ಶನಿವಾರ, ಮೇ 30, 2026

ಮನಸ್ಸಿನಂತೆ ಮಹಾದೇವ (ಬೆಳಕಿಂಡಿಯ ಕತೆಗಳು - 27)


 "ಶುಭ ಶುಕ್ರವಾರ ಎಂದು ಸ್ಪೆಷಲ್ ಏನಿಲ್ಲ, ಎಲ್ಲಾ ವಾರದಂತೆ ಇದೂ ಒಂದು ದಿನ ಅಷ್ಟೇ.. ಈ ಇಂಟರ್ವ್ಯೂ ಕೂಡಾ ಆಗಲಿಲ್ಲ ಅಮ್ಮ" ಎಂದು ಒಬ್ಬ ಮಗ ಬಂದರೆ


"ಶುಭ ಶುಕ್ರವಾರ ಎಂದುಕೊಂಡಿದ್ದೆ, ಶುಭವೇ ಆಗಿ ಇಂಟರ್ವ್ಯೂ ಪಾಸ್ ಆಯ್ತು. ಆಶೀರ್ವಾದ ಮಾಡಮ್ಮ" ಎಂದು ಬಂದ ಇನ್ನೊಬ್ಬ ಮಗ.


ಅವಳಿಗಳಾದರೂ ಯೋಚನೆಯಲ್ಲಿ ತದ್ವಿರುದ್ಧದ ಮಕ್ಕಳಿಗೆ

"ಶುಭ- ಅಶುಭ ವಾರದ ದಿನಗಳಲ್ಲಿಲ್ಲ. ನಿಮ್ಮ ಮನಸ್ಸಿನ ಆಲೋಚನೆಯಲ್ಲಿದೆ. ಮನಸ್ಸಿನಂತೆ ಮಹಾದೇವ. ಇಬ್ಬರಿಗೂ ಒಳ್ಳೆಯದಾಗಲಿ" ಎಂದು ಹರಸಿದರು. ಇಬ್ಬರೂ ಮತ್ತಷ್ಟು ಪಾಸಿಟಿವ್ ಆಲೋಚನೆ ಜೊತೆಗೆ ಮ್ಯಾನಿಫೆಸ್ಟೇಷನ್ ಕುರಿತು ಚರ್ಚಿಸುತ್ತಿದ್ದಾರೆ ಈಗ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ