ಹಳ್ಳಿಯ ಈ ಜೀವನ ನಿನಗೆ ಬೇಡಪ್ಪಾ.. ನಮ್ಮ ತಲೆಮಾರಿಗೇ ಇದು ಸಾಕು ಎನ್ನುತ್ತಾ ಹಳ್ಳಿಯಿಂದ ದೂರವಿಟ್ಟು ಮಗನನ್ನು ಓದಿಸಿದ ರಾಜೀವ. ಈ ಬೆಲೆ ಇಳಿಕೆ, ಹಕ್ಕಿಗಳ ಕಾಟ, ಬೆಳೆದ ಬೆಳೆಗೆ ಸರಿಯಾಗಿ ಸಿಗದ ಮಾರ್ಕೆಟ್ ಇದೆಲ್ಲವೂ ಅವನನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು.
ಆದರೆ, ಅವನ ಮಗ ಜಗದೀಶನಿಗೆ ಯಾವಾಗಲೂ ಮಣ್ಣಿನ ಸೆಳೆತ. ಹಳ್ಳಿಯಲ್ಲಿ ನಾವು ಕಷ್ಟಪಟ್ಟು ದುಡಿದರೆ ಮಾತ್ರ ಎಲ್ಲರೂ ದಿಲ್ಲಿಯಲ್ಲಿ ದರ್ಬಾರ್ ನಡೆಸಲಿಕ್ಕಾಗುವುದು ಎನ್ನುತ್ತಾ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತಂತ್ರಜ್ಞಾನವನ್ನು ಉಪಯೋಗಿಸಿ ಹಳ್ಳಿಯಲ್ಲಿನ ಎಲ್ಲರಿಗೂ ಕೆಲಸವನ್ನು ಸುಲಭ ಮಾಡಿ ಕೊಟ್ಟ. ಈಗ ರೈತರಿಂದ ನೇರವಾಗಿಯೇ ಬಳಕೆದಾರನಿಗೆ ದೊರೆಯುತ್ತಿದ್ದ ಫಸಲು ದಲ್ಲಾಳಿ ಹಾಗೂ ಬೆಲೆ ಇಳಿಕೆ ಸಮಸ್ಯೆಯನ್ನು ಪರಿಹರಿಸಿತ್ತು. ಸಾವಯವ ಕೃಷಿ ಕೂಡಾ ಲಾಭ ಕಾಣುವಂತೆ ಮಾಡಿತ್ತು. ಮಣ್ಣಿನಿಂದಲೇ ಎಲ್ಲರ ಬೆಳವಣಿಗೆ.. ನಾವೇನೇ ಪಡೆದರೂ ಮರಳಿ ಮಣ್ಣಿಗೇ ಅದನ್ನು ಅರ್ಪಿಸಿದರೆ ಅಭ್ಯುದಯ ಕಾಣಬಹುದು ಎಂದವನ ಮಾತು ಎಲ್ಲರ ಕಣ್ತೆರೆಸಿತ್ತು. ಅಂತೂ ಮರಳಿ ಮಣ್ಣಿಗೆ ಬಂದಿದ್ದ
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ