"ಕಂದಾ, ನೀನು ಆಡುವಾಗ ನಿನ್ನ ಆಟದ ಮೇಲೆ ಮಾತ್ರ ಗಮನ ಹರಿಸು. ಆಗಷ್ಟೇ ನೀನು ಗೆಲುವಿನ ಹಾದಿಯತ್ತ ಸಾಗಬಹುದು. " ಎಂದು ಹೇಳಿದ್ದ ತಾಯಿಯ ಮಾತು ನವೋದಯ ಬಾಲ್ ಬ್ಯಾಡ್ಮಿಂಟನ್ ತಾರೆ ಶಿಖಾಳಿಗೆ ನೆನಪಾಗತೊಡಗಿತು.
ಆದರೂ, ಅವಳ ಮುಂದಿದ್ದದ್ದು ಈಗಾಗಲೇ ಗೆಲುವು ಸಾಧಿಸಿ ಗೆಲುವಿನ ಉತ್ತುಂಗದಲ್ಲಿ ತೇಲುತ್ತಿದ್ದ ಬ್ಯಾಡ್ಮಿಂಟನ್ ತಾರೆ ದಿಯಾ. ಇಬ್ಬರ ಆಟವೂ ಶುರುವಾಯಿತು. ಶಿಖಾ ಮೊದಲು ನರ್ವಸ್ ಆದುದರಿಂದ ದಿಯಾ ಆ ಸೆಟ್ ನಲ್ಲಿ ಮುನ್ನಡೆದಳು. ದಿಯಾಳಿಗೆ ಆ ಸೆಟ್ ಸರಾಗವಾದರೂ ಮುಂದಿನ ಸೆಟ್ ನಲ್ಲಿ ಗೆದ್ದದ್ದು ಶಿಖಾ. 3-7 ರಿಂದ ಮುನ್ನಡೆ ಸಾಧಿಸಿದ್ದಳು. ಕಡೆಯ ಸೆಟ್ ನಲ್ಲಿಯೂ ಕೂದಲೆಳೆಯ ಅಂತರದಲ್ಲಿ 5-6 ರಿಂದ ಗೆಲುವು ಸಾಧಿಸಿ ಗೆದ್ದಿದ್ದಳು ಶಿಖಾ.
ಅವಳ ಈ ಗೆಲುವಿನ ಗುಟ್ಟಿನ ಕುರಿತು ಎಲ್ಲರಿಗೂ ಹೇಳುವಾಗ ಹೇಳಿದ್ದು "ಎದುರಾಳಿಯ ಕುರಿತು ಗಮನ ನೀಡುವುದಕ್ಕಿಂತ ನಮ್ಮ ಕುರಿತು ಗಮನ ನೀಡಿದರೆ ಗೆಲುವಿನತ್ತ ಮುನ್ನಡೆಯಬಹುದು. ಆಟದಲ್ಲಿಯೂ.. ಬದುಕಲ್ಲಿಯೂ" ಎಂದಾಗ ಸಿಕ್ಕ ಚಪ್ಪಾಳೆ ಮುಗಿಲು ಮುಟ್ಟಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ