ಹಾಸ್ಟೆಲ್ ಗೆ ಹೋದ ಸುಮುಖನಿಗೆ ಮೊಬೈಲ್ ಇರದಿದ್ದಕ್ಕೆ ಹತಾಶೆಯಾಗಿತ್ತು. ಸೋಶಿಯಲ್ ಮೀಡಿಯಾ, ಚಾಟಿಂಗ್ ಎಲ್ಲವನ್ನೂ ಮಿಸ್ ಮಾಡಿಕೊಂಡನಾದರೂ.. ಕ್ರಮೇಣ ಓದಿನತ್ತ ಗಮನ ಹರಿಸಿದ. ಮೊದಲ ಸೆಮಿಸ್ಟರ್ ಪರೀಕ್ಷೆಯ ಅಂಕಗಳು ಆತನ ಸಾಮರ್ಥ್ಯವನ್ನು ಆತನಿಗೆ ಅರಿವಾಗಿಸಿ, ಪೋಷಕರಿಗೂ ಖುಷಿ ತಂದಿತ್ತು. ಎಲ್ಲರಿಂದ ಪಡೆದ ಪ್ರಶಂಸೆಯ ಮುಂದೆ ಮೊಬೈಲ್ ಸಿಗದ ತನ್ನ ಹತಾಶೆ ಎಷ್ಟು ಅರ್ಥಹೀನ ಎನ್ನಿಸಿತ್ತು. ಅಂದು ತನ್ನ ಮನಸನ್ನು ಬದಲಾಯಿಸಿದ ವಾರ್ಡನ್ ಗೆ ಧನ್ಯವಾದಗಳನ್ನು ಹೇಳಲು ಮರೆಯಲಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ