ಶನಿವಾರ, ಆಗಸ್ಟ್ 15, 2026

ನೆಮ್ಮದಿ (ಬೆಳಕಿಂಡಿಯ ಕತೆಗಳು - 68)

 


ಭೂಮಿಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು, ಹಳ್ಳಿಯ ಪರಿಸರದ ಅರಿವೂ ಇರಲಿಲ್ಲ. ತಂದೆ-ತಾಯಿ ಕೆಲಸ, ಹಣ ಎಂದು ಹೊರಗಡೆಯೇ ಕಾಲ ಕಳೆಯುತ್ತಿರುವಾಗ ಅಜ್ಜಿ ಅವಳಿಗೆ ಅವಳಿಗೆ ಹಳ್ಳಿಯ ಪರಿಸರ ಮತ್ತು ಅನ್ಯೋನ್ಯತೆಯ ಬಗ್ಗೆ ತಿಳಿಸಿ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದಳು. ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ದುಡಿಯುತ್ತಿದ್ದವಳಿಗೆ ಪ್ರಾಜೆಕ್ಟ್ ಒಂದರ ಮೇಲೆ ಹಳ್ಳಿಗೆ ಹೋಗುವ ಅವಕಾಶ ದೊರೆಯುತ್ತದೆ.

ಹಳ್ಳಿಗೆ ಹೋದವಳಿಗೆ ಅಲ್ಲಿನ ನೀರಿನ ಅಭಾವ, ಶೌಚಾಲಯದ ಕೊರತೆ, ಶಿಕ್ಷಣದ ಪರಿಸ್ಥಿತಿ ಮತ್ತು ಬಡತನದೊಂದಿಗೆ ಅವರ ಹಂಚಿ ತಿನ್ನುವ ಮತ್ತು ಹೊಂದಿ ಬಾಳುವ ಅನ್ಯೋನ್ಯತೆ ಮತ್ತು ಪ್ರೀತಿಯ ಅರಿವೂ ಆಗುತ್ತದೆ. ಪಟ್ಟಣದಲ್ಲಿ ಎಲ್ಲವೂ ಕೊರಗುವ ಮತ್ತು ಹಣದ ಹಿಂದೆ ಬಿದ್ದು ಪ್ರೀತಿಯ ಅರಿವೇ ಇಲ್ಲದ ಬಾಳುತ್ತಿರುವುದರ ಅರಿವಾಗುತ್ತದೆ. ಆದ್ದರಿಂದ ಹಳ್ಳಿಯಲ್ಲೇ ನೆಲೆಸಿ ಅವರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಿ ನೆಮ್ಮದಿಯಲ್ಲಿ ಅಲ್ಲೇ ನೆಲೆಸುತ್ತಾಳೆ. ಪಟ್ಟಣದಲ್ಲಿನ ಹಣಕ್ಕಿಂತ, ಹಳ್ಳಿಯಲ್ಲಿನ ಸಹಕಾರ, ಪ್ರೀತಿಯಲ್ಲಿ ನೆಮ್ಮದಿಯಿದೆ ಎಂಬುದನ್ನು ಅರಿಯುತ್ತಾಳೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ