"ಬರವಣಿಗೆ ಇತ್ತೀಚೆಗೆ ಕುಂಟುತ್ತಾ ಸಾಗುತ್ತಿದೆ. ಕೆಲವೊಮ್ಮೆ ಬರೆಯಲು ಸಾಧ್ಯವೇ ಆಗುವುದಿಲ್ಲ" ಎನ್ನುತ್ತಾ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾಗ ಅಮ್ಮ " ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ.. ನಿನ್ನ ಸಮಯವನ್ನು ನೀನೇ ಹೊಂದಿಸಿಕೊಳ್ಳಬೇಕು ಬದಲಾಗಿ ಅದನ್ನು ಮತ್ತಾರೋ ನಿನಗಾಗಿ ಹೊಂದಿಸಿಕೊಡಲು ಸಾಧ್ಯವಿಲ್ಲ.
ಸದಾ ಕೂತೇ ಇರುವವರಿಗೂ, ದುಡಿಮೆ ಮಾಡುವವರಿಗೂ ದಿನದಲ್ಲಿ ಇರುವುದು 24 ಗಂಟೆಯೇ.. ಸಮಯ ಎಲ್ಲರಿಗೂ ಒಂದೇ. ಅದನ್ನು ಹೊಂದಿಸಿಕೊಳ್ಳಬೇಕಾಗಿರುವುದು ನಾವು. ಏಕೆಂದರೆ, ಆ ಸಮಯ ನಮ್ಮದು, ಕೇವಲ ನಮ್ಮದಷ್ಟೇ. ಅದನ್ನು ಜತನವಾಗಿ ಕಾಯ್ದುಕೊಂಡು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವುದು ಅಥವಾ ಪೋಲು ಮಾಡುವುದರ ಆಯ್ಕೆ ನಮ್ಮದು" ಎಂದಾಗ ಅಮ್ಮನ ಮಾತನ್ನು ಅಕ್ಷರಕ್ಕಿಳಿಸಲು ನಿರ್ಧರಿಸಿ ವಾಪಾಸ್ ಹೋಗುವಾಗ ಬಸ್ಸಿನಲ್ಲಿ ಟೈಪಿಸುತ್ತಾ ಮತ್ತೊಬ್ಬರಿಗೂ ತಲುಪಿಸಿದಳು.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ