ಯೌವ್ವನದ ಕಾಲದಲ್ಲಿ ತಾನೇ ಸೌಂದರ್ಯವತಿ ಹಮ್ಮಿನಿಂದ ಬೀಗುತ್ತಾ ಸುತ್ತಮುತ್ತಲಿನವರನ್ನು ಮಾತನಾಡಿಸದೆ ತನ್ನದೇ ವಲಯದಲ್ಲಿ ಇದ್ದವಳಿಗೆ ಈಗ ಮುಪ್ಪಿನ ಕಾಲ ಹಾಗೂ ಕೊರೊನಾ ಕಾಲ ಚೆನ್ನಾಗಿಯೇ ಅರಿವು ಮೂಡಿಸಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಅಕ್ಕ-ಪಕ್ಕದವರು ಹೊಂದಿಕೊಂಡು ಬಾಳ್ವೆ ಮಾಡುವಾಗ ತಾನೆಷ್ಟು ಸಣ್ಣತನ ತೋರಿಬಿಟ್ಟೆ ಎನ್ನುವ ಅರಿವಾಗುತ್ತಲಿದೆ.
ಅವಳು ಕಪ್ಪು, ಇವಳು ದಪ್ಪ, ಇವಳು ಹಾಗೆ, ಹೀಗೆ.. ಎನ್ನುತ್ತಾ ದೂರವಿಟ್ಟವರೇ ಇವಳ ಕಷ್ಟ ಕಾಲದಲ್ಲಿ ಆದದ್ದು.. ಅವರೂ ನನ್ನ ಹಾಗೆಯೇ ಬಿಂಕ -ಬಿನ್ನಾಣ ತೋರಿದ್ದರೆ ಎಂದು ನೆನಪಿಸಿಕೊಂಡರೇ ಅವಳಿಗೆ ಭಯವಾಗುತ್ತದೆ. ಸೌಂದರ್ಯ ನಶ್ವರ.. ಹಮ್ಮು-ಬಿಮ್ಮು ತೊರೆದು ಬಾಳ್ವೆ ನಡೆಸಿದರಷ್ಟೇ ಮತ್ತೊಬ್ಬರ ಬದುಕಲ್ಲಿ ಕೊಂಚವಾದರೂ ಸಹಕಾರಿಯಾಗಿ ನಿಂತು ನೆನಪಾಗಿರಬಹುದು ಎಂಬ ಅರಿವಾಗಿದೆ. ಕಾಲದ ಮಹಿಮೆಯೇ ಅಂತಹದ್ದು.. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಹೆಚ್ಚು ಎಂದು ಅರಿವು ಮೂಡಿಸುವಂತಹದ್ದು
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ