ಭಾನುವಾರ, ಆಗಸ್ಟ್ 2, 2026

ಹೊಣೆ (ಬೆಳಕಿಂಡಿಯ ಕತೆಗಳು - 61)

 


ತಮ್ಮ ಊರಿನಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಹಳ್ಳಿಗಳಲ್ಲಿಯೂ ಹೂಳು ತೆಗೆದು, ಬಾವಿ ಕಟ್ಟೆ ಸರಿಪಡಿಸಿ, ಬತ್ತಿ ಹೋಗಿದ್ದ ಬೋರ್ ಗಳ ಪಕ್ಕದಲ್ಲಿ ಹಾಗೂ ಬೇರೆಡೆಗಳಲ್ಲಿ ಇಂಗು ಗುಂಡಿ ಮಾಡಿಸಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಹಾಗೂ ಇಂತಹದ್ದೇ ಯಾವುದಾದರೊಂದು ಚಟುವಟಿಕೆಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ಕಾಲೇಜು ಡ್ರಾಪ್ ಔಟ್ ಗಳ ಗುಂಪನ್ನು ವಿಚಿತ್ರವಾಗಿ ನೋಡುತ್ತಿದ್ದರು ಜನ. 

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡುತ್ತಾ, ಮಣ್ಣಿನ ಮಕ್ಕಳಾದವರು ಪರಿಸರ ಸಂರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದರು. ಹೆಚ್ಚೇನಿಲ್ಲ.. ಐದು ವರ್ಷಗಳಲ್ಲಿಯೇ ಜನರಿಗೆ ಅದರ ಮಹತ್ವ ಅರಿವಾಗಿ ಅವರೊಡನೆ ಕೈಜೋಡಿಸಿದರು. "ಪ್ರಕೃತಿ ಸಂರಕ್ಷಣೆ ಎಲ್ಲರ ಹೊಣೆ" ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ