ಭಾನುವಾರ, ಮೇ 10, 2026

ತಪೋಭಂಗ (ಬೆಳಕಿಂಡಿಯ ಕತೆಗಳು - 14)


"ಓದು ಅಥವಾ ಬರವಣಿಗೆ ತಪಸ್ಸಿನಂತೆ.. ಏಕಾಂತದಲ್ಲಿ ಕುಳಿತು ಬರೆಯಲು ಶುರು ಮಾಡಬೇಕು" ಎಂದುಕೊಂಡು ಬರೆಯಲು ಕುಳಿತಾಗಲೆಲ್ಲಾ ವಿಷಯವೇ ಹೊಳೆಯದೇ ಎದ್ದದ್ದಿದೆ. ಆದರೆ , ಈ ಬಾರಿ ತಲೆಯಲ್ಲಿ ವಿಷಯದ ಹೊಳೆಯೇ ಪ್ರವಾಹದಂತೆ ಮುನ್ನುಗ್ಗಿ ಬರುತ್ತಿತ್ತು. ಸರಿ, ಎಲ್ಲರೂ ಅವರವರ ಪಾಡಿಗೆ ಎಲ್ಲೆಲ್ಲೋ ಹೋಗಿದ್ದಾರೆ ಇದೇ ಸರಿಯಾದ ಸಮಯ.. ಬರೆಯೋಣ, ಎಂದು ತಪಸ್ಸಿಗೆ ಕುಳಿತವಳ ಹಾಗೆ ಬರೆಯಲು ಕುಳಿತರೆ ಒಮ್ಮೆ ಕಸದ ಆಟೋ ಸದ್ದು, ಮತ್ತೊಮ್ಮೆ ಡೋರ್ ಬೆಲ್ ಸದ್ದು, ಮತ್ತೊಮ್ಮೆ ಫೋನ್ ರಿಂಗ್ ಆಗುತ್ತಿತ್ತು ಹೋಗಿ ನೋಡಿದರೆ ಮೊಬೈಲ್ ಕಂಪೆನಿಯವರ ಕರೆ. ಈ ಕರೆಕರೆಗಳಿಂದೆಲ್ಲಾ ತಪ್ಪಿಸಿಕೊಂಡು ಮನೆಗೆಲಸ ಮುಗಿಸಿ ಬರೆಯಲು ಕುಳಿತರೆ ಈ ಬಾರಿ ದೊಡ್ಡ ಕಿಡಿಗೇಡಿ ಇದನ್ನು ತಪ್ಪಿಸಲೆಂದೇ ಬಂದಂತಿತ್ತು.


ಮಗುವಿನ ಬಾಲಲೀಲೆಯನ್ನು ಬದಿಗಿರಿಸಿ ಬರೆಯುವುದಾದರೂ ಹೇಗೆ..?? ಅದರ ನಗುವೇ ಒಂದು ಮಹಾಕಾವ್ಯವಲ್ಲವೇ..


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ