ಯುದ್ದದ ಹೆಸರು ಮನದಲ್ಲಿ ತಲ್ಲಣ ಮೂಡಿಸುತ್ತಿತ್ತು. ಇತ್ತೀಚಿನ ಜಾಗತಿಕ ಬೆಳವಣಿಗೆಗಳ ವಾರ್ತೆ ನಿತ್ಯವೂ ಟಿ. ವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಕಂಡು ಅಗತ್ಯಕ್ಕಿಂತ ಹೆಚ್ಚೇ ಕಳವಳವಾಗುತ್ತಿತ್ತು.
ಇಂದು ಮಾತ್ರವಲ್ಲ ಎಂದಿಗೂ ಯುದ್ದದ ನೆನಪೆಂದರೆ ಅವಳಿಗೆ ಸದಾ ಆತಂಕವೇ.. ರಾಮಾಯಣ, ಮಹಾಭಾರತದ ಯುದ್ಧ, ಕಾರ್ಗಿಲ್ ಯುದ್ಧ, ಹಿರೋಶಿಮಾ, ನಾಗಾಸಾಕಿಯ ದಾಳಿಗಳು ಎಲ್ಲವೂ..
ಅಷ್ಟಕ್ಕೂ ಅವಳಿಗೆ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ. ಯಾರೂ ಇರಲಿಲ್ಲ. ಗಂಡ, ಮಗ ಇಬ್ಬರನ್ನೂ ದೇಶಕ್ಕಾಗಿ ಅರ್ಪಿಸಿದವಳು "ಎಲ್ಲ ತಾಯಂದಿರ ಮಕ್ಕಳೂ ಸುಖವಾಗಿರಲಿ, ಸೌಖ್ಯದಿಂದಿರಲಿ" ಎಂದಷ್ಟೇ ಪ್ರಾರ್ಥಿಸುತ್ತಾಳೆ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ