ಭಾನುವಾರ, ಮೇ 10, 2026

ವಿಧೇಯತೆಗೆ ಸಿಕ್ಕ ಫಲ (ಬೆಳಕಿಂಡಿಯ ಕತೆಗಳು - 11)


'ಈ ಮನೆಯ ಮುಂದಿನ ಒಂದು ಎಕರೆ ಹೊಲ ನನ್ನ ನಂತರ ರಾಮನಿಗೆ ಸೇರಬೇಕು' ಎಂದು ಅಜ್ಜ ಮಾಡಿಟ್ಟ ವಿಲ್ ನೋಡಿ ಎಲ್ಲರಿಗೂ ಕೋಪ ಬಂದಿತ್ತು ಜೊತೆಗೆ ಅಚ್ಚರಿಯಾಗಿತ್ತು. ಅದಕ್ಕಿಂತ ಅಚ್ಚರಿಯಾಗಿದ್ದು ಕೆಲಸದ ರಾಮನ ಪ್ರತಿಕ್ರಿಯೆ ಕಂಡು "ನನಗಿದು ಬ್ಯಾಡ ಅಯ್ಯಾ.. ಅಯ್ಯನವರ ಸೇವೆ ಮಾಡಿದ ಪುಣ್ಯವೇ ಸಾಕು " ಎನ್ನುತ್ತಿದ್ದವನನ್ನು ಕಂಡಾಗ ಅಜ್ಜ ಮಾಡಿದ್ದು ಸರಿಯಾಗಿಯೇ ಇದೆ ಎಂದೆನಿಸಿತು.


ಅಪ್ಪ, ದೊಡ್ಡಪ್ಪ ಎಲ್ಲರಿಗೂ ಅಜ್ಜನ ವಿಲ್ ಖುಷಿ ತಂದಿತ್ತು. ತಾವೆಲ್ಲರೂ ದೂರದ ಊರಿನಲ್ಲಿ ಇದ್ದಾಗ ತಮ್ಮ ಅಪ್ಪನ ಸೇವೆಯನ್ನು ವಿಧೇಯತೆಯಿಂದ ಮಾಡಿದವನಿಗೆ ಹಣ ಕೊಟ್ಟರೂ ಸ್ವೀಕರಿಸಿರಲಿಲ್ಲ. 

ಅಜ್ಜನಿಗೂ ಬಹುಶಃ ಗೊತ್ತಿದ್ದಿರಬೇಕು. ಅಂತೂ ತಮ್ಮ ವಿಧೇಯ ಮಗನಲ್ಲದ ಮಗನಿಗೂ ಆಸ್ತಿಯಲ್ಲಿ ಭಾಗ ಕೊಟ್ಟಿದ್ದರು.

ಪ್ರತಿಫಲ ಬಯಸದೆ ವಿಧೇಯತೆಯಿಂದ ಸೇವೆ ಮಾಡಿದ್ದಕ್ಕೆ ಅಂತೂ ಫಲ ಸಿಕ್ಕಿತ್ತು


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ