"ಹೊಸ ಮನೆ ಕಟ್ಟಿಸುತ್ತಿದ್ದೇವಲ್ಲಾ..ಆ ಮನೆ ಕಟ್ಟಿಸಿದ ನಂತರ ಆ ಮನೆಗೊಂದು ಸುಂದರವಾದ ಹೆಸರಿಡಬೇಕು. ಶಾಂತಿ ನಿಲಯ ಎಂದು ಇಟ್ಟರೆ ಹೇಗೆ..??" ಎಂಬ ಪ್ರಶ್ನೆಗೆ ಇಡೀ ಮನೆಯಲ್ಲಿ ಗುಸು ಗುಸು ಆರಂಭವಾಗಿ ನಕಾರಾತ್ಮಕ ಉತ್ತರವೇ ದೊರೆತದ್ದು. ಅಪ್ಪನಿಗೆ ಬೇಸರವಾಗುತ್ತದೆ ಎಂಬ ಕಾರಣ ನೀಡಿದ್ದರು.
ಮನೆಯ ಹಿರಿ ಮಗಳ ಹೆಸರು ಅದು. ಅವಳು ಓಡಿ ಹೋಗಿ ಮದುವೆಯಾಗಿ ವರ್ಷಗಳೇ ಕಳೆದಿವೆ. ಆದರೂ, ಯಾರಿಗೂ ಅವಳ ಮೇಲೆ ಕೋಪ ತಣಿದಿಲ್ಲ. ಅಂತಹದರಲ್ಲಿ ಈ ಪ್ರಸ್ತಾಪ ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ಕೊನೆಗೆ, ಅಪ್ಪನ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. "ತಪ್ಪು ಮಾಡಿದವಳಿಗೆ ನಾನು ಶಿಕ್ಷೆ ಕೊಡುತ್ತಿದ್ದೇನೆ ಎಂದುಕೊಂಡು ನಾವೆಲ್ಲರೂ ಶಿಕ್ಷೆ ಅನುಭವಿಸಿದ್ದು ಸಾಕು. ಈ ಮನೆಯಲ್ಲಿ ಶಾಂತಿ ನೆಲಸಲಿ. ಮನೆಗೆ ಶಾಂತಿ ನಿಲಯ ಎಂದೇ ಹೆಸರಿಟ್ಟು ಅವಳನ್ನು ವಾಪಾಸ್ ಕರೆದುಕೊಂಡು ಬರೋಣ" ಎಂದಾಗ ತುಂಬು ಕುಟುಂಬದಲ್ಲಿ ಕಳೆದುಹೋಗಿದ್ದ ಪ್ರಶಾಂತತೆ ವಾಪಾಸ್ ದೊರೆತಿತ್ತು. ಮನೆ ಎಂದರೆ ಜನಗಳ ಒಗ್ಗೂಡುವಿಕೆ ಮಾತ್ರವಲ್ಲ.. ಮನಗಳ ಒಗ್ಗೂಡುವಿಕೆಯೂ..
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ