೊಬೈಲ್ ಸಂದೇಶ ನೋಡಿದ ಸರಯೂ ಕೇಳಿದಳು. ಸಂದೇಶಕ್ಕಿಂತ ಹೀಗೇ ಮಾತನಾಡೋಣ ಅದೇ ಒಳಿತು. "ದಡದಲ್ಲಿರುವ ಪ್ರಯಾಣಿಕರು ಸೇರಬಹುದೇನೋ ಆದರೆ ದಡಗಳೆರಡೂ ಒಂದಾಗಲು ಸಾಧ್ಯವಿಲ್ಲ. ದಡಗಳೆರಡೂ ಒಂದಾಗಲು ಪ್ರವಾಹ ಬಂದಾಗ ಮಾತ್ರ ಸಾಧ್ಯ. ಅಲ್ಲವೇ?"
"ಮೂಲ ಒಂದೇ ಆದರೂ, ಹರಿವ ಕಾಲದ ಸೆಳೆತಕ್ಕೆ ಸಿಕ್ಕು ಬೇರೆಯಾಗುತ್ತವೆ. ಆದರೆ, ಅವುಗಳಿಂದಲೇ ಅಲ್ಲವೇ ನದಿಯ ಅಸ್ತಿತ್ವ??" ಎಂದನು ಸಂಕೇತ್.
"ಹೌದು, ನದಿಯ ಅಸ್ತಿತ್ವಕ್ಕೆ ಬೆಲೆ ಇರಬೇಕೆಂದರೆ ಅವು ಬೇರೆಯಾಗಿಯೇ ಬದುಕು ಸಾಗಿಸಬೇಕಲ್ಲವೇ..??" ಎಂದಳು ಸರಯೂ.
"ನೀರಿನ ಹರಿತ ದಡಗಳೆರಡನ್ನೂ ಹಿಡಿದಿಟ್ಟಿದೆ. ಹಾಗೇ ಪ್ರೀತಿ ಕೂಡಾ ವಿರುದ್ಧ ಮನಸ್ಥಿತಿಯವರನ್ನು ಅಥವಾ ಹಾಗೆಂದುಕೊಂಡಿರುವವರನ್ನು ಒಗ್ಗೂಡಿಸಬಲ್ಲದು. ಅಲ್ಲವೇ..?" ಎಂದನು ಸಾಕೇತ್
ಅದಕ್ಕುತ್ತರವಾಗಿ ಸರಯೂ "ಪ್ರೀತಿ ಎಂಬ ಭಾವವಿದ್ದರೆ ಮಾತ್ರ ಅಲ್ಲಿ ಎರಡು ದಡಗಳು ಒಂದಾಗಬಹುದು. ಆದರೆ, ಅಲ್ಲಿ ಆ ಭಾವಗಳೇ ಇಲ್ಲದಿದ್ದಲ್ಲಿ..??" ಎಂದಳು.
"ಪ್ರೀತಿ ಎಂಬುದು ಮೇಲೆ ಕಾಣುವ ಭಾವವಲ್ಲ. ಅಂತರಂಗದ ಸುಪ್ತ ಭಾವ. ದ್ವೇಷವನ್ನು ಮುಚ್ಚಿಟ್ಟು ಬದುಕಬಹುದು ಆದರೆ ಪ್ರೀತಿಯನ್ನಲ್ಲ. ಮುಚ್ಚಿಟ್ಟಷ್ಟೂ ಪ್ರೀತಿ ಹೆಚ್ಚಾಗುತ್ತದೆ, ಹೆಮ್ಮರವಾಗುತ್ತದೆ. ಅಷ್ಟಕ್ಕೂ ಪ್ರೀತಿ ಒಂದು ದಿನದಲ್ಲಿ ಹುಟ್ಟುವುದೂ ಇಲ್ಲ, ಕ್ಷಣ ಮಾತ್ರದಲ್ಲಿ ಸಾಯುವುದೂ ಇಲ್ಲ. ಪ್ರೀತಿಗೆ ಮರು ಪ್ರೀತಿ ದಕ್ಕದಿದ್ದರೂ, ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿಸುವುದೇ ಪ್ರೀತಿ. ಬಚ್ಚಿಟ್ಟು ನಿನ್ನನ್ನು ನೀನು ಸಮರ್ಥಿಸಿಕೊಳ್ಳುತ್ತಾ ನನ್ನನ್ನು ಮೋಸಗೊಳಿಸಬಹುದು ಎಂದುಕೊಂಡಿದ್ದರೆ ಅದು ನಿನ್ನ ಭ್ರಮೆ" ಎಂದ ಸಂಕೇತ್.
"ಹೌದಲ್ಲವಾ..? ಪ್ರೀತಿ ಒಂದು ದಿನದಲ್ಲಿ ಹುಟ್ಟದು. ಆದರೆ, ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗಿ, ನಂತರ ಹೆಂಡತಿಯನ್ನು ಪ್ರೀತಿಸುವೆ ಎನ್ನುವುದು ಮೊದಲ ಪ್ರೀತಿಗೆ ಮಾಡುವ ಮೋಸವಲ್ಲವೇ..??" ಎಂಬ ಸರಯುವಿನ ಪ್ರಶ್ನೆ ಇವನಿಗೆ ಹರಿತವಾಗಿಯೇ ತಾಗಿತ್ತು.
"ಮೊದಲ ಪ್ರೀತಿ ಬರೀ ಆಕರ್ಷಣೆಯಾಗಿದ್ದರೆ..?? ಅದು ಪ್ರೀತಿ ಎಂಬ ಭಾವ ಹುಟ್ಟಿಸಿ ಮೋಸ ಮಾಡಿದ್ದರೆ ಅದಕ್ಕೆ ಹೊಣೆ ಯಾರು..?" ಎಂದ ಸಂಕೇತ್ ಕ್ಷೀಣ ಧ್ವನಿಯಲ್ಲಿ.
"ಪ್ರೀತಿಯ ಭಾವ ಹುಟ್ಟಿಸಿ ಮೋಸ ಮಾಡಿದ್ದವಳು ಅವಳಾದರೆ, ಪ್ರೀತಿಗೆ ಮರು ಪ್ರೀತಿ ಎಂದು ಹೇಳಿ ನೀವೂ ಪ್ರೀತಿಸಿದ್ಧಿರಿ ಅಲ್ಲವೇ..? ಅವಳು ಮಾಡಿದ್ದು ಮೋಸವೆಂದಾದರೆ, ನೀವು ಮಾಡಿದ್ದು ಸಹಾ ಮೋಸವೇ ಅಲ್ಲವೇ..?" ಎಂಬ ಪ್ರಶ್ನೆ ಕೇಳಿದ್ದಳು ಸರಯೂ.
" ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತವಲ್ಲವೇ..? ಹಿಂದೆ ನೀನೇ ಯಾವಾಗಲೋ ಪುಸ್ತಕ ಓದುವಾಗ ಹೇಳಿದ್ದ ನೆನಪು. ಒಮ್ಮೆ ಪ್ರೀತಿಯಾದರೆ ಮತ್ತೊಮ್ಮೆ ಪ್ರೀತಿಯಾಗಬಾರದು ಎಂದೇನೂ ಇಲ್ಲವಲ್ಲಾ.. ಪ್ರೀತಿ ಹಂಚಿದಷ್ಟೂ ಹೆಚ್ಚುತ್ತಾ ಹೋಗುತ್ತದೋ ಹೊರತು ಕಡಿಮೆಯಾಗಲಾರದು" ಎಂದನು ಸಂಕೇತ್.
"ಪ್ರೀತಿಸುವವರಿಗೆ ಮಾತ್ರ ಈ ಸೂತ್ರ ಅನ್ವಯವಾಗುತ್ತದೆ ನಿಮ್ಮ ತರಹದ ಮೋಸಗಾರರಿಗಲ್ಲ. ನಿಮಗೀಗ ಬೇಕಿರುವುದು ಪ್ರೀತಿಯಲ್ಲ, ಹಾಸಿಗೆಯ ಸುಖಕ್ಕೆ ಒಂದು ಹೆಣ್ಣು ಅಷ್ಟೇ.." ಎಂಬ ಮಾತು ಸರಯೂ ಬಾಯಿಯಿಂದ ಬಂದೊಡನೆ ಕಪಾಳಮೋಕ್ಷವಾಗಿತ್ತು.
"ಹೊಡೆದಾಕ್ಷಣ ಸತ್ಯ ಬದಲಾಗದು ಮಿಸ್ಟರ್ ಸಂಕೇತ್" ಎಂದಳು ಸರಯೂ ತಡವರಿಸದೆ.
"ಸತ್ಯವಲ್ಲದ್ದನ್ನು ಸತ್ಯವೆಂದು ಬಿಂಬಿಸಲು ಕಟು ಮಾತುಗಳ ಅವಶ್ಯಕತೆ ಇಲ್ಲ ಸರಯೂ. ಹಾಸಿಗೆಯ ಸುಖಕ್ಕೆ ಹೆಣ್ಣು ಬೇಕಿದ್ದಲ್ಲಿ ನಿನ್ನನ್ನು ಬೇಡುವುದು ಬೇಕಾಗಿರಲಿಲ್ಲ ಅಲ್ಲದೇ ನಿನ್ನನ್ನು ಒಲಿಸಿಕೊಂಡು ಪ್ರೀತಿಯ ಭಿಕ್ಷೆಯನ್ನು ಬೇಡುವುದೂ ಸಹಾ ಬೇಕಿರಲಿಲ್ಲ. ದೈಹಿಕವಾಗಿ ನಿನ್ನನ್ನು ಸೋಲಿಸಲು ಎಷ್ಟೊತ್ತು?? ಸಂಯಮದ ಕಟ್ಟೆ ಮೀರಿದಿದ್ದರೆ ಎಂದಿಗೋ ನಿನ್ನನ್ನು ಆ ರೀತಿ ಬಳಸಿಕೊಂಡಿರುತ್ತಿದ್ದೆ.
ಪ್ರೀತಿಯೇ ಬೇರೆ, ವಾಂಛೆಯೇ ಬೇರೆ. ಎರಡರ ನಡವಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಇದೆಲ್ಲವೂ ನಿನಗೂ ಗೊತ್ತಿದೆ. ಆದರೂ ಈ ರೀತಿಯ ನಾಟಕದ ಹೊದಿಕೆ ಏತಕೆ?"
"ನಿನಗೆ ನನ್ನ ಪ್ರೀತಿ ಅರ್ಥಾತ್ ಮೋಸದ ಬಗ್ಗೆ ಗೊತ್ತಿದ್ದೂ ಸಹಾ ನನ್ನ ಜೊತೆ ಇರುವುದೇತಕೆ? ಮದುವೆ ಎಂಬ ಬಂಧನಕ್ಕೆ ಬೆಲೆ ಕೊಡುತ್ತೇನೆ ಎಂಬ ಮಾತನ್ನು ಬಿಟ್ಟು ಬಿಡು.
ನಾನು ನನ್ನ ಪ್ರೀತಿಯ ವಿಚಾರವನ್ನು ನಾನೇನು ನಿನ್ನ ಹತ್ತಿರ ಮುಚ್ಚಿಟ್ಟು ಮದುವೆಯಾಗಿರಲಿಲ್ಲ. ಮೋಸ ಮಾಡಬೇಕೆಂದಿದ್ದರೆ ನಿನ್ನ ಹತ್ತಿರ ನಾನು ಈ ವಿಚಾರವನ್ನು ಹೇಳದೆಯೇ ಇರಬಹುದಿತ್ತು. ಆದರೆ, ಮದುವೆಯಾದ ನಂತರ ನನ್ನ ತಿರಸ್ಕಾರದ ನಡುವಲ್ಲಿಯೂ ಸಹಾ ನೀನು ನಿನ್ನ ಪ್ರೀತಿ ಹಂಚಿದೆ. ನಾನು ಬದಲಾದ ಸಂಧರ್ಭದಲ್ಲಿ ನೀನು ಹೇಗೆ ವರ್ತಿಸುತ್ತಿರುವುದಕ್ಕೆ ಕಾರಣವೇನು?" ಎಂಬ ಸಂಕೇತ್ ನ ಪ್ರಶ್ನೆಗೆ ಸರಯೂ
"ನಾನು ನನ್ನ ಸ್ವಾರ್ಥಕ್ಕೆ ನಿಮ್ಮನ್ನು ಮದುವೆಯಾದೆ. ನಿಮ್ಮ ಮೇಲಿದ್ದದ್ದು ಕಾಳಜಿ ಅಷ್ಟೇ.. ಅದು ಪ್ರೀತಿ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ನಾನು ಭಾದ್ಯಳಲ್ಲ" ಎಂದಳು ಸರಯೂ.
"ಪ್ರೀತಿಗೂ, ಕಾಳಜಿಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರೀತಿ ಇರುವಲ್ಲಿ ಮಾತ್ರ ಕಾಳಜಿ ಇರುತ್ತದೆ. ಹಾಗೇ, ಒಂದು ವಿಷಯ ನೆನಪಿಟ್ಟುಕೋ ನಿನ್ನ ಈ ಒರಟು ಮಾತುಗಳಿಗೆ ಸೋತು ಹಿಂದೆ ಸರಿಯುವವ ನಾನಲ್ಲ. ಒರಟು ಮಾತುಗಳ ಹಿಂದೆ ಪ್ರೀತಿಯನ್ನು ಬಚ್ಚಿಡುವ ಹುನ್ನಾರವಿರುತ್ತದೆ. ನಿನ್ನ ಪ್ರೀತಿ,ಕಾಳಜಿ ನನ್ನನ್ನು ನಿನ್ನೆಡೆಗೆ ವಾಲುವಂತೆ ಮಾಡಿರುವುದು ಸತ್ಯ. ಅದನ್ನು ಯಾರೇ ಬಂದರೂ ಬದಲಿಸಲಾಗದು. ನೀನು ನನ್ನನ್ನು ಪ್ರೀತಿಸಲಾರೆ ಎಂದರೆ ನೀನು ಇಲ್ಲಿ ಇರುವ ಅವಶ್ಯಕತೆಯಾದರೂ ಏನು? ನಾಳೆಯೇ ನೀನು ಇಲ್ಲಿಂದ ಹೊರಡಬಹುದು" ಎಂದು ಹೇಳಿ ಹೊರಟ ಸಂಕೇತ್.
ಅವನು ಅತ್ತ ಹೋಗುತ್ತಿದ್ದಂತೆಯೇ ಇತ್ತ ಸರಯೂ ಕಣ್ಣಲ್ಲಿ ಕಣ್ಣೀರಿನ ಕೋಡಿ ಹರಿಯಲಾರಂಭಿಸಿತು. ಸಾಯಿಬಾಬಾ ಮುಂದೆ ಮನದ ದುಗುಡವನ್ನೆಲ್ಲಾ ಹೊರಹಾಕಲಾರಂಭಿಸಿದಳು. "ಈ ಪ್ರೀತಿಯ ನಿವೇದನೆಗಾಗಿ ನಾನು ಕಾಯುತ್ತಿದ್ದೆ. ಆದರೆ, ಆ ಕ್ಷಣ ಬಂದಾಗ ಅದನ್ನು ಮನತುಂಬಿ ಅನುಭವಿಸಲಾಗುತ್ತಿಲ್ಲ. ನಾನು ಈ ಪ್ರೀತಿಯನ್ನು ಒಪ್ಪಿದರೆ ಅಲ್ಲಿ ನನ್ನ ಅಮ್ಮನ ಪ್ರಾಣ ಅವಳಿಂದ ಹೋಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ.
ಒಂದೆಡೆ ಜನ್ಮ ನೀಡಿದ ಭವಿಷ್ಯಕ್ಕೆ ನನ್ನನ್ನು ಸಜ್ಜು ಮಾಡಿದ ಅಮ್ಮ, ಇತ್ತ ಭವಿಷ್ಯದಲ್ಲಿ ಜೊತೆಯಾಗಬೇಕಾದ ಗಂಡ. ಎರಡು ಕಣ್ಣಲ್ಲಿ ಒಂದನ್ನು ಆಯ್ಕೆ ಮಾಡಿಕೋ ಎಂದರೆ ಯಾವುದೆನ್ನಲಿ?? ನನ್ನ ಪ್ರೀತಿಯೇ ಸುಳ್ಳು ಎನ್ನಲೇ..?? ಕಟು ಮಾತಿನಿಂದ ದೂರ ತಳ್ಳಿದರೂ ಸನಿಹವಾಗುತ್ತಿರುವ ಗಂಡ, ದೂರದಲ್ಲಿದ್ದರೂ ಮನಸ್ಸಿನಲ್ಲಿ ಯಾವಾಗಲೂ ಹತ್ತಿರದಲ್ಲೇ ಇರುವ ನನ್ನ ಏಕೈಕ ಬಂಧು ಅಮ್ಮ.
ದೂರದಲ್ಲಿದ್ದರೂ ಇವರನ್ನು ನೋಡಿ ಖುಷಿ ಪಡುವೆ. ನಾನಿವರನ್ನು ಬಿಟ್ಟು ಹೊರಡದಿದ್ದರೆ ಅವರ ಕೆಲಸ, ಅಮ್ಮನ ಪ್ರಾಣ ಎರಡಕ್ಕೂ ಕುತ್ತು. ಬದಲಿಗೆ ನಾನೇ ಎಲ್ಲರಿಂದ ನಾನೇ ದೂರ ಹೋಗಿಬಿಡುತ್ತೇನೆ. ಪ್ರೀತಿಯ ಮರು ನಿರೀಕ್ಷೆ ಇಲ್ಲದೆಯೇ ಬದುಕುವೆ." ಎಂಬ ಮಾತು ಬಾಬಾ ಕಿವಿಗೆ ತಲುಪಿತೋ ಇಲ್ಲವೋ ಸಂಕೇತ್ ಕಿವಿಗೆ ತಲುಪಿತ್ತು.
ಸರಯೂ ಹಿಮ್ಮೆಟ್ಟುವಿಕೆಯ ಕಾರಣ ತಿಳಿದಿತ್ತು. ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ್ದ ಲಾವಣ್ಯ ಕ್ಷಮೆ ಕೇಳಲು ಬಂದಿದ್ದ ಹಿಂದಿನ ಮರ್ಮ ತಿಳಿದಿತ್ತು.
ಬೆಳಿಗ್ಗೆ ಸರಯೂ ಏಳುವಷ್ಟರಲ್ಲಿ ಸರಯೂ ತಾಯಿಯನ್ನು ಮನೆಗೆ ಕರೆ ತಂದಿದ್ದ ಸಂಕೇತ್ "ನಿಮ್ಮ ಜೊತೆಗೇ ಇರುವೆನೆಂದು ನನ್ನ ಜೊತೆ ಜಗಳವಾಡಿ ಮುನಿಸಿಕೊಂಡಿದ್ದಾಳೆ. ನೀವೇ ಸಮಾಧಾನ ಮಾಡಿ" ಎನ್ನುತ್ತಾ ಅತ್ತೆಯನ್ನು ಬಿಟ್ಟಿದ್ದ. ಅಲ್ಲದೇ ಸರಯೂ ಗೆ "ಅಮ್ಮನ ಹತ್ತಿರ ಮಾತನಾಡಿದ ನಂತರ ಎಲ್ಲಾ ಲಗೇಜ್ ಅನ್ನು ಪ್ಯಾಕ್ ಮಾಡು. ನನ್ನ ಕೆಲಸದ ಸ್ಥಳ ಬದಲಾಗಿದೆ. ನಿನ್ನ ಅಮ್ಮ ಕೂಡಾ ನನ್ನ ಅಮ್ಮನಾಗಿ ನನ್ನ ಜೊತೆಯೇ ಇರುವರು. ಇಷ್ಟರ ನಂತರ ನಿನ್ನ ಇಷ್ಟ. ಬಿಟ್ಟು ಹೊರಡುವುದಾದರೆ ಬಾಗಿಲು ತೆರೆದೇ ಇದೆ ಆದರೆ ಅಮ್ಮ ಇಲ್ಲಿರುವ ಹಾಗೂ ಕೆಲಸ ಸಲುವಾಗಿ ಹೋಗುವ ಸ್ಥಳ ಬದಲಾಗದು ಎಂಬುದು ನೆನಪಿರಲಿ. ಹಾಗೆಯೇ ಪ್ರೀತಿ ಕೂಡಾ" ಎಂದವನು ನಡೆದು ಬಿಟ್ಟ.
ಬಿಟ್ಟ ಕಂಗಳಿಂದ ಇದೆಲ್ಲವೂ ಕನಸು ಎಂಬಂತೆ ನೋಡುತ್ತಿದ್ದವಳಿಗೆ ಅವಳ ಅಮ್ಮನೆಂದಿದ್ದರು. "ದೇವರು ಭಕ್ತರ ಪ್ರಾರ್ಥನೆಯನ್ನು ಕೇಳಿಸಿಕೊಂಡರೆ ಸ್ಪಂದಿಸುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ಮನುಷ್ಯ ಪ್ರೀತಿಗೆ, ಪ್ರಾರ್ಥನೆಗೆ ಸ್ಪಂದಿಸುತ್ತಾನೆ. ಕಾಣದ ದೇವರೆಡೆಗೆ ಮೊರೆಯಿಟ್ಟು ಕಷ್ಟವನ್ನು ನಿವಾರಿಸು ಎನ್ನುವ ಬದಲು ಪ್ರೀತಿಯಿಂದ ಮನುಷ್ಯರೊಡನೆ ಮಾತನಾಡಿದರೆ ಎಲ್ಲಾ ಕಷ್ಟವೂ ನಿವಾರಣೆಯಾಗುತ್ತದೆ" ಎಂದ ಮಾತಿಗೆ ಏನೋ ಹೊಳೆದವಳಂತೆ ಸಂಕೇತ್ ನತ್ತ ಹೊರಟಳು ಸರಯೂ.
"ಹೊರಹೋಗಲಾರೆ ಮನೆಯಿಂದಲೂ,ನಿಮ್ಮ ಮನದ ಮಂದಿರದಿಂದಲೂ" ಎಂದವಳು ತನ್ನಿನಿಯನ ಬಾಹುಗಳಲ್ಲಿ ಬಂಧಿಯಾಗಿದ್ದಳು. ಪ್ರೀತಿಯ, ಅರ್ಥೈಸುವಿಕೆಯ ಹುಚ್ಚು ಪ್ರವಾಹದಲ್ಲಿ ಎರಡೂ ದಡಗಳು ಒಂದಾಗಿದ್ದವು.
~ವಿಭಾ ವಿಶ್ವನಾಥ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)