ಬುಧವಾರ, ಫೆಬ್ರವರಿ 14, 2018

ಮರವೇ ನಿನಗಿದು ತರವೇ?

ಕಣ್ಣು-ಬಾಯಿ ಬಿಟ್ಟುಕೊಂಡು
ಏನು ಮಾಡುತಿರುವೆ ಮರವೇ?
ಈ ವೇಷ ನಿನಗೆ ತರವೇ?
ಮನುಜನ ಈ ನಡತೆಯಿಂದ ಆಶ್ಚರ್ಯವೇ?
ಅವನಲೀಗ ಧನದಾಹ, ದುರಭಿಮಾನ
ಲೋಭ,ಮೋಸ,ಕ್ರೋಧ,ಕ್ರೌರ್ಯವೇ ತುಂಬಿದೆ
ನಿನ್ನಿಂದ ಪಡೆದ ಮನುಜನೇ,
ನಿನ್ನ ಕಡಿಯಲು ಹೊರಟಿಹನು
ಇದ ಕಂಡು ಆಶ್ಚರ್ಯವಾಯಿತೇನೆ?
ಇದುವೇ ನೋಡು ನಾಡಿನ ಅನೀತಿ
ಪಡೆದವರೆಲ್ಲ ಮರಳಿ ಏನನೂ ನೀಡುವುದಿಲ್ಲ
ನಿನ್ನ ತಿರುಗಿ ಪೋಷಿಸುವುದಿಲ್ಲ
ಸಿದ್ದಳಾಗು ಮರಣಶಾಸನಕೆ
ಇನ್ನಾದರು ಕಣ್ಣು-ಬಾಯಿ ಮುಚ್ಚಿ
ಅನುಭವಿಸು ಬಂದುದನು ನಿರ್ಲಿಪ್ತಳಂತೆ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ