"ಪುಟ್ಟಿಗೆ ಕರ್ನಾಟಕ ಜ್ಯೂನಿಯರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಚಿಕ್ಕ ವಯಸ್ಸಿಗೆ ಈ ಪ್ರಶಸ್ತಿ ಪಡೆದ ಮೊದಲ ಮಗು ಅವಳೇ ಅಂತೆ ರೀ.. " ಎಂದ ಸೌಭಾಗ್ಯ ಮಾತಿಗೆ ಹೂಂಗುಟ್ಟಿ "ನಾನು ನಿನಗೆ ಅವತ್ತೇ ಹೇಳಲಿಲ್ವಾ.. ಮಗುವಿನ ಪ್ರತಿಭೆಯನ್ನು ಪೋಷಿಸಿದರೆ ಅವರಲ್ಲೂ ಅಡಗಿರುವ ಕಲಾವಿದರು ಹೊರ ಬರುತ್ತಾರೆ ಅಂತಾ.
ಗೋಡೆ ಮೇಲೆ ಅವಳು ಅವತ್ತು ಬಳಿದಿದ್ದ ಕಲರ್ ನೋಡಿ ಅದೆಷ್ಟು ಕೋಪ ಮಾಡಿಕೊಂಡಿದ್ದೆ ನೀನು... ಗೋಡೆಯೆಲ್ಲಾ ಹಾಳಾಯ್ತು ಅಂತಾ ಕೂಗಾಡುತ್ತಾ ಇದ್ದೆ. ಆದರೆ, ನಾನು ಅವಳನ್ನು ಬೈಯದೆ, ಬದಲಾಗಿ ಕರೆದುಕೊಂಡು ಹೋಗಿ ಡ್ರಾಯಿಂಗ್ ಕ್ಲಾಸ್ ಗೆ ಸೇರಿಸಿ ಅವಳನ್ನು ಪ್ರೋತ್ಸಾಹಿಸಿದ್ದಕ್ಕೆ ನೋಡು ಇವತ್ತು ನಾವು ಹೆಮ್ಮೆ ಪಡುವ ಹಾಗೆ ಮಾಡಿದ್ದಾಳೆ" ಎಂದನು ಶ್ರೀಕರ.
" ಹೌದು ಶ್ರೀ, ಮಕ್ಕಳಲ್ಲಿ ಪುಟ್ಟ ಕಲಾವಿದರು ಇರುತ್ತಾರೆ. ಪೋಷಿಸಿ, ಪ್ರೋತ್ಸಾಹ ನೋಡಿದರೆ ಸರಿಯಾದ ಸಮಯದಲ್ಲಿ ಹೊರಬರುತ್ತಾರೆ. " ಎಂದರು ಸೌಭಾಗ್ಯ.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ