" ಇಲ್ಲ ಅಮ್ಮ, ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಅದರಲ್ಲೂ ವೇದಿಕೆಯಲ್ಲಿ ಎಲ್ಲರ ಎದುರಿನಲ್ಲಿಯೂ ನಿಂತು ಹಾಡುವಷ್ಟು.. ಪ್ಲೀಸ್ ಅಮ್ಮ ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ. ನಾನಂತೂ ಹಾಡುವುದಿಲ್ಲ " ಎಂದು ಗೋಗರೆಯುತ್ತಾ ಹೇಳಿ ಹೇಳಿ ಸಾಕಾಗಿತ್ತು ಶ್ರಾವಣಿಗೆ. ಅಮ್ಮ ದೀಪ್ತಿಯಂತೂ ಅವಳ ಮಾತಿಗೆ ಸೊಪ್ಪು ಹಾಕದೆ "ನೀನು ಹಾಡಲೇ ಬೇಕು, ಹಾಡುತ್ತೀಯ ಅಷ್ಟೇ.. " ಎಂದು ಖಡಾಖಂಡಿತವಾಗಿ ಹೇಳಿದ್ದರು.
"ನೋಡು ಪುಟ್ಟಿ, ಎಷ್ಟೋ ಜನರಿಗೆ ಪ್ರತಿಭೆ ಇರುತ್ತದೆ. ಆದರೆ, ಅನಾವರಣಗೊಳ್ಳಲು ವೇದಿಕೆಯ ಕೊರತೆ. ಮತ್ತೆ ಹಲವರಿಗೆ ವೇದಿಕೆ ಸಿಕ್ಕರೆ ಪ್ರತಿಭೆಯ ಕೊರತೆ. ನಿನಗೆ ಒಳ್ಳೆಯ ವೇದಿಕೆ ಸಿಕ್ಕಿದೆ, ಅದೂ ನಿನ್ನ ಪ್ರತಿಭೆಯ ಫಲವಾಗಿ. ಭಯಪಡದೆ ಅದನ್ನು ಉಪಯೋಗಿಸಿಕೊಂಡು ಬೆಳೆ. ಮೊದಲಿಗೆ ಕಣ್ಮುಚ್ಚಿ ತನ್ಮಯತೆಯಿಂದ ಹಾಡು ನಂತರ ಅದೇ ಅಭ್ಯಾಸವಾಗುತ್ತದೆ. ಕೃಷ್ಣನ ಮುಂದೆ ತನ್ಮಯತೆಯಿಂದ ಹಾಡುವವಳಿಗೆ ಇದು ಲೆಕ್ಕವೇ" ಎಂದು ಧೈರ್ಯ ಹೇಳಿದ ಫಲವಾಗಿ ಉತ್ತಮ ಗಾಯನ ಪ್ರತಿಭೆಯಾಗಿ ಅನಾವರಣವಾಗಿದ್ದಾಳೆ ಶ್ರಾವಣಿ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ