ಭಾನುವಾರ, ಸೆಪ್ಟೆಂಬರ್ 20, 2026

ಹರಡಿತು ಕಂಪು (ಬೆಳಕಿಂಡಿಯ ಕತೆಗಳು - 84)


 "ಮಲ್ಲಿಗೆ ಮಾಲೆ ಯಾರಿಗೋ..?? ಯಾಕೆ ತೆಗೆದುಕೊಂಡೆ..??" ಎಂದು ಕೇಳಿದ ಗೆಳೆಯನಿಗೆ

"ಮಲ್ಲಿಗೆ ಮುಡಿಯಲು ನನ್ನ ಹೆಂಡತಿ ಇಲ್ಲ. ಇನ್ನು ದೇವಾಲಯಕ್ಕೆ ಹೋಗುವುದಿಲ್ಲ. ಪರಮ ನಾಸ್ತಿಕ ನಾನು.. ಇನ್ನು ಯಾರ ಶವಕ್ಕೂ ಇದನ್ನು ಹಾಕುವುದಿಲ್ಲ.


ಇದನ್ನು ತೆಗೆದುಕೊಂಡದ್ದು ಆ ಪುಟ್ಟ ಹುಡುಗಿಗೋಸ್ಕರ.. ಆ ಹುಡುಗಿ ಆ ಮಲ್ಲಿಗೆ ಮಾರಿಯೇ ಇಲ್ಲಿಂದ ಹೋಗುವುದು. ಇಲ್ಲಿಂದ ಅವಳು ಲೇಟಾಗಿ ಹೊರಟರೆ ಅವಳು ಶಾಲೆಗೆ ಹೋಗುವುದು ಲೇಟಾಗುತ್ತದೆ. ಆ ಮಲ್ಲಿಗೆ ಮಾಲೆ ಮಾರಾಟವಾಗುವುದು ಲೇಟಾಗುವುದನ್ನು ಕಂಡಾಗ ಅದನ್ನು ಕೊಳ್ಳುತ್ತೇನೆ. " ಎಂದವರೇ ಕೊಂಡಿದ್ದ ಮಲ್ಲಿಗೆ ಮಾಲೆಯನ್ನು ಅಲ್ಲಿಯೇ ಸೊಪ್ಪು ಮಾರುತ್ತಿದ್ದ ಅಜ್ಜಿಯೊಬ್ಬರಿಗೆ "ತೆಗೆದುಕೊಳ್ಳಿ" ಎಂದು ಕೊಟ್ಟರು. ಮಲ್ಲಿಗೆ ತನ್ನ ಕಂಪನ್ನು ಬೀರುವಂತೆಯೇ.. ಈತನೂ ತನ್ನ ಪರೋಪಕಾರದ ಕಂಪನ್ನು ಹರಡುತ್ತಿದ್ದನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ