ಭಾನುವಾರ, ಜುಲೈ 19, 2026

ಈ ಶಿಕ್ಷೆ ಸಾಲದು.. (ಬೆಳಕಿಂಡಿಯ ಕತೆಗಳು - 56)

 


ಆತ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವನು ಎಂಬ ಕಾರಣಕ್ಕೆ ಆತನಿಗೆ ಶಿಕ್ಷೆ ಕಡಿಮೆಯಾದರೆ ಆತ ಮಾಡಿದ್ದ ಪಾಪದ ಹೊರೆ ಕಡಿಮೆಯದ್ದಾ..?? ಜೀವಾವಧಿ ಶಿಕ್ಷೆಯಿಂದ, ಮರಣ ದಂಡನೆಯಿಂದ ತಪ್ಪಿಸಬೇಕಾದರೆ ಇದೊಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ತಪ್ಪಿಸುತ್ತಾರಲ್ಲಾ.. ಅವರ ಮನಸ್ಸಿನಲ್ಲಿ ದಯೆ, ಮಾನವೀಯತೆ ಎಲ್ಲವೂ ಸತ್ತು ಯಾವ ಕಾಲವಾಗಿ ಹೋಗಿದೆಯೋ.. ಹದಿನೆಂಟು ವರ್ಷ ಕಳೆದಂತೆ ಆತನಿಗೆ ಜೈಲಿನಿಂದ ಬಿಡುಗಡೆ. ಅಷ್ಟು ದೊಡ್ಡ ತಪ್ಪು ಮಾಡಿ ಆತ ಒಂದೇ ವರ್ಷಕ್ಕೆ ಹೊರಬರುತ್ತಾನೆ. ಅವನ ಮನಸ್ಸು ಸಹಾ ಪರಿವರ್ತನೆಯಾಗಿರಬಹುದು.. ಆದರೆ, ಆ ಮುಗ್ಧ ಹೆಣ್ಣು ಮಗು ಯಾವ ತಪ್ಪು ಮಾಡಿತ್ತು..??


ಈ ದುರುಳರ ಅಟ್ಟಹಾಸಕ್ಕೆ, ವಿಕೃತಿಗೆ ಸಿಲುಕಿ ಸತ್ತ ಆ ಮಗು ಯಾವ ತಪ್ಪು ಮಾಡಿತ್ತು..?? ಈತನ ವಯಸ್ಸು ಅಲ್ಲಿ ತಪ್ಪು ಮಾಡುವಾಗ ಮುಖ್ಯವೇ ಆಗಿರಲಿಲ್ಲವೇ..??


ಕಡೆಗೂ, ಕೋರ್ಟು ತನ್ನ ನಿರ್ಧಾರ ಬದಲಿಸಿ ಆತನಿಗೂ ಜೀವಾವಧಿ ಶಿಕ್ಷೆ ನೀಡಿತು. ಆದರೂ, ನನಗನ್ನಿಸಿದ್ದು ಆತ್ಯಾಚಾರಿಗಳಿಗೆ ಆ ಶಿಕ್ಷೆಯೂ ಸಾಲದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ