ಶನಿವಾರ, ಮೇ 16, 2026

ಆತ್ಮಹತ್ಯೆ ಅನಿವಾರ್ಯವಾಗಬಾರದು (ಬೆಳಕಿಂಡಿಯ ಕತೆಗಳು - 18)


ಆ ದಾರಿಯಲ್ಲೆಲ್ಲಾ ನಾನು ಓಡಾಡುವಾಗ ಅದ್ಯಾಕೋ ಅಪ್ರಯತ್ನವಾಗಿ ಕಣ್ಣು ಆ ಕಡೆ ಸೆಳೆದುಬಿಡುತ್ತದೆ. ಅದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳ. ಅದೇ ಸೇತುವೆಯ ಮೇಲೆ ನಿಂತಿದ್ದನ್ನು ಕಂಡಿದ್ದವರು ಯಾರೋ ಹೇಳಿದ್ದರು.. ಮಾಣಿ ಅಲ್ಲಿ ನಿಂತಿದ್ದ ಎಂದು. ಸಾಕ್ಷಿಗಾಗಿ ಅವನ ಚಪ್ಪಲಿ, ಮೊಬೈಲ್ , ಪತ್ರ ಎಲ್ಲವೂ ಸಿಕ್ಕಿದ್ದವು. 


ಅವನ ಬಿಸಿನೆಸ್ ಅವನ ಕೈ ಹಿಡಿಯದೆ ನಷ್ಟವಾಗಿತ್ತಂತೆ. ಸಾಲ ಕೂಡಾ ಮಾಡಿದ್ದ. ಅಪ್ಪನೂ ಬದಲಿ ಹೇಳದೆ ಧೈರ್ಯ ತುಂಬಿದ್ದರು. ಎಲ್ಲರಿಗೂ ಕಾಲ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದಿದ್ದರು. ಇದ್ದಕ್ಕಿದ್ದ ಹಾಗೆ ಆ ವಾರದ ಕೊನೆಯಲ್ಲಿ ಬಂದು ಎಲ್ಲರೊಡನೆ ಖುಷಿಯಾಗಿದ್ದವನನ್ನು ಕಂಡು ಎಲ್ಲವೂ ಸರಿಯಾಯಿತೆಂದುಕೊಳ್ಳುವಷ್ಟರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ.


ಪ್ರತಿ ಸೋಲಿಗೂ ಉತ್ತರವಾಗಿ ಗೆಲ್ಲುವ ಛಲ ಅನಿವಾರ್ಯವಾಗಬೇಕೋ ಬದಲಿಗೆ ಹೇಡಿತನವಲ್ಲ. ಬದುಕಿಗೆ ಸವಾಲಾಗಿ ನಿಲ್ಲುವುದು ಅನಿವಾರ್ಯವಾಗಬೇಕೋ ಹೊರತು ಬೆನ್ನು ತೋರಿಸಿ ಓಡುವುದಲ್ಲ. ಸಾಧನೆ ಅನಿವಾರ್ಯವಾಗಬೇಕೋ ಹೊರತು ಆತ್ಮಹತ್ಯೆಯಲ್ಲ. ಇದನ್ನು ಪ್ರತಿ ಬಾರಿ ನಿಂತು ಸಾರಿ ಸಾರಿ ಹೇಳಬೇಕೆನ್ನಿಸುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ